ಅಂದು ಹುಟ್ಟಿಕೊಂಡ ಅಪ್ಪಟ ದೇಶಿ ಉತ್ಪನ್ನ ನಟರಾಜ ಪೆನ್ಸಿಲ್ ಮರೆಯಲು ಸಾಧ್ಯವೇ?

ಅದು ಮರವನ್ನು ಉಪಯೋಗಿಸಿ ಪೆನ್ಸಿಲ್ ತಯಾರಿಬೇಕಾಗಿದ್ದರಿಂದ ಖಾಸಗಿ ಪ್ರದೇಶದಲ್ಲಿ ಮರವನ್ನು ಬೆಳೆಸುತ್ತಿದ್ದರು.

ನಾಗೇಂದ್ರ ತ್ರಾಸಿ, Dec 10, 2020, 5:40 PM IST

ಅಂದು ಹುಟ್ಟಿಕೊಂಡ ಅಪ್ಪಟ ದೇಶಿ ಉತ್ಪನ್ನ ನಟರಾಜ ಪೆನ್ಸಿಲ್ ಮರೆಯಲು ಸಾಧ್ಯವೇ?

ಇಂದು ಬಹುತೇಕ ಎಲ್ಲವೂ ಡಿಜಿಟಲ್ ಮಯ ಆಗತೊಡಗಿದೆ. ಹೀಗಾಗಿ ಪೆನ್ನು, ಪೆನ್ಸಿಲ್ ನಲ್ಲಿ ಬರೆಯುವ ಅವಶ್ಯಕತೆ ಕಡಿಮೆ, ಈಗ ಎಲ್ಲವೂ ಕಂಪ್ಯೂಟರ್ ಕೀಲಿ ಮಣೆ ಮೂಲಕ ಅಥವಾ ಮೊಬೈಲ್ ನಲ್ಲಿಯೇ ಎಲ್ಲವನ್ನೂ ದಾಖಲಿಸಿಕೊಂಡುಬಿಡಬಹುದು. ಏನೇ ಬದಲಾವಣೆ ಆಗಲಿ ನಮಗೆ ಕೆಲವೊಂದು ವಿಷಯ, ವಸ್ತುಗಳನ್ನು ಮರೆಯಲು ಸಾಧ್ಯವೇ? ಅದರಲ್ಲಿಯೂ ಕಪ್ಪು ಹಾಗೂ ಕೆಂಪು ಬಣ್ಣದ ನಟರಾಜ್ ಪೆನ್ಸಿಲ್ ಹೇಗೆ ಮರೆತು ಹೋಗುತ್ತದೆ. ಅದು ಹಿಂದಿನ ಹಾಗೂ ಇಂದಿನ ಯುವ ಪೀಳಿಗೆ ಜತೆಗೆ ಹಾಸು ಹೊಕ್ಕಾಗಿಬಿಟ್ಟಿದೆ!

ಬಾಲ್ಯದ ನೆನಪು ಬಂದಾಗ ನಮಗೆ ತಕ್ಷಣವೇ ಕಣ್ಮುಂದೆ ಬರುವುದು ನಟರಾಜ ಪೆನ್ಸಿಲ್…ಅದಕ್ಕಾಗಿಯೇ ಈಗಲೂ “ನಟರಾಜ ಫಿರ್ ಸೆ ಚಾಂಪಿಯನ್” ಎಂಬ ಜಾಹೀರಾತು ನೋಡಿದ ನೆನಪಿರಬಹುದು. ದುಂಡು, ದುಂಡು ಆಕ್ಷರ ಬರೆಯುವ ಆಗುವ ಸಂತಸ, ಶಾರ್ಪರ್ ನಲ್ಲಿ ಪೆನ್ಸಿಲ್ ನ ಮೊನೆಯನ್ನು ಹರಿತಗೊಳಿಸಿ ಚೂಪಾಗಿ ಮಾಡುವುದು ಇವೆಲ್ಲವೂ ಇನ್ನೂ ಸ್ಮೃತಿಪಟಲದಿಂದ ಮಾಸದ ನೆನಪುಗಳಾಗಿ ಉಳಿದುಬಿಟ್ಟಿದೆ ಎಂಬುದು ಅತಿಶಯೋಕ್ತಿಯಲ್ಲ.

ಅಂದು ಎಲ್ಲರ ಬಳಿಯೂ ನಟರಾಜ ಪೆನ್ಸಿಲ್ ಇರುತ್ತಿತ್ತು. ನಟರಾಜ 621 ಎಚ್ ಬಿ ಪೆನ್ಸಿಲ್ ಅತೀ ಹೆಚ್ಚು ಜನಪ್ರಿಯವಾಗಿತ್ತು..ಅಷ್ಟೇ ಅಲ್ಲ ಅದು ಇಂದಿಗೂ ತನ್ನ ಬೇಡಿಕೆಯನ್ನು ಉಳಿಸಿಕೊಂಡಿದೆ. ಇಂದು ಇಡೀ ಜಗತ್ತೇ ಕೋವಿಡ್ 19 ವೈರಸ್ ಗೆ ತತ್ತರಿಸಿ ಹೋಗಿದೆ. ಇಡೀ ದೇಶವೇ ಲಾಕ್ ಡೌನ್ ಆದ ಸನ್ನಿವೇಶಕ್ಕೆ ನಾವು
ಸಾಕ್ಷಿಯಾಗಿದ್ದೇವೆ. ಅಲ್ಲದೇ ವಿದೇಶಿ ವಸ್ತುಗಳ ಬಳಕೆ ಕಡಿಮೆ ಮಾಡಿ, ಸ್ವದೇಶಿ ವಸ್ತುವಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸ್ವಾವಲಂಬಿಯಾಗುವ ಮೂಲಕ ದೇಶಿ ಉತ್ಪನ್ನದತ್ತ ದೃಷ್ಟಿ ಹಾಯಿಸಬೇಕು ಎಂದು ಪ್ರಧಾನಿ ಮೋದಿ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದ ವೇಳೆ ಉಲ್ಲೇಖಿಸಿದ್ದರು. ಅರೇ ನಟರಾಜ ಪೆನ್ಸಿಲ್ ಗೂ, ಕೋವಿಡ್ ಗೂ, ಪ್ರಧಾನಿ ಮಾತಿಗೆ ಏನು ಸಂಬಂಧ ಅಂತ ಹುಬ್ಬೇರಿಸಬೇಡಿ. ಯಾಕೆಂದರೆ ವಿದೇಶಿ ಪೆನ್ಸಿಲ್, ವಿದೇಶಿ ವಸ್ತುಗಳ ಅಬ್ಬರದ ನಡುವೆ ನಲುಗುತ್ತಿದ್ದ ವೇಳೆಯೇ ದೇಶಿಯವಾಗಿ ರೂಪುಗೊಂಡಿದ್ದೇ ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈವೇಟ್ ಲಿಮಿಟೆಡ್!

ಅಂದು ಹುಟ್ಟಿಕೊಂಡ ಅಪ್ಪಟ ದೇಶಿ ಉತ್ಪನ್ನ ನಟರಾಜ ಪೆನ್ಸಿಲ್!
ಸ್ವಾತಂತ್ರ್ಯದ ಮೊದಲು ಭಾರತದಲ್ಲಿ ಪೆನ್ಸಿಲ್ ಉತ್ಪಾದಿಸಲಾಗುತ್ತಿತ್ತು. ಆದರೆ ಈ ಕಂಪನಿಗಳು ಆಮದಾಗುತ್ತಿದ್ದ ಪೆನ್ಸಿಲ್ ನಿಂದಾಗಿ ಮಾರುಕಟ್ಟೆಯಲ್ಲಿ ಭಾರೀ ಸ್ಪರ್ಧೆಯಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದವು. ಎರಡನೇ ಜಾಗತಿಕ (1930-40) ಯುದ್ಧಕ್ಕಿಂತ ಮೊದಲು ಬ್ರಿಟನ್, ಜರ್ಮನಿ ಮತ್ತು ಜಪಾನ್ ನಿಂದ ಭಾರತಕ್ಕೆ ಬರೋಬ್ಬರಿ 6.5ಲಕ್ಷ ಪೆನ್ಸಿಲ್ ಗಳನ್ನು ಆಮದು ಮಾಡಿಕೊಳ್ಳಲಾಗುತ್ತಿತ್ತು. ಬಳಿಕ ಯುದ್ಧದ ಸಂದರ್ಭದಲ್ಲಿ ಈ ಸಂಖ್ಯೆ ಏರುಪೇರಾಗಿತ್ತು. ಕೊನೆಗೆ 1944-45ರ ಹೊತ್ತಿಗೆ ಆಮದಾಗುತ್ತಿದ್ದ ಪೆನ್ಸಿಲ್ 2.3ಲಕ್ಷಕ್ಕೆ ಇಳಿದಿತ್ತು. ಇದು ದೇಶೀಯ ಮಾರುಕಟ್ಟೆ ಬೆಳವಣಿಗೆಗೆ ಸಿಕ್ಕ ಟರ್ನಿಂಗ್ ಪಾಯಿಂಟ್ ಎಂಬುದು ಮನಗಾಣಬೇಕು.

ಅಂದು ವಿದೇಶದಿಂದ ಪೆನ್ಸಿಲ್ ಆಮದು ಭಾರೀ ಪ್ರಮಾಣದಲ್ಲಿ ಇಳಿಕೆಯಾದ ನಂತರ ಕೋಲ್ಕತಾ, ಬಾಂಬೆ ಮತ್ತು ಮದ್ರಾಸ್ ಗಳಲ್ಲಿ ಹಲವಾರು ಪೆನ್ಸಿಲ್ ಉತ್ಪಾದಕರು ಹುಟ್ಟಿಕೊಂಡುಬಿಟ್ಟಿದ್ದರು. ಈ ಸಂದರ್ಭದಲ್ಲಿ ಪೆನ್ಸಿಲ್ ಉತ್ಪಾದಕರು ಭಾರತ ಸರ್ಕಾರ ತಮ್ಮ ದೇಶಿ ಉತ್ಪನ್ನ ರಕ್ಷಿಸುವಂತೆ ಮನವಿ ಮಾಡಿಕೊಂಡಿದ್ದರು. ಆಮದು ಕಡಿಮೆಯಾಗಿದ್ದು, ದೇಶಿ ಇಂಡಸ್ಟ್ರಿ ನಿಧಾನಕ್ಕೆ ಆರಂಭಗೊಂಡರೆ ಚೇತರಿಕೆಯಾಗಲಿದೆ ಎಂದು ಮನವರಿಕೆ ಮಾಡಿದ್ದರು. ಆದರೆ ಈ ಕಂಪನಿಗಳು ತಯಾರಿಸಿದ್ದ ಪೆನ್ಸಿಲ್ ಉತ್ಪನ್ನದ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬರಲಾರಂಭಿಸಿದ್ದವು. ಅದೇನೆಂದರೆ ವಿದೇಶಿ ಪೆನ್ಸಿಲ್ ಗುಣಮಟ್ಟಕ್ಕಿಂತ ಕಳಪೆಯಷ್ಟೇ ಅಲ್ಲ, ಬೆಲೆಯೂ ತುಂಬಾ ಹೆಚ್ಚು ಎಂಬುದಾಗಿತ್ತು.

 

ಈ ಎಲ್ಲಾ ಜಟಾಪಟಿ ಬಳಿಕ ಆಹ್ಲಾದಕರ ಕೆಂಪು ಮತ್ತು ಕಪ್ಪು ಪಟ್ಟಿ ಇರುವ ಈ ಉತ್ಪನ್ನ ತಯಾರಿಸಿದ್ದು ಹಿಂದೂಸ್ತಾನ್ ಪೆನ್ಸಿಲ್ಸ್ ಪ್ರೈ.ಲಿಮಿಟೆಡ್. ಈ ಕಂಪನಿ 1958ರಲ್ಲಿ ವಾಣಿಜ್ಯ ನಗರಿ ಬಾಂಬೆಯಲ್ಲಿ ಬಿ.ಜೆ.ಸಂಘ್ವಿ, ರಾಮ್ ನಾಥ್ ಮೆಹ್ರಾ ಹಾಗೂ ಮನ್ಸೂಕಾನಿ ಸೇರಿದಂತೆ ಮೂವರು ಜತೆಗೂಡಿ ಆರಂಭಿಸಿದ್ದರು. ಜರ್ಮನಿಯಲ್ಲಿನ ಪೆನ್ಸಿಲ್ ವಹಿವಾಟಿನ ಗುಟ್ಟನ್ನು ತಿಳಿದಿದ್ದರಿಂದ ವ್ಯವಹಾರಕ್ಕೆ ಇಳಿದಿದ್ದರು, ಸಂಘ್ವಿ ಅವರು ಫ್ಯಾಕ್ಟರಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದರು.

ಹಿಂದೂಸ್ತಾನ್ ಪೆನ್ಸಿಲ್ ಸ್ಥಳೀಯವಾಗಿಯೇ ತಯಾರಾಗುತ್ತಿತ್ತು. ಅದು ಮರವನ್ನು ಉಪಯೋಗಿಸಿ ಪೆನ್ಸಿಲ್ ತಯಾರಿಬೇಕಾಗಿದ್ದರಿಂದ ಖಾಸಗಿ ಪ್ರದೇಶದಲ್ಲಿ ಮರವನ್ನು ಬೆಳೆಸುತ್ತಿದ್ದರು. ಪರಿಸರ ಸಮತೋಲನ ಸರಿದೂಗಿಸಿಕೊಂಡು ಹೋಗುತ್ತಿದ್ದ ಹಿಂದೂಸ್ತಾನ್ ಕಂಪನಿ ಐದು ಪ್ರದೇಶಗಳಲ್ಲಿ ಹತ್ತು ಪ್ಲ್ಯಾಂಟ್ ಹೊಂದಿತ್ತು. ಸುಮಾರು 50 ದೇಶಗಳಿಗೆ ಪೆನ್ಸಿಲ್ ಅನ್ನು ರಫ್ತು ಮಾಡುತ್ತಿತ್ತು!

ಹಿಂದೂಸ್ತಾನ್ ಕಂಪನಿ ನಟರಾಜ ಮತ್ತು ಅಪ್ಸರಾ ಬ್ರ್ಯಾಂಡ್ ನ ಪೆನ್ಸಿಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಇದರಲ್ಲಿ ಉತ್ತಮ ದರ್ಜೆಯ ಗ್ರಾಫೈಟ್ ಅನ್ನು ಬಳಸಲಾಗುತ್ತಿತ್ತು. ಇದರಿಂದಾಗಿಯೇ ಭಾರತದಲ್ಲಿ ಹಿಂದೂಸ್ತಾನ್ ಕಂಪನಿ ವಿಶ್ವಾಸ ಗಳಿಸಿತ್ತು. ಪೆನ್ಸಿಲ್ ಅನ್ನು ದೊಡ್ಡ ಪ್ರಮಾಣದಲ್ಲಿಯೇ ಬಳಕೆ ಮಾಡಲಾಗುತ್ತಿದೆ ಅದು ವಿದ್ಯಾರ್ಥಿಗಳು ಮಾತ್ರವಲ್ಲ, ವಾಸ್ತುಶಿಲ್ಪಿಗಳು, ಕಾರ್ಪೆಂಟರ್ಸ್, ಚಿತ್ರಕಲಾವಿದರು ಮತ್ತು ಕಚೇರಿಗಳಲ್ಲಿ ಉಪಯೋಗಿಸುತ್ತಾರೆ…

ಟಾಪ್ ನ್ಯೂಸ್

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.