ನೆನಪಿರಲಿ..ನಿಮ್ಮನ್ನು ಪ್ರಶ್ನಿಸುವವರು ನೀವೇ ಆಗಬೇಕು..!
ಪ್ರಶ್ನೆಗಳು ನಮ್ಮನ್ನು ಕೇಳಿಕೊಳ್ಳುವುದು ಅದು ನಮ್ಮನ್ನು ನಾವು ಸಮೀಕ್ಷಿಸಿಕೊಳ್ಳುವುದಲ್ಲ.
ಶ್ರೀರಾಜ್ ವಕ್ವಾಡಿ, Apr 9, 2021, 10:00 AM IST
ಸಾಂದರ್ಭಿಕ ಚಿತ್ರ
ಇಂಗ್ಲಿಷ್ ನಲ್ಲಿ ಒಂದು ಮಾತಿದೆ. ‘ಆಸ್ಕ್ ಯುವರ್ ಸೆಲ್ಫ್ ಫಸ್ಟ್, ರಿಸೀವ್ ದಿ ಆನ್ಸರ್, ಆ್ಯಂಡ್ ಪ್ರ್ಯಾಕ್ಟಿಸ್ ಇಟ್, ಯು ವಿಲ್ ಬಿ ಸಕ್ಸಸ್ ಫುಲ್’ ಅಂತ. ಹೌದು. ನಮ್ಮನ್ನು ನಾವು ಪ್ರಶ್ನಿಸಿಕೊಂಡು ಶೋಧಿಸಿಕೊಂಡು ನಾವು ನಮ್ಮಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆದರೆ ನಾವು ನಮ್ಮ ಬದುಕಿನಲ್ಲಿ ಏನಾದರೂ ಸಾಧಿಸುವುದಕ್ಕೆ ಸಾಧ್ಯವಿದೆ. ಪ್ರಶ್ನೆಗಳು ಇನ್ನೊಬ್ಬರೊಂದಿಗೆ ತರ್ಕಕ್ಕಾಗಿ ಮಾತ್ರ ಮಾಡಬಹುದಷ್ಟೇ. ಅದು ಯಾವುದೂ ಪ್ರಯೋಜನವಿಲ್ಲದೆ, ಪ್ರಶ್ನೆಯಾಗಿಯೇ ಉಳಿದು ಬಿಡುವ ಖಾಲಿ ವಸ್ತು ಅಥವಾ ವಿಷವಾಗಿ ಬಿಡುತ್ತದೆ ಅಷ್ಟೇ. ಆದರೇ, ನಮ್ಮನ್ನು ನಾವು ಪ್ರಶ್ನಿಸಿಕೊಂಡಾಗ ನಾವು ನಿಜಕ್ಕೂ ಮೇಲ್ಮುಖವಾಗಿ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ.
ನಮ್ಮನ್ನು ನಾವು ಕೇಳಿಕೊಳ್ಳುವ ಪ್ರಶ್ನೆಗಳಿಂದ ನಮಗೆ ಏನಾದರೂ ಪ್ರಯೋಜನವಾಗುತ್ತಿದೆ ಎಂದು ತಿಳಿಯುವುದು ನಾವು ಕೇಳಿಕೊಂಡ ಪ್ರಶ್ನೆಯಿಂದ ದೊರಕಿದ ಉತ್ತರವನ್ನು ಅಭ್ಯಾಸ ಮಾಡಿದಾಗ ಮಾತ್ರ. ಇಲ್ಲವೆಂದರೇ, ಎಲ್ಲವೂ ವ್ಯರ್ಥವಾಗಿ ಬಿಡುತ್ತವೆ.
ಪ್ರಶ್ನೆಗಳು ನಮ್ಮನ್ನು ಕೇಳಿಕೊಳ್ಳುವುದು ಅದು ನಮ್ಮನ್ನು ನಾವು ಸಮೀಕ್ಷಿಸಿಕೊಳ್ಳುವುದಲ್ಲ. ಅದು ನಮ್ಮನ್ನು ನಾವು ವಿಮರ್ಶಿಸಿಕೊಳ್ಳುವುದಕ್ಕೆ ಹಾಗೂ ಶೋಧಿಸಿಕೊಳ್ಳುದಕ್ಕೆ.
ಪ್ರಶ್ನೆಗಳು ನಾವು ನಮ್ಮನ್ನು ಕೇಳಿಕೊಳ್ಳುವ ಪ್ರಶ್ನೆಗಳು ಸುಪ್ತ ವರ್ತನೆಗಳು ಅಥವಾ ಗುಣಲಕ್ಷಣಗಳನ್ನು ನಿರ್ಧರಿಸಲು ಸಹಾಯ ಮಾಡುವ ಮಾಪಕಗಳನ್ನು ನಿರ್ಮಿಸಲು ನಮಗೆ ಅನುಮತಿಸುತ್ತದೆ. ಆದ್ಯತೆಗಳು, ನಡವಳಿಕೆಗಳು, ಪ್ರವೃತ್ತಿಗಳನ್ನು ಅಳೆಯಲು ಹಾಗೂ ತಿಳಿದುಕೊಳ್ಳಲು ನಮಗೆ ಇದು ಸಹಾಯ ಮಾಡುತ್ತದೆ.
ಬದುಕಿನ ಏರಿಳಿತಗಳ ದಾರಿಯಲ್ಲಿ ಆತ್ಮ ಪರಿಶೀಲನೆ ಬಹಳ ಮುಖ್ಯವಾಗುತ್ತದೆ. ಆತ್ಮ ಪರಿಶೀಲನೆಯಿಂದ ನಮ್ಮ ಆಂತರ್ಯದ ಶುದ್ಧಿಯಾಗುತ್ತದೆ ಎನ್ನುವುದು ಪದಶಃ ಸತ್ಯ. ಜೀವನದಲ್ಲಿ ಆಗಾಗ ಹುಟ್ಟುವ ವಿರುಕ್ತಿಗಳು ನಮ್ಮನ್ನು ನಾವೇನೆಂದು ತಿಳಿದುಕೊಳ್ಳಲು ನಮಗೆ ಪ್ರೇರೇಪಿಸುತ್ತವೆ. ನಾವೇನೆಂದು, ನಮ್ಮ ಆತ್ಮಶಕ್ತಿಯೇನೆಂದು ನಮ್ಮನ್ನು ಪರಿಶೀಲಿಸುವಂತೆ ಮಾಡುತ್ತದೆ.
ನಮ್ಮ ಬಗ್ಗೆ ನಾವು ಪ್ರಶಾಂತವಾಗಿ ಆಲೋಚಿಸಬಹದು. ಆತ್ಮಾವಲೋಕನ ಮಾಡಿಕೊಳ್ಳಬಹುದು. ನಾವು ಮಾಡುವ ಕೆಲಸಗಳನ್ನು ನಮ್ಮ ಪ್ರವರ್ತನಗಳನ್ನು ನಾವೇ ಅಭಿನಂದಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ನಾವು ಮಾಡಿದ ಕೆಲಸಗಳು ನಮಗೆ ಇಷ್ಟವಾಗದೇ ಇರಬಹುದು. ಇವು ಪುನರಾಲೋಚನೆಯಿಂದ , ಮರು ಪ್ರಶ್ನಿಸಿಕೊಳ್ಳುವುದರಿಂದ ನಮ್ಮನ್ನು ನಾವು ನಮ್ಮ ಇರುವಿಕೆಯನ್ನು ಸರಿ ಪಡಿಸಿಕೊಳ್ಳಬಹುದು. ಇವೆಲ್ಲವೂ ನಮ್ಮ ಅಂತರಂಗದೊಳಗೆ ಅಥವಾ ಅಂತರಂಗದೊಂದಿಗೆ ಮಾಡುವ ಪುನರಾಲೋಚನೆ ಅಥವಾ ಮರು ಪ್ರಶ್ನೆಗಳಿಂದ ಸಾಧ್ಯವಾಗುತ್ತದೆ.
ನಮ್ಮಲ್ಲಿನ ಪ್ರಶಾಂತತೆಗೆ ನಮಗೆ ಅಡಚಣೆಯನ್ನು ಮಾಡಲು ನಮ್ಮಲ್ಲಿರುವ ಅರಿಷಡ್ವರ್ಗಗಳು ಅಂದರೇ, ಕಾಮ, ಕ್ರೋಧ, ಲೋಭ, ಮದ, ಮತ್ಸರ, ಮೋಹ ನಮ್ಮನ್ನು ಒಮ್ಮೊಮ್ಮೆ ಕೆರಳಿಸುತ್ತದೆ. ಕಾಮ ಅಂದರೇ ಕೋರಿಕೆ, ಬಯಕೆ, ಅದು ಲಭಿಸದೆ ಇದ್ದರೇ, ಅದನ್ನು ಹೇಗಾದರೂ ಸಾಧಿಸಬೇಕೆಂಬ ಪ್ರಲೋಭ(ಛಲ), ಅದರ ಮೇಲೆ ಮತ್ತಷ್ಟು ಹೆಚ್ಚಾಗುವ ವ್ಯಾಮೋಹ. ಅದು ಕೂಡ ತೀರದಿದ್ದರೇ ಮದ ಮತ್ಸರ ಇವುಗಳು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದಕ್ಕೂ ಒಮ್ಮೊಮ್ಮೆ ತೊಡಕುಂಟು ಮಾಡುತ್ತವೆ.
ನಮ್ಮನ್ನು ನಾವು ಪ್ರಶ್ನಿಸಿಕೊಳ್ಳುವುದು ನಮ್ಮ ಭವಿಷ್ಯಕ್ಕೆ ಅದೊಂದು ಗಟ್ಟಿಯಾದ ಬುನಾದಿ ಹಾಕಿಕೊಡುತ್ತದೆ. ನಾವು ನಾವಾಗಿಯೆ ನಮ್ಮನ್ನು ಕೇಳಿಕೊಳ್ಳುವ ಪ್ರಶ್ನೆಗಳು ಒಮ್ಮೊಮ್ಮೆ ಹಿತವೂ ಎನ್ನಿಸಬಹುದು ಅಥವಾ ದುಃಖವೂ ತರಿಸಬಹುದು. ಅದನ್ನು ನಾವು ಹೇಗೆ ಸ್ವೀಕರಿಸುತ್ತೇವೆ ಎನ್ನುವುದು ಬಹಳ ಮುಖ್ಯವಾಗುತ್ತದೆ.
ನಾವು ಇನ್ನೊಬ್ಬರೊಂದಿಗೆ ವ್ಯವಹರಿಸುವಾಗ ನಮಗೆ ಪ್ರಶ್ನಿಸಿಕೊಳ್ಳುವುದಕ್ಕೆ ವ್ಯವದಾನವಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಸಮಯವೂ ಇರುವುದಿಲ್ಲ. ಅಂತಹ ಸಂದರ್ಭದಲ್ಲಿ ಜಾಗರೂಕತೆಯಿಂದಿರುವುದು ಒಳ್ಳೆಯದು. ಮತ್ತು ಅವರೊಂದಿಗೆ ಮಾತು ಮುಗಿಸಿದ ಮೇಲೆ ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ನಿಮಗೆ ಅದು ಮಹತ್ತರವಾದದ್ದನ್ನು ನೀಡುತ್ತದೆ. ನೆನಪಿರಲಿ ನಿಮ್ಮನ್ನು ಶೋಧಿಸುವವರು ನೀವೇ ಆಗುವುದು ನಿಮಗೂ, ನಿಮ್ಮ ವ್ಯಕ್ತಿತ್ವಕ್ಕೂ ಒಳ್ಳೆಯದು.
-ಶ್ರೀರಾಜ್ ವಕ್ವಾಡಿ
ಓದಿ : ಕಾಂಗೋದಲ್ಲಿ ತಾಂಡವಾಡುತ್ತಿರುವ ಹಸಿವು : ವಿಶ್ವ ಸಂಸ್ಥೆಯಿಂದ ಎಚ್ಚರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ