ಮನಸ್ಸಿದ್ದರೆ ಮಾರ್ಗ… ಕೈ ಹಿಡಿದ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್

ಕಾಶ್ಮೀರದ ಮೊದಲ ಸ್ವಂತ ಬ್ರ್ಯಾಂಡ್ ನಂತೆ ಜರ್ಕಾರ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬರುತ್ತದೆ.

Team Udayavani, Sep 23, 2021, 2:35 PM IST

ಮನಸ್ಸಿದ್ದರೆ ಮಾರ್ಗ… ಕೈ ಹಿಡಿದ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್

ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಅದೇ ಗುರಿ, ಉದ್ದೇಶವನ್ನಿಟ್ಟುಕೊಂಡು ಮುನ್ನುಗ್ಗಿದರೆ ಮನ್ನೆಡೆ ಸಿಗುವುದು ಖಂಡಿತ.  ಪ್ರತಿಯೊಬ್ಬರಲ್ಲಿ ಏನಾದ್ರು ಮಾಡಬೇಕು ಅನ್ನೋ ಕನಸು ಇದ್ದೇ ಇರುತ್ತದೆ. ಎಲ್ಲೋ ಒಂದು ಹಂತದವರೆಗೆ ಬರುವ ಕನಸು ಕೊನೆಗೆ ಜಂಜಾಟದ ನಡುವೆ ಮರೆಯಾಗಿಯೂ ಅಥವಾ ಇನ್ನಿತರ ಕಾರಣಗಳಿಂದಲೂ ದೂರವಾಗುತ್ತದೆ.

ಮದುವೆಯ ಬಳಿಕ ಹೆಣ್ಣು. ಅಡುಗೆ ಕೆಲಸಕ್ಕೆನೇ ಸಿಮೀತವಾಗಿ ಬಿಡುತ್ತಾಳೆ ಎನ್ನುವ ಎಷ್ಟೋ ಜನರ ನಂಬಿಕೆಗೆ ವಿರುದ್ಧವಾಗಿ ಸಾಧನೆಗೈದ ನಾರಿಯರು ಬಹಳ ಇದ್ದಾರೆ. ಗಂಡನ ಸಹಕಾರ,ಬೆಂಬಲವಿದ್ರೆ ವಿವಾಹಿತ ಹೆಣ್ಣು ಕೂಡ ತನ್ನ ಕನಸನ್ನು ಸಾಕಾರಗೊಳಿಸಿಕೊಳ್ಳಬಹುದು ಎನ್ನುವುದಕ್ಕೆ ಸಾಕ್ಷಿ ಜಮ್ಮು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಜರ್ಕಾ ತಂಜೀಲ್.

ಜರ್ಕಾ ತಂಜೀಲ್ ಎಲ್ಲರ ಹಾಗೆ ಯೌವನದಲ್ಲಿ ಭವಿಷ್ಯದ ಕನಸು ಕಾಣುತ್ತಾ ಬೆಳೆದ ಹುಡುಗಿ. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದಾಕೆಗೆ ಬುಡ್ಗಾಮ್ ಜಿಲ್ಲೆಯ ಸೈಯದ್ ತಂಜೀಲ್ ಅವರೊಂದಿಗೆ ಮದುವೆ ಆಗುತ್ತದೆ. ಮದುವೆ ಬಳಿಕ ಮನೆಯ ಕೆಲಸ, ಜವಬ್ದಾರಿಯಲ್ಲಿ ನಿರತರಾದ ಜರ್ಕಾ ಅವರಿಗೆ ತಾನು ಏನಾದರೂ ಮಾಡಬೇಕೆನ್ನುವ ತುಡಿತ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ಈ ತುಡಿತವನ್ನು ತನ್ನ ಗಂಡನ ಜತಗೆ ಹೇಳಿಕೊಳ್ಳುತ್ತಾರೆ. ತಾನು ಸಮಾಜಕ್ಕಾಗಿ ಏನಾದರೂ ಮಾಡಬೇಕೆನ್ನುತ್ತಾರೆ.

ತಂಜೀಲ್ ಅವರ ಗಂಡ ಕೂಡ ಶಿಕ್ಷಿತರಾಗಿರುವುದರಿಂದ, ಹೆಂಡತಿಯ ಮಾತಿಗೆ ಒಪ್ಪಿಗೆ ನೀಡುತ್ತಾರೆ. ಏನು ಮಾಡಬೇಕೆಂದು, ಸೈಯದ್ ಹುಡುಕುತ್ತಾರೆ. ಈ ವೇಳೆ ಜರ್ಕಾ ಅವರಿಗೆ ಇಂಟರ್ ನೆಟ್ ನಲ್ಲಿ  ಡಿಟರ್ಜೆಂಟ್ ಪೌಡರ್ ಮಾಡುವ ಕುರಿತು ಕೆಲ ವಿಧಾನಗಳು ಸಿಗುತ್ತದೆ. ಇದನ್ನೇ ತನ್ನ ಗಂಡನಿಗೆ ಹೇಳುತ್ತಾರೆ. ಡಿಟರ್ಜೆಂಟ್ ಪೌಡರ್ ನ್ನು ತಯಾರಿಸಿ ಮಾರಾಟ ಮಾಡುವ, ಇದು ಹೆಂಗಸರ ವಿಚಾರವಾಗಿರುವುದರಿಂದ ಇದನ್ನು ನಾನು ನಿಭಾಯಿಸಬಲ್ಲೆ ಎನ್ನುವ ವಿಶ್ವಾಸವನ್ನು ಗಂಡನ ಬಳಿ ಹೇಳುತ್ತಾರೆ.

ಜರ್ಕಾ ಗೂಗಲ್ ನಲ್ಲಿ ಸಣ್ಣ ಉದ್ಯಮವನ್ನು ಆರಂಭಿಸುವುದು ಹೇಗೆ ಎಂದು ಹುಡುಕುತ್ತಾರೆ. ಆಗ ಅವರಿಗೆ ಸಿಕ್ಕಿದ್ದು ಡಿಟರ್ಜೆಂಟ್ ಯೂನಿಟ್ ಮಾಡುವ ಯೋಜನೆ. ಪ್ಲ್ಯಾನು ಏನೋ ಬಂತು. ಆದರೆ ಮಧ್ಯಮ ವರ್ಗದ ಕುಟುಂಬವಾಗಿರುವ ಕಾರಣ ಅದಕ್ಕೆ ಹಣ ಒದಗಿಸಲು ಜರ್ಕಾ ಕಷ್ಟ ಪಡುತ್ತಾರೆ. ಜರ್ಕಾರ ಅಪ್ಪ ಸರ್ಕಾರಿ ಉದ್ಯೋಗಿ ಆಗಿರುವ ಕಾರಣ ಮಗಳ ಆಸಕ್ತಿಗೆ ತನ್ನ ಉಳಿತಾಯದ ಹಣವನ್ನು  ಕೊಟ್ಟು ಪ್ರೋತ್ಸಾಹಿಸುತ್ತಾರೆ. ಜರ್ಕಾರ ಗಂಡ ಕೂಡ ಒಂದಿಷ್ಟು ಆರ್ಥಿಕ ಸಹಾಯ ಮಾಡುತ್ತಾರೆ.

ಡಿಟರ್ಜೆಂಟ್ ಪೌಡರ್ ಮಾಡುವ ಸಾಮಾಗ್ರಿಗಳೆಲ್ಲಾ ಬಂದ ಮೇಲೆ ಅವುಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡಲು ಅಡ್ಡಿ ಆದದ್ದು ಕೋವಿಡ್ ಲಾಕ್ ಡೌನ್,  ಎರಡು ಬಾರಿಯೂ ಜರ್ಕಾ ಅವರಿಗೆ ತಯಾರಿಸಿದ ಡಿಟರ್ಜೆಂಟ್ ನ್ನು ಮಾರುಕಟ್ಟೆಗೆ ತಲುಪಿಸಲು ಲಾಕ್ ಡೌನ್ ಅಡ್ಡಿ ಆಗಿ ನಷ್ಟ ಆಗುತ್ತದೆ. ಈ ವೇಳೆ ಜರ್ಕಾಳಿಗೆ ಮಾನಸಿಕವಾಗಿ ಮನೆಯವರ ಬೆಂಬಲ ಸಿಗುತ್ತದೆ. ಸೋತು ಕೂರದಂತೆ, ಪ್ರೋತ್ಸಾಹಿಸುವ ಕೈಗಳು ಬೆನ್ನು ತಟ್ಟುತ್ತವೆ.

ಲಾಕ್ ಡೌನ್ ನಿಧಾನಕ್ಕೆ ತೆರವಾದಾಗ ಜರ್ಕಾ ತಮ್ಮ ಕನಸಿನ ಡಿಟರ್ಜೆಂಟ್ ಪೌಡರ್ ನ್ನು ಮತ್ತೆ ಪ್ರಾರಂಭಿಸುತ್ತಾರೆ. ಒಂದು ಸಣ್ಣ ಕೊಠಡಿಯ ಹಾಗಿರುವ ಜಾಗದಲ್ಲಿ ದೊಡ್ಡ ಯಂತ್ರದಲ್ಲಿ ಜರ್ಕಾರವರ ಲೋಕಲ್ ಬ್ರ್ಯಾಂಡ್ ‘ಕಾಶ್ಮೀರ್ ಶೈನ್ ‘ ಡಿಟರ್ಜೆಂಟ್ ಪೌಡರ್ ಸಿದ್ದವಾಗುತ್ತದೆ. ಕಾಶ್ಮೀರದ ಮೊದಲ ಸ್ವಂತ ಬ್ರ್ಯಾಂಡ್ ನಂತೆ ಜರ್ಕಾರ ಡಿಟರ್ಜೆಂಟ್ ಪೌಡರ್ ಮಾರುಕಟ್ಟೆಗೆ ಬರುತ್ತದೆ.

ಊರಿನ ಬ್ರ್ಯಾಂಡ್ ಅದಕ್ಕೊಂಡು, ಹೆಸರು, ಡಿಟರ್ಜೆಂಟ್ ಪೌಡರ್ ಅದರ ಮೇಲೆ ಹೆಸರು. ಅದರೊಳಗೆ ಡಿಟರ್ಜೆಂಟ್ ಪೌಡರ್, ನೋಡಾ ನೋಡುತ್ತಾ ಹಾಗೆ ಜರ್ಕಾರ ಡಿಟರ್ಜೆಂಟ್ ಹೆಸರುಗಳಿಸಲು ಪ್ರಾರಂಭವಾಗುತ್ತದೆ.

ಪೌಡರ್ ತಯಾರಾಗಲು ಒಂದು ಪುಟ್ಟ ಕಾರ್ಖಾನೆ, ಅದರಲ್ಲಿ 12 ಮಂದಿ ಕೆಲಸಗಾರರು ಇದ್ದಾರೆ. ತನ್ನ ಡಿಟರ್ಜೆಂಟ್ ಪೌಡರ್ ನ್ನು ಇನ್ನು ಮುಂದೆ ಎಲ್ಲೆಡೆ ಉತ್ಪಾದಿಸಿ, ತನ್ನ ಸಂಸ್ಥೆಯಲ್ಲಿ ನಿರುದ್ಯೋಗಿ ಯುವಕ ಯುವತಿರಿಗೆ ಕೆಲಸ ನೀಡಬೇಕೆನ್ನುವುದು ಜರ್ಕಾರ ಕನಸು.  ಏನಾದರೂ ಮಾಡಬೇಕು ಎನ್ನುತ್ತಾ ಕೂರುವ ಬದಲು, ಏನಾದರೂ ಮಾಡಿ, ಸಾಧನೆಗೈದವರನ್ನು ನೋಡಿ ಸ್ಪೂರ್ತಿಗೊಂಡು, ಸಾಧಕರಾಗಿ..

 -ಸುಹಾನ್ ಶೇಕ್

ಟಾಪ್ ನ್ಯೂಸ್

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

Jammu Kashmir: ಗುಲ್‌ ಮಾರ್ಗ್‌, ಆದಿ ಶಂಕರಾಚಾರ್ಯ ಪೀಠ..ನೋಡಲೇಬೇಕಾದ ಸ್ಥಳಗಳು ಹಲವು…

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

ಬರದ ಬಿಕ್ಕಟ್ಟು:ತಂತ್ರಜ್ಞಾನ ನಗರಿ ಬೆಂಗಳೂರನ್ನು ದಿವಾಳಿಯಂಚಿಗೆ ತಳ್ಳುವುದೇ ನೀರಿನ ಸಮಸ್ಯೆ?

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Desi Swara: ಇಟಲಿಯಲ್ಲಿ ಶ್ರೀರಾಮನಾಮ ಸತ್ಸಂಗ, ಆರಾಧನೆ

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir ಅಂದು-ಇಂದು: ಕಾಶ್ಮೀರಿ ಜನರ ಮನಸ್ಥಿತಿ ಈಗ ಹೇಗಿದೆ ಗೊತ್ತಾ?

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

Jammu-Kashmir: ಅಂದು-ಇಂದು- ಸಮೃದ್ಧಿಯ ನಾಡು- ನೆಮ್ಮದಿಯ ಬೀಡು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.