ರಕ್ತದಾನ ಮಾಡಿ ಸಾಮಾಜಿಕ ಜವಾಬ್ದಾರಿ ಮೆರೆದ ಶಿರ್ವ ಪರಿಸರದ ನಾಗರಿಕರು
Team Udayavani, Apr 28, 2020, 5:11 PM IST
ಕೋವಿಡ್ ಮಹಾಮಾರಿಯಿಂದ ಆಸ್ಪತ್ರೆಗಳಲ್ಲಿ ತುರ್ತು ರಕ್ತದ ಅವಶ್ಯಕತೆ ಇರುವುದರಿಂದ ಸಾಮಾಜಿಕ ಜವಾಬ್ದಾರಿಯುತ ಸಮಾನ ಮನಸ್ಕರು, ಶಿರ್ವ ಪರಿಸರದ ನಾಗರಿಕರು ಮತ್ತು ಶಶಿ ಕೆಟರರ್ಸ್ ಸಿಬ್ಬಂದಿ ವರ್ಗ ಇವರು ಜಂಟಿಯಾಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತ ನಿಧಿಯ ಸಹಯೋಗದೊಂದಿಗೆ ಶಿರ್ವ ಕೊಲ್ಲಬೆಟ್ಟು ಸಂಘಮಿತ್ರದ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರಕ್ಕೆ ಶಾಸಕ ಲಾಲಾಜಿ ಆರ್ ಮೆಂಡನ್ ಚಾಲನೆ ನೀಡಿದರು.