ಸೇವಾ ಶುಲ್ಕ ಸಿಂಧುವೇ? ಅಸಿಂಧುವೇ? ಹಾಗಾದರೆ ಏನಿದು ವಿವಾದ?
Team Udayavani, Jun 7, 2022, 11:45 AM IST
ಸೇವಾ ಶುಲ್ಕ ವಿಚಾರವಾಗಿ ಕೇಂದ್ರ ಸರಕಾರ ಮತ್ತು ಹೊಟೇಲ್ ಮಾಲಕರ ಸಂಘದ ನಡುವೆ ದೊಡ್ಡ ಜಗಳವೇ ಆಗುತ್ತಿದೆ. ಸೇವಾಶುಲ್ಕ ಹಾಕುವುದು ಕಾನೂನು ಬಾಹಿರ ಎಂದು ಕೇಂದ್ರ ಹೇಳಿದ್ದರೆ, ಹೊಟೇಲ್ ಸಂಘದವರು ಇದನ್ನು ಒಪ್ಪಿಕೊಳ್ಳುತ್ತಿಲ್ಲ. ಈ ಸೇವಾಶುಲ್ಕದಿಂದಲೇ ನಾವು ಹೊಟೇಲ್ ಸಿಬಂದಿಗೆ ವೇತನ ನೀಡುತ್ತಿದ್ದೇವೆ ಎಂಬ ವಾದ ಇವರದ್ದು. ಹಾಗಾದರೆ ಏನಿದು ವಿವಾದ?
ಕಾನೂನಿನ ಸಮ್ಮತಿ ಇದೆಯೇ?
ಕೇಂದ್ರ ಸರಕಾರದ ಪ್ರಕಾರ ಹೊಟೆಧೀಲ್ಗಳಲ್ಲಿ ಸೇವಾಶುಲ್ಕ ವಿಧಿಸುವುದು ಅಪರಾಧ. ಈ ಶುಲ್ಕದಿಂದಾಗಿ ಗ್ರಾಹಕರಿಗೆ ಹೊರೆಯಾಗುತ್ತದೆ ಎಂದೂ ಅದು ಹೇಳುತ್ತದೆ. ಈ ಸಂಬಂಧ ಕಾನೂನಿನಲ್ಲಿ ಯಾವುದೇ ಉಲ್ಲೇಖವಿಲ್ಲವಾದರೂ ಮುಂದೆ ತರುತ್ತೇವೆ ಎಂದು ಕೇಂದ್ರ ಹೇಳುತ್ತಿದೆ.
ಈಗ ಏಕೆ ಈ ವಿಚಾರ?
ಗ್ರಾಹಕರ ದೂರಿನ ಮೇರೆಗೆ ಇತ್ತೀಚೆಗಷ್ಟೇ ಕೇಂದ್ರ ಸರಕಾರ, ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಶನ್ ಆಫ್ ಇಂಡಿಯಾದ ಜತೆಗೆ ಒಂದು ಸಭೆ ನಡೆಸಿದೆ. ಈ ಸಂದರ್ಭದಲ್ಲಿ ಹೊಟೆಧೀಲ್ಗಳಲ್ಲಿ ವಿಧಿಸಲಾಗುತ್ತಿರುವ ಸೇವಾಶುಲ್ಕದ ಬಗ್ಗೆ ಚರ್ಚೆಯಾಗಿದೆ. ಸದ್ಯ ಗ್ರಾಹಕರಿಗೆ ವಿಧಿಸಲಾಗುವ ಬಿಲ್ಗೆ ಶೇ.10ರಷ್ಟು ಸೇವಾ ಶುಲ್ಕ ವಿಧಿಸಿ ವಸೂಲಿ ಮಾಡಿಕೊಳ್ಳಲಾಗುತ್ತಿದೆ. ಇದು ತಪ್ಪು ಎಂದಿದೆ.
ಹೊಟೇಲ್ಗಳವರ ವಾದವೇನು?
ಸೇವಾಶುಲ್ಕಕ್ಕೆ ಸಂಬಂಧಿಸಿದಂತೆ ಸದ್ಯ ದೇಶದಲ್ಲಿ ಯಾವುದೇ ಕಾನೂನು ಇಲ್ಲ. ಒಮ್ಮೆ ಸರಕಾರ ಕಾನೂನು ಜಾರಿ ಮಾಡಿದ ಮೇಲೆ ಇದು ಸರಿಯೋ ಅಥವಾ ತಪ್ಪೋ ಎಂಬುದು ನಿರ್ಧಾರವಾಗುತ್ತದೆ. ಅಲ್ಲಿಯವರೆಗೆ ಸೇವಾಶುಲ್ಕ ವಿಧಿಸುವುದು ಕಾನೂನು ಪ್ರಕಾರ ಸರಿಯಾಗಿಯೇ ಇದೆ ಎಂದು ಹೊಟೇಲ್ ಮಾಲಕರು ಹೇಳುತ್ತಾರೆ. ಅಲ್ಲದೆ ಈಗಾಗಲೇ ಕೊರೊನಾ ಸಮಸ್ಯೆಯಿಂದ ನಾವು ನಲುಗಿದ್ದೇವೆ. ಈಗ ಸೇವಾಶುಲ್ಕದ ವಿಚಾರದಲ್ಲಿ ಹೊಟೇಲ್ನವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಸೇವಾಶುಲ್ಕದಿಂದಾಗಿಯೇ ಸಿಬಂದಿ ಉತ್ತಮ ವೇತನ ಮತ್ತು ಪ್ರೋತ್ಸಾಹಕ ಧನ ಪಡೆಯುತ್ತಿದ್ದಾರೆ ಎಂದು ಹೇಳುತ್ತಾರೆ.
ಗ್ರಾಹಕರ ಒಪ್ಪಿಗೆ ಅಗತ್ಯವೇ?
ಕೇಂದ್ರ ಸರಕಾರ ಹೇಳುವ ಪ್ರಕಾರ, ಸೇವಾಶುಲ್ಕ ನೀಡುವುದು ಗ್ರಾಹಕರಿಗೆ ಬಿಟ್ಟ ವಿಚಾರ. ಒಂದು ವೇಳೆ ಗ್ರಾಹಕ ತಾನು ಸೇವಾಶುಲ್ಕ ನೀಡಲ್ಲ ಎಂದರೆ ಬಲವಂತವಾಗಿ ಪಡೆದುಕೊಳ್ಳುವಂತಿಲ್ಲ. ಆತ ಇಚ್ಚಿಸಿದರೆ ಮಾತ್ರ ಪಡೆಯಬಹುದು ಎಂದಿದೆ. 2017ರಲ್ಲೇ ಈ ಸಂಬಂಧ ನಿಯಮ ಜಾರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Inheritance Tax: ಸ್ಯಾಮ್ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ