ಶಬರಿಮಲೆ ಹೋರಾಟ, ಏನಂತಾರೆ ಟ್ವಿಟಿಜನ?
Team Udayavani, Jan 5, 2019, 5:53 AM IST
ಶ್ರೀ ಶ್ರೀ ರವಿಶಂಕರ ಗುರೂಜಿ
ಕೋಮು ಸಾಮರಸ್ಯ ಮತ್ತು
ಪ್ರಗತಿಯಿಂದ ಗುರುತಿಸಿಕೊಂಡಿರುವ ಕೇರಳ ಶಬರಿಮಲೆ ವಿಚಾರದಿಂದಾಗಿ ಹೊತ್ತುರಿಯುತ್ತಿರುವುದು ಬೇಸರ ಸಂಗತಿ. ಎಲ್ಲರೂ ಶಾಂತಿ ಪಾಲಿಸಬೇಕು ಮತ್ತು ಹಿಂಸಾಚಾರದಿಂದ ಹಿಂದೆ ಸರಿಯಬೇಕೆಂದು ನಾನು ಕರೆ ನೀಡುತ್ತಿದ್ದೇನೆ.
ತೂಜಾನೇನಾ
ಅದೇಕೆ ಹಿಂದೂಯೇತರರು ಮತ್ತು ಕಮ್ಯುನಿಸ್ಟ್ರಂಥ ನಾಸ್ತಿಕರು ಶಬರಿಮಲೆ ವಿಚಾರದಲ್ಲಿ ಈ ಪರಿ ಹಸ್ತಕ್ಷೇಪ ಮಾಡುತ್ತಿದ್ದಾರೆ? ಏಕೆ ಅವರು ರಾಜಕೀಯ ಹೇಳಿಕೆಗಳನ್ನು ಕೊಡಲಾರಂಭಿಸಿದ್ದಾರೆ?
ಹರೀಶ್ ಎಚ್ಎನ್
ಕೇರಳ ದೇವರ ನಾಡಲ್ಲ, ದೆವ್ವಗಳ
ನಾಡಾಗಿ ಬದಲಾಗಿದೆ. ಅಲ್ಲಿನ ಪರಿಸ್ಥಿತಿ ನಿಜಕ್ಕೂ ಬೇಸರ ಮೂಡಿಸುವಂತಿದೆ. ಅಯ್ಯಪ್ಪನ ದರ್ಶನ ಪಡೆಯಲು ಸಿದ್ಧತೆ ನಡೆಸಿದ್ದೇನೆ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಲಿ ಎಂದು ಆಶಿಸುತ್ತೇನೆ.
ಆರತಿ ಸಿ
ರಾಷ್ಟ್ರೀಯ ಮಾಧ್ಯಮಗಳು ಮತ್ತು ಬುದ್ಧಿಜೀವಿಗಳು ಹಿಂದೂಗಳನ್ನು ಎಷ್ಟು ದ್ವೇಷಿಸುತ್ತಾರೆ ಎನ್ನುವುದು ಸ್ಪಷ್ಟವಾಗುತ್ತಿದೆ. ಅವರು ಶಬರಿಮಲೆ ಭಕ್ತರ ಹೋರಾಟವನ್ನು ಕಾಶ್ಮೀರದ ಕಲ್ಲುತೂರಾಟಕ್ಕೆ ಹೋಲಿಸುತ್ತಿರುವುದರಲ್ಲೇ ಅವರ ಈ ದ್ವೇಷ ಸ್ಪಷ್ಟವಾಗಿ ಕಾಣಿಸುತ್ತಿದೆ.
ರಾಗೇಶ್ ಅಲಪ್ಪುರ
ಪಿಣರಾಯಿ ವಿಜಯನ್ಗೆ ಅಧಿಕಾರದ ಅಮಲೇರಿದೆ. ಕೇರಳದ ಹಿಂದೂಗಳ ಭಾವನೆಗಳೊಂದಿಗೆ ಅವರು
ಕ್ರೂರ ಆಟವಾಡುತ್ತಿದ್ದಾರೆ.
ಚುನಾವಣೆಯಲ್ಲಿ ಅವರಿಗೆ ಮತದಾರರು ದೊಡ್ಡ ಪಾಠವನ್ನೇ ಕಲಿಸಲಿದ್ದಾರೆ.
ಕುವಲಾಯಮಾಲಾ
ಈ ಸೆಕ್ಯುಲರ್ ಪ್ರಜಾಪ್ರಭುತ್ವದಲ್ಲಿ ಹಿಂದುಗಳ ನಿಜ ಸ್ಥಿತಿ ಹೇಗಿದೆ ಎನ್ನುವುದನ್ನು ಶಬರಿಮಲೆ ಘಟನೆ ತೋರಿಸುತ್ತಿದೆ. ಸತ್ಯವೇನೆಂದರೆ, ಅಧಿಕಾರ ಮತ್ತು ಶ್ರೀಮಂತಿಕೆ ಇರುವ ಹಿಂದೂಗಳು ದೇಶವನ್ನು ನಾಶ ಮಾಡಲು ನಿಂತಿರುವ ಶಕ್ತಿಗಳೊಂದಿಗೆ ಕೈಜೋಡಿಸುತ್ತಾರೆ.
ಸುಮಿತ್ ಎಲ್ಇ
ಅನ್ಯ ಧರ್ಮೀಯರು ತಮ್ಮ ಧರ್ಮ ರಕ್ಷಣೆಗೆ ಪ್ರಯತ್ನಿಸಿದರೆ ಅದು ಮಾನವ ಹಕ್ಕು ಹೋರಾಟ-ಅಭಿವ್ಯಕ್ತಿ ಸಾತಂತ್ರÂದ ಹೋರಾಟ ಎಂದು ಕರೆಸಿಕೊಳ್ಳುತ್ತದೆ. ಹಿಂದೂಗಳು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದರೆ ನಮ್ಮನ್ನು ಭಕ್ತರು, ಕೋಮುವಾದಿಗಳು, ಅವಿದ್ಯಾವಂತರು ಎನ್ನಲಾಗುತ್ತದೆ. ವ್ಯಂಗ್ಯದ ವಿಷಯವೆಂದರೆ, ಹಿಂದೂಗಳನ್ನು ಅವಹೇಳನ ಮಾಡುವವರೆಲ್ಲ ಹಿಂದೂಗಳೇ.
ಪದ್ಮ ಪಿಳ್ಳೆ„
ಅಯ್ಯಪ್ಪನ ಭಕ್ತರ ಹೃದಯ ಒಡೆದಿದೆ. ಮಕರಜ್ಯೋತಿಗಾಗಿ ದೀಕ್ಷೆ ಪಡೆದ ಅನೇಕರು ಕಣ್ಣೀರಿಡುತ್ತಾ ತಮ್ಮ ಮುದ್ರೆಯನ್ನು ತೆಗೆದುಹಾಕಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿರುವ ಪ್ರತಿ ರಾಜಕಾರಣಿಯೂ ನಮ್ಮ ಶತ್ರು. ಇವರೆಲ್ಲ ದೊಡ್ಡ ಬೆಲೆ ತೆರಲಿದ್ದಾರೆ.
ಮಧುವಂತಿ ಗುಪ್ತ
ಶಬರಿಮಲೆಯಲ್ಲಿ ಬದಲಾವಣೆಯನ್ನು ನೋಡಲು ಬಯಸುತ್ತಿರುವವರು ಯಾರು? ಅಯ್ಯಪ್ಪನ ಮಹಿಳಾ ಭಕ್ತರೇ? ಹೌದು ಎನ್ನುವುದಾದರೆ, ಸುಪ್ರೀಂ ಕೋರ್ಟ್ನ ತೀರ್ಪಿನ ನಂತರ ದರ್ಶನಕ್ಕಾಗಿ ಮುಗಿಬೀಳಲು ಕೇವಲ ಬೆರಳೆಣಿಕೆಯ ಮಹಿಳೆಯರಷ್ಟೇ ಏಕೆ ಪ್ರಯತ್ನಿಸುತ್ತಿದ್ದಾರೆ? ಪ್ರವೇಶಕ್ಕೆ ಅವಕಾಶ ನೀಡಬೇಡಿ, ಸಂಪ್ರದಾಯವನ್ನು ರಕ್ಷಿಸಿ ಎಂದು ಹೋರಾಡುತ್ತಿರುವ ಮಹಿಳೆಯರ ಸಂಖ್ಯೆಯೇ ಅಧಿಕವಿದೆಯಲ್ಲ?
ನಿನಾಂತ್ ಕೈವಲ್ಯಂ
ದೇವರ ಅಸ್ತಿತ್ವವನ್ನು ಸದಾ ನಿರಾಕರಿಸುವ, ಹಿಂದೂ ಸಂಪ್ರದಾಯಗಳನ್ನು ತೀವ್ರವಾಗಿ ವಿರೋಧಿಸುವ ಕಮ್ಯುನಿಸ್ಟರು ಮಹಿಳೆಯರಿಗೆ ಅಯ್ಯಪ್ಪ ದರ್ಶನ ಕೊಡಿ ಎಂದು ಆಗ್ರಹಿಸುತ್ತಿರುವುದೇಕೆ? ದೇವರೇ ಇಲ್ಲ, ಹಿಂದೂ ಸಂಪ್ರದಾಯಗಳು ಅರ್ಥಹೀನ ಎನ್ನುವವರು ನೀವಲ್ಲವೇ?
ನೀವೂ ನಮಗೆ ಟ್ವೀಟ್ ಮಾಡಿ
@UdayavaniNews
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ