ಸೆಲ್ಫಿ ಪ್ರಿಯರೇ ಗಮನಿಸಿ : ಇಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡ್ರೆ ಜೈಲೂಟ ಗ್ಯಾರಂಟಿ!


Team Udayavani, Jul 6, 2021, 3:33 PM IST

hjhgfdfghjkjhg

ಭಾರತದಲ್ಲಿ ನೋಡಲು ನೂರಾರು ಪ್ರವಾಸಿ ತಾಣಗಳಿವೆ. ಈ ಜಾಗಗಳ ವೈಶಿಷ್ಟ್ಯ ಕೂಡ ಜನರನ್ನು ಆನಂದಿಸುತ್ತವೆ. ಅಂತ ತಾಣಗಳಿರುವ ರಾಜ್ಯಗಳ ಪೈಕಿ ಗುಜರಾತ್‌ ಕೂಡ ಒಂದು. ಇಲ್ಲಿ ನಯನ ಮನೋಹರ ಜಾಗಗಳಿರು ಒಂದು ಜಿಲ್ಲೆ ಇದೆ. ಅದೇ  ದಾಂಗ್. ಆದ್ರೆ ಈ ಜಿಲ್ಲೆಯ ವಿಚಿತ್ರ ಏನಂದ್ರೆ ಕೆಲವು ಕಡೆ ಸೆಲ್ಫಿಯನ್ನು ಬ್ಯಾನ್ ಮಾಡಲಾಗಿದೆ. ಅಲ್ಯಾಕೆ ಸೆಲ್ಫಿ ಬ್ಯಾನ್ ಮಾಡಲಾಗಿದೆ ಎಂಬುನ್ನು ನೋಡೋಣ. ಅದಕ್ಕೂ ಮೊದಲು ಆ ಜಾಗಗಳು ಯಾವುವು ಎಂಬುದನ್ನು ತಿಳಿಯೋಣ. ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಅನೇಕ ಜಾಗಗಳು ದಾಂಗ್  ಜಿಲ್ಲೆಯಲ್ಲಿವೆ.

ದಾಂಗ್ ನ ಸಪುತಾರಾ ಎಂಬ ಹಿಲ್‌ ಸ್ಟೇಶನ್‌ ನಲ್ಲಿರುವ ಟ್ರೈಬಲ್‌ ಮ್ಯೂಸಿಯಂ ಜಗತ್ತು ಪ್ರಸಿದ್ಧ . ಪಶ್ಚಿಮ ಘಟ್ಟಗಳ ನಡುವೆ ಇರುವ ಈ ಹಿಲ್‌ ಸ್ಟೇಶನ್‌ನಲ್ಲಿ ಏನಿದೆ ಏನಿಲ್ಲ. ಚೆಂದದ ಝರಿ, ಜಲಪಾತಗಳಿವೆ, ಅದ್ಭುತ ಸೀನಿಕ್‌ ಬ್ಯೂಟಿ ಇರುವ ತಾಣಗಳಿವೆ, ಸುಂದರವಾದ ಸರೋವರವಿದೆ. ಇಲ್ಲಿ ಬೋಟಿಂಗ್‌ ಇತ್ಯಾದಿ ಮನರಂಜನೆಗೆ ಅವಕಾಶ ಒದಗಿಸಲಾಗಿದೆ.

ವಿವಿಧ ಸಸ್ಯ ಸಂಪತ್ತಿನಿಂದ ಕೂಡಿದ ವೈಲ್ಡ್ ಲೈಫ್‌ ಸ್ಯಾಂಚ್ಯುರಿ ಇದೆ. ಜೊತೆಗೆ ಇಲ್ಲಿ ಸಾಕಷ್ಟು ಮಂದಿ ಬುಡಕಟ್ಟು ಜನರಿದ್ದಾರೆ. ಅವರ ಕಲೆ, ಆಚರಣೆಗಳ ಬಗ್ಗೆ ತಿಳಿದುಕೊಳ್ಳಬಹುದು. ಅವರ ಬದುಕು, ಜನಪದಗಳನ್ನು ಬಿಂಬಿಸೋ ಒಂದು ಮ್ಯೂಸಿಯಂ ಸಹ ಇಲ್ಲಿದೆ. ಇಲ್ಲಿ ಆರ್ಟಿಸ್ಟ್‌ ವಿಲೇಜ್‌ ಇದೆ. ಅಲ್ಲಿಗೆ ವಿಸಿಟ್‌ ಮಾಡಿ ಕಲೆ ಅರಳೋದನ್ನು ಕಂಡು ಬರಬಹುದು.

ಈ ಪ್ರದೇಶದಲ್ಲಿ ಗಿರಾ ಫಾಲ್ಸ್‌, ವನ್ಸದಾ ನ್ಯಾಶನಲ್‌ ಪಾರ್ಕ್ ಹೀಗೆ ಹಲವು ತಾಣಗಳಿವೆ. ಪ್ರಶಾಂತವಾಗಿರುವ ಈ ಜಾಗಗಳು ಹೆಚ್ಚು ಗಲಾಟೆ ಇಲ್ಲದೇ ನೋಡುಗರನ್ನು ತನ್ನತ್ತ ಸೆಳೆಯುವ ಹಾಗಿದೆ.

ಮತ್ತೊಂದು ವಿಶೇಷ ಅಂದ್ರೆ ಭಾರತದಲ್ಲಿಯೂ ಬೆತ್ತಲೆ ಬೀಚ್ ಗಳು ಇವೆ. ಇಲ್ಲಿ ಜಾಗ ಚೆಂದವಾಗಿದೆ, ಇಲ್ಲಿ ಸೆಲ್ಫಿ ತಗೊಳ್ತೀನಿ ಅಂತ ನಿಂತುಕೊಂಡ್ರೆ  ನಿಮ್ಮನ್ನು ಜೈಲಿಗೆ ಹಾಕ್ತಾರೆ. ಇಲ್ಲಿ ಸೆಲ್ಫಿ ತೆಗೆದುಕೊಳ್ಳೋದು ಅಪರಾಧ.

ದೇಶದಲ್ಲಿಯೇ ಸೆಲ್ಫಿ ಬ್ಯಾನ್ ಮಾಡಿದ ಮೊದಲ ಜಿಲ್ಲೆ ಅನ್ನೋ ಹೆಗ್ಗಳಿಕೆಗೆ ದಾಂಗ್‌ ಪಾತ್ರವಾಗಿದೆ. ಟಿ ಕೆ ದಮೋರ್‌ ಅನ್ನೋ ಇಲ್ಲಿನ ಆಡಳಿತಾಧಿಕಾರಿ ಜೂ.23 ರಿಂದ ಇಂಥದ್ದೊಂದು ನಿಯಮ ತಂದಿದ್ದಾರೆ. ಇದಕ್ಕೂ ಮೊದಲು ವಾಘೈ ಹಾಗೂ ಸಪುತಾರಾ ಹೈವೇ, ಜಲಪಾತ ಮೊದಲಾದೆಡೆ ಸೆಲ್ಫಿ ಬ್ಯಾನ್ ಮಾಡಲಾಗಿತ್ತು. ಈಗ ಈ ಊರುಗಳಲ್ಲಿ ಸೆಲ್ಫಿ ಬ್ಯಾನ್ ಮಾತ್ರ ಅಲ್ಲ, ಇಲ್ಲಿನ ಸ್ಥಳೀಯರೂ ಮಳೆಗಾಲದಲ್ಲಿ ನದೀ ತೀರಕ್ಕೆ ಬಟ್ಟೆ ತೊಳೆಯೋದಕ್ಕೆ, ಸ್ನಾನಕ್ಕೆ ಹೋಗುವುದಕ್ಕೂ ನಿಷೇಧ ಹೇರಲಾಗಿದೆ.

ಈ ಕಾನೂನನ್ನು ಯಾಕೆ ಜಾರಿಗೆ ತಂದರು ಅಂತ ನೋಡೋಣ. ಪ್ರಕೃತಿ ಸೌಂದರ್ಯವನ್ನು ಸವಿಯಲು ಅಪಾರ ಸಂಖ್ಯೆಯಲ್ಲಿ ಜನ ಇಲ್ಲಿಗೆ ಬರ್ತಾರೆ.  ಹೀಗೆ ಬಂದವರು ಅಪಾಯಕಾರಿ ಜಾಗಗಳಲ್ಲಿ ನಿಂತು ಸೆಲ್ಫಿ ತೆಗೆಯುತ್ತಾರೆ. ಇದರಿಂದ ಈ ಜಾಗದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜನರು ಸಾಯುವ ಪ್ರಕರಣಗಳು ಬೆಳಕಿಗೆ ಬಂದಿವೆ.

ಜನರು ಅಪಾಯ ಸ್ಥಳಗಳಲ್ಲಿ ಅಂದ್ರೆ ಜಲಪಾತ, ಬೆಟ್ಟದ ಅಂಚು, ನದಿ ದಂಡೆ, ಇಳಿಜಾರುಗಳಲ್ಲಿ ನಿಂತು ಸೆಲ್ಫಿ ಕ್ಲಿಕ್ಕಿಸುತ್ತಾರೆ. ಮಳೆಗಾಲವಾದ ಕಾರಣ ತೇವಾಂಶಕ್ಕೆ ಕಾಲು ಜಾರಿ ಬಿದ್ದು ಗಂಭೀರ ಗಾಯ ಮಾಡಿಕೊಳ್ಳುತ್ತಾರೆ, ಇಲ್ಲವೇ ಸಾವನ್ನಪ್ಪುತ್ತಾರೆ. ಈ ಕಾರಣದಿಂದ ಈ ಜಾಗಗಳಿಲ್ಲಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳಲು ನಿಷೇಧ ಹೇರಲಾಗಿದೆ.

ಇಲ್ಲಿನ ಜಿಲ್ಲಾಡಳಿತ ಇಂಥದ್ದೊಂದು ಕಠಿಣ ಕಾನೂನು ತಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕೋವಿಡ್‌ ಕಾರಣಕ್ಕೆ ಮುಚ್ಚಲಾಗಿದ್ದ ಪ್ರವಾಸಿ ತಾಣಗಳು ತೆರೆಯುತ್ತವೆ. ಆಗ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಪ್ರವಾಸಿಗರ ಸುರಕ್ಷತೆಗಾಗಿ ಜಿಲ್ಲಾಡಳಿತ ಈ ನಿಯಮ ತಂದಿದೆ.

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Food ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ

1–qwewqe

Ayodhya: ಸೂರ್ಯ ತಿಲಕ ಸಾಧ್ಯವಾಗಿಸಿದ ವಿಜ್ಞಾನಿಗಳಿಗೆ ತಲೆ ಬಾಗುತ್ತೇನೆ: ಅರುಣ್ ಯೋಗಿರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.