ನೂರಾರು ಜನರ ಜೀವ ಉಳಿಸಿದ “ಕಾಲೇಜು ವಿದ್ಯಾರ್ಥಿಗಳ ಬ್ಲಡ್ ಬ್ಯಾಂಕ್”

ಈ ಸ್ಟಾರ್ಟಪ್‌ ಆಗಲೇ 18,000 ಅಧಿಕೃತ ರಕ್ತದಾನಿಗಳನ್ನು ಹೊಂದಿದೆ.

Team Udayavani, Jan 7, 2022, 12:48 PM IST

ನೂರಾರು ಜನರ ಜೀವ ಉಳಿಸಿದ “ಕಾಲೇಜು ವಿದ್ಯಾರ್ಥಿಗಳ ಬ್ಲಡ್ ಬ್ಯಾಂಕ್”

ದೇಶದಲ್ಲಿ ಕೋವಿಡ್ ಅಲೆಗಳ ಮಧ್ಯೆ ತತ್‌ಕ್ಷಣ ರಕ್ತದಾನಿಗಳು ಬೇಕೆಂದರೆ ಪರದಾಡುವ ಪರಿಸ್ಥಿತಿ ಉಂಟಾಗಿದ್ದನ್ನು ನೆನಪಿಸಿಕೊಳ್ಳಿ. ಕೋವಿಡ್ ಹಿನ್ನೆಲೆ ಯಾವುದೇ ಬ್ಲಡ್‌ ಬ್ಯಾಂಕ್‌ಗೆ ಹೋದರೂ ಸ್ಟಾಕ್‌ ಇಲ್ಲ. ಒಂದು ವೇಳೆ ನಮ್ಮ ಪರಿಚಯಸ್ಥರು, ಸ್ನೇಹಿತರ ಪೈಕಿ ನಮಗೆ ಬೇಕಾದ ಮಾದರಿಯ ರಕ್ತ ಹೊಂದಿದವರಿದ್ದರೂ ದಾನ ಮಾಡಲು ಹಿಂsದೆಮುಂದೆ ನೋಡುವ ಕಾಲ. ಈ ಸಮಸ್ಯೆಗಳಿಗೆ ಪರಿಹಾರವೆಂಬಂತೆ ಚೆನ್ನೈಯಲ್ಲಿ ಇಬ್ಬರು ಯುವಕರು ಸೇರಿ ನಗರದ ರಕ್ತದ ಆವಶ್ಯಕತೆಯನ್ನು ನೀಗಿಸಲು ಬೋಲ್ಡ್ ಇನ್‌ (www.bold.in) ಎಂಬ ಸ್ಟಾರ್ಟಪ್‌ ಆರಂಭಿಸಿದ್ದು, ನಗರದ ನೂರಾರು ಮಂದಿಗೆ ಸಹಾಯಕವಾಗಿದೆ.

ಸ್ನೇಹಿತರಾದ ವರುಣ್‌ ನಾಯರ್‌ ಮತ್ತು ಆದಿತ್ಯ ವಿಕ್ರಮ್‌ ಅವರ ಈ ಸ್ಟಾರ್ಟ್‌ಪ್‌ ಜುಲೈ 11ರಿಂದ ಕಾರ್ಯಾರಂಭಿಸಿದ್ದು, ಇದನ್ನು ಕಾಲೇಜು ವಿದ್ಯಾರ್ಥಿಗಳೇ ನಿರ್ವಹಿಸುತ್ತಿದ್ದಾರೆ. ಎರಡು ತಿಂಗಳ ಹಿಂದೆ ಆರಂಭವಾದ ಈ ಸ್ಟಾರ್ಟಪ್‌ ಆಗಲೇ 18,000 ಅಧಿಕೃತ ರಕ್ತದಾನಿಗಳನ್ನು ಹೊಂದಿದೆ. ಈ ವರೆಗೆ ಸುಮಾರು 160ಕ್ಕೂ ಅಧಿಕ ಮಂದಿಗೆ ಕಾಲೇಜು ಯುವಕರ ಈ ಹೊಸ ಆಲೋಚನೆ ಮರುಜೀವ ನೀಡಿದೆ. ಈ ವೆಬ್‌ ಸೈಟ್‌ನಲ್ಲಿ ಪ್ರದೇಶದ ಪಿನ್‌ ಕೋಡ್‌ ಹಾಕುವ ಮೂಲಕ ಪ್ರದೇಶದ ರಕ್ತದಾನಿಗಳ ದೂರವಾಣಿ ಸಂಖ್ಯೆಯನ್ನು ಪಡೆಯಬಹುದು.

 ಆರಂಭವಾಗಿದ್ದು ಹೇಗೆ

ಕೋವಿಡ್ ಎರಡನೇ ಅಲೆಯ ಸಂದರ್ಭ ರಕ್ತದ ಆವಶ್ಯಕತೆ ಅಧಿಕವಾಗಿ ಕಂಡುಬಂದಿದ್ದು, ಎಲ್ಲಾ ಸಾಮಾಜಿಕ ಮಾಧ್ಯಮಗಳಲ್ಲಿ ರಕ್ತ ಬೇಕಾಗಿದೆ ಎಂಬಿತ್ಯಾದಿ ಪೋಸ್ಟರ್ ಗಳು ಹರಿದಾಡುತ್ತಿದ್ದವು. ಇವನ್ನು ನೋಡಿದ ಬಳಿಕ ತಮ್ಮ ಊರಿನಲ್ಲಿ ಸುಲಭವಾಗಿ ರಕ್ತದಾನಿಗಳನ್ನು ಪತ್ತೆಹಚ್ಚಲು ಈ ಬೋಲ್ಡ್. ಇನ್‌ ಅನ್ನು ಆರಂಭಿಸಲಾಯಿತು ಎನ್ನುತ್ತಾರೆ ಈ ಸ್ಟಾರ್ಟಪ್‌ನ ಸ್ಥಾಪಕರಲ್ಲಿ ಒಬ್ಬರಾದ ಮೆಡಿಕಲ್‌ ಎಂಜಿನಿಯರಿಂಗ್‌ ಪದವೀಧರ ವರುಣ್‌ ನಾಯರ್‌.

ತನ್ನ ಸಂಬಂಧಿಕರೊಬ್ಬರಿಗೆ ರಕ್ತದ ಆವಶ್ಯಕತೆಯಿದ್ದಾಗ ಕೋವಿಡ್ ಹಿನ್ನೆಲೆ ರಕ್ತದಾನಿಗಳನ್ನು ಪಡೆಯಲು ತಾನು ಪಟ್ಟ ಕಷ್ಟದಿಂದ ಇದು ಆರಂಭವಾಯಿತು. ಕೋವಿಡ್‌ ಸಂದರ್ಭದಲ್ಲಿ ಜನರಲ್ಲಿ ರಕ್ತದಾನಿಗಳನ್ನು ಎಲ್ಲಿ ಹುಡುಕುವುದು ಎಂಬ ಚಿಂತೆ ಕಾಡಿತ್ತು. ಈಗಾಗಲೇ ಈ ಕುರಿತಂತೆ ಅನೇಕ ವೆಬ್‌ ಸೈಟ್‌ಗಳಿದ್ದರೂ, ಅದರಲ್ಲಿರುವ ಮಾಹಿತಿಗಳು ಅನಧಿಕೃತವಾಗಿರುವುದರಿಂದ ಚಿಂತೆಗೀಡುಮಾಡುತ್ತಿತ್ತು. ಈ ರೀತಿಯ ಸಮಸ್ಯೆಗಳಿಂದ ಜನರ ಅಮೂಲ್ಯ ಸಮಯ ಹಾಳಾಗುತ್ತಿತ್ತು. ಒಂದು ವೇಳೆ ದಾನಿಗಳು ಲಭ್ಯವಾದರೂ ಕೋವಿಡ್ ಹಿನ್ನೆಲೆ ಸಂಚಾರ ನಿರ್ಬಂಧ ಇವೆಲ್ಲವನ್ನು ನಿಭಾಯಿಸುವುದು ಕಷ್ಟವಾಗುತ್ತಿತ್ತು ಎನ್ನುತ್ತಾರೆ ಅವರು.

ತನ್ನ ಮತ್ತು ಜನರ ಕಷ್ಟವನ್ನು ನೋಡಿದ್ದ ಅವರು ನಗರದ ಜನರಿಗೆ ತಮ್ಮ ಆಸುಪಾಸಿನಲ್ಲಿರುವ ಅಧಿಕೃತ ದಾನಿಗಳನ್ನು ತಲುಪಲು ಸುಲಭವಾಗಲು ವೆಬ್‌ ಸೈಟ್‌ ಅನ್ನು ಆರಂಭಿಸುವ ಚಿಂತನೆ ನಡೆಸುತ್ತಾರೆ. ತನಗೆ ಕೋಡಿಂಗ್‌ ಗೊತ್ತಿಲ್ಲದ ಹಿನ್ನೆಲೆ ಸುಮಾರು 128 ಗಂಟೆಗಳ ಕಲಿಕೆಯಲ್ಲಿ ಜಾವಾ, ಪೈತಾನ್‌ ಪ್ರೊಗ್ರಾಮಿಂಗ್‌ ಲ್ಯಾಂಗ್ವೇಜ್‌ ಕಲಿತು ವೆಬ್‌ ಸೈಟ್‌ ರಚಿಸಿದ್ದಾರೆ ಅವರು. ಈ ಸಂದರ್ಭದಲ್ಲಿ ಅವರ ಸಹಾಯಕ್ಕೆ ಬಂದ ಕಂಪ್ಯೂರ್ಟ ಸೈನ್ಸ್ ಎಂಜಿನಿಯರಿಂಗ್‌ ಕಲಿಯುತ್ತಿರುವ ಸ್ನೇಹಿತ ಆದಿತ್ಯ ವಿಕ್ರಮ್‌ ಅವರು ವೆಬ್‌ ಸೈಟ್‌ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವಂತೆ ಮಾಡುವಲ್ಲಿ ಕೈಜೋಡಿಸಿದ್ದರು.

ಮೊದಮೊದಲು ವೆಬ್‌ಸೈಟ್‌ನಲ್ಲಿರುವ ಮಾಹಿತಿಗಳು ಅಧಿಕೃತವಾಗಿರುವಂತೆ ನೋಡಿಕೊಳ್ಳಲು ಎಲ್ಲ ನೋಂದಣಿ ಮಾಡಿಕೊಂಡಿದ್ದ ದಾನಿಗಳಿಗೆ ಕರೆ ಮಾಡಿ ಖಚಿತ ಪಡಿಸಿಕೊಳ್ಳುತ್ತಿದ್ದರು. ಬಳಿಕ ಈ ಕೆಲಸ ಸುಲಭ ಮಾಡಲು ಸಾಫ್ಟ್ ವೇರ್ ಕಂಡುಹಿಡಿದಿದ್ದಾರೆ. ಸದ್ಯ ಈ ವೆಬ್‌ಸೈಟ್‌ನಲ್ಲಿ ನಗರದ ಸುಮಾರು 4,000 ರಕ್ತದಾನಿಗಳು ನೋಂದಣಿ ಮಾಡಿಕೊಂಡಿದ್ದಾರೆ.

 ಬೆಳಗ್ಗೆ ಕಾಲೇಜು ರಾತ್ರಿ ಕೆಲಸ

ಸದ್ಯ ಈ ತಂಡದಲ್ಲಿ ಸುಮಾರು 30 ಮಂದಿ ಕಾಲೇಜು ವಿದ್ಯಾರ್ಥಿಗಳಿದ್ದು, ಪ್ರತಿದಿನ ಕಾಲೇಜು ಮುಗಿದ ಬಳಿಕ ರಾತ್ರಿ ಸುಮಾರು 2-3 ಗಂಟೆಗಳ ಕಾಲ ಕೆಲಸಮಾಡಿ ವೆಬ್‌ಸೈಟ್‌ನನ್ನು ಸಕ್ರಿಯವಾಗಿಡಲಾಗಿದೆ ಎನ್ನುತ್ತಾರೆ ಸಹಸಂಸ್ಥಾಪಕ ಆದಿತ್ಯ ವಿಕ್ರಮ್ ತಂಡ ಇನ್‌ಸ್ಟಾಗ್ರಾಮ್‌ ಮತ್ತಿತರ ಸಾಮಾಜಿಕ ಮಾಧ್ಯಮಗಳ ಮೂಲಕ ದಾನಿಗಳು ಮತ್ತು ರಕ್ತದ ಆವಶ್ಯಕತೆ ಇರುವವರನ್ನು ತಲುಪುತ್ತಿದೆ. ಸದ್ಯ ಈ ವೆಬ್‌ ಸೈಟ್‌ ತಮಿಳುನಾಡು ವ್ಯಾಪ್ತಿಯಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ವಿಸ್ತರಿಸಲಾಗುವುದು ಎಂದವರು ಹೇಳಿದ್ದಾರೆ.

*ಜಯಶಂಕರ್

ಟಾಪ್ ನ್ಯೂಸ್

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Bengaluru: ಕೆಂಡದಂಥ ಬಿಸಿಲಿಗೆ ಬಳಲಿದ ಬೆಂಗಳೂರಿಗರು

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Crime: ವಿಚ್ಛೇದನ ಪಡೆಯಲು ಬಯಸಿದ್ದ ಹೆಂಡತಿಯ ಕೊಂದ ಪತಿ ಬಂಧನ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.