Snakes Village; ಇದು ಹಾವುಗಳ ಗ್ರಾಮ… ಇಲ್ಲಿ ಹಾವುಗಳು ಕೂಡ ಮನೆಯ ಸದಸ್ಯರೇ

ಇಲ್ಲಿ ಜನಸಂಖ್ಯೆಗಿಂತ ಹೆಚ್ಚಿದೆಯಂತೆ ಹಾವುಗಳ ಸಂಖ್ಯೆ

Team Udayavani, Apr 3, 2024, 6:06 PM IST

Snakes Village; ಇದು ಹಾವುಗಳ ಗ್ರಾಮ, ಇಲ್ಲಿ ಜನಸಂಖ್ಯೆಗಿಂತ ಹೆಚ್ಚಿದೆಯಂತೆ ಹಾವುಗಳ ಸಂಖ್ಯೆ

ಹಾವು ನೋಡುವುದು ಇರಲಿ ಹಾವಿನ ಸುದ್ದಿ ಕೇಳಿದರೆಯೇ ಒಮ್ಮೆ ಹಾರಿ ಬೀಳುತ್ತೇವೆ ಅಷ್ಟೊಂದು ಭಯ ಜನರಲ್ಲಿದೆ, ಆದರೆ ನಮ್ಮ ದೇಶದಲ್ಲಿ ಕೆಲವೊಂದು ಹಾವುಗಳನ್ನು ಪೂಜ್ಯನೀಯ ಭಾವದಿಂದ ನೋಡುತ್ತೇವೆ, ಜೊತೆಗೆ ನಾಗರ ಪಂಚಮಿ ಹಬ್ಬದ ಸಮಯದಲ್ಲಿ ವಿಶೇಷವಾದ ಪೂಜೆ ಪುನಸ್ಕಾರವನ್ನು ಮಾಡುತ್ತೇವೆ. ಆದರೆ ಇಲ್ಲೊಂದು ಗ್ರಾಮವಿದೆ ಈ ಗ್ರಾಮದ ಹೆಸರೇ ಹಾವಿನ ಗ್ರಾಮ ಎಂದು ಯಾಕೆಂದರೆ ಇಲ್ಲಿನ ಜನರು ಹಾವುಗಳೊಂದಿಗೆ ಬದುಕುತ್ತಾರೆ, ಅಷ್ಟೇ ಯಾಕೆ ಈ ಗ್ರಾಮದ ಜನರು ತಮ್ಮ ತಮ್ಮ ಮನೆಗಳಲ್ಲಿ ಹಾವುಗಳನ್ನು ತಮ್ಮ ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಾರಂತೆ, ಈ ವಿಚಾರ ಕೇಳಿ ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ, ಇನ್ನೊಂದು ವಿಚಾರ ಏನೆಂದರೆ ಈ ಗ್ರಾಮ ಇರುವುದು ನಮ್ಮ ಭಾರತ ದೇಶದಲ್ಲೇ.

ಬನ್ನಿ ಹಾಗಾದರೆ ಯಾವ ಪ್ರದೇಶದಲ್ಲಿದೆ ಈ ಗ್ರಾಮ ಜನರು ಯಾಕಾಗಿ ಹಾವುಗಳನ್ನು ತಮ್ಮ ಮನೆಯ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾವುಗಳು ಮನುಷ್ಯರಿಗೆ ಕಚ್ಚಲ್ವಾ ಈ ಎಲ್ಲ ವಿಚಾರದ ಬಗ್ಗೆ ತಿಳಿದುಕೊಂಡು ಬರೋಣ…

ಮಹಾರಾಷ್ಟ್ರದ ಪುಣೆಯಿಂದ ಸುಮಾರು 200 ಕಿಮೀ ದೂರದಲ್ಲಿರುವ ಸೊಲ್ಲಾಪುರ ಜಿಲ್ಲೆಯಲ್ಲಿರುವ ಸಣ್ಣ ಗ್ರಾಮವೇ ‘ಶೆಟ್ಪಾಲ್ ಗ್ರಾಮ’ ಈ ಗ್ರಾಮದಲ್ಲಿ ಹಲವಾರು ಕುಟುಂಬಗಳು ವಾಸಮಾಡುತ್ತಿವೆ. ವಿಶೇಷವೆಂದರೆ ಈ ಗ್ರಾಮದ ಜನರು ಹಾವುಗಳೊಂದಿಗೆ ವಾಸಮಾಡುತ್ತಾರೆ ಹಾಗಾಗಿ ಈ ಗ್ರಾಮಕ್ಕೆ ಹಾವುಗಳ ಗ್ರಾಮವೆಂದೇ ಹೆಸರು ಬಂದಿದೆ.

ಗ್ರಾಮದ ಜನಸಂಖ್ಯೆಗಿಂತ ಹಾವುಗಳ ಸಂಖ್ಯೆ ಹೆಚ್ಚು
ಅಂದಹಾಗೆ ಈ ಗ್ರಾಮದಲ್ಲಿ ಸುಮಾರು 2,600ಕ್ಕೂ ಹೆಚ್ಚು ಮಂದಿ ವಾಸಮಾಡುತ್ತಿದ್ದಾರಂತೆ ವಿಶೇಷವೆಂದರೆ ಈ ಗ್ರಾಮದಲ್ಲಿರುವ ಜನಸಂಖ್ಯೆಗಿಂತ ಹೆಚ್ಚು ಹಾವುಗಳು ಇವೆ ಎಂದು ಹೇಳಲಾಗುತ್ತಿದೆ ಹಾಗಾಗಿ ಹಾವುಗಳು ಗ್ರಾಮದಲ್ಲಿ ಆರಾಮವಾಗಿ ವಾಸಿಸುತ್ತವೆಯಂತೆ.

ಮನೆಗಳಲ್ಲಿ ಹಾವುಗಳಿಗೂ ವಾಸಸ್ಥಾನ
ಇನ್ನೊಂದು ವಿಶೇಷವೆಂದರೆ ಈ ಗ್ರಾಮದಲ್ಲಿ ಹಾವುಗಳನ್ನು ತಮ್ಮ ಕುಟುಂಬ ಸದಸ್ಯರಂತೆ ನೋಡಿಕೊಳ್ಳುತ್ತಾರೆ ಹಾಗಾಗಿ ಮನೆ ನಿರ್ಮಾಣ ಮಾಡುವಾಗ ಹಾವುಗಳಿಗೂ ಉಳಿದುಕೊಳ್ಳಲು ಮನೆಯ ಒಳಗೆ ಬಿಲಗಳ ವ್ಯವಸ್ಥೆಯನ್ನು ಮಾಡಿಕೊಂಡಿರುತ್ತಾರಂತೆ ಜೊತೆಗೆ ಹಾವುಗಳು ಯಾರ ಹೆದರಿಕೆಯೂ ಇಲ್ಲದೆ ಮನೆಯೊಳಗೇ ಸಂಚರಿಸುತ್ತಿರುತ್ತವೆ ಮನೆಯಲ್ಲಿರುವ ಮಕ್ಕಳೂ ಕೂಡ ಈ ಹಾವುಗಳನ್ನು ಕಂಡು ಹೆದರದೆ ಅವುಗಳ ಜೊತೆಗೆ ಬೆರೆಯುತ್ತಾರೆ.

ಹಾವುಗಳಿಂದ ಯಾವುದೇ ಅಪಾಯವಾಗಿಲ್ಲ:
ಹಾವುಗಳನ್ನು ಕಂಡ ಕೂಡಲೇ ಜಾಗ ಖಾಲಿ ಮಾಡುವ ನಾವುಗಳು ಆದರೆ ಅಲ್ಲಿ ಹಾಗಲ್ಲ ಸಣ್ಣ ಮಕ್ಕಳಿರುವಾಗಲೇ ಹಾವುಗಳ ಜೊತೆಗೆ ಇದ್ದುಕೊಂಡು ಹಾವುಗಳ ಹೆದರಿಕೆಯೇ ಇಲ್ಲದಂತಾಗಿರುತ್ತದೆ ಹಾಗಾಗಿ ಆ ಗ್ರಾಮದ ಮಕ್ಕಳಿಗೂ ಹಾವಿನ ಹೆದರಿಕೆ ಇಲ್ಲದಂತಾಗಿದೆ. ಅಲ್ಲದೆ ಈ ಹಾವುಗಳು ಇದುವರೆಗೂ ಯಾವುದೇ ಒಬ್ಬ ವ್ಯಕ್ತಿಗೂ ಕಚ್ಚಿದ ಉದಾಹರಣೆ ಇಲ್ಲವಂತೆ, ಹಾಗಾಗಿ ನಾವು ನಾಗರ ಪಂಚಮಿಯಂದು ಹಾವಿಗೆ ಪೂಜೆ ಸಲ್ಲಿಸಿದರೆ ಈ ಗ್ರಾಮದ ಜನರು ವರ್ಷವಿಡೀ ನಾಗರಾಜನ ಸೇವೆಯನ್ನು ಮಾಡಿಕೊಂಡೆ ಇರುವವರು, ಜೊತೆಗೆ ಹಾವುಗೆ ಪೂಜ್ಯನೀಯ ಭಾವದಿಂದ ಆಹಾರವನ್ನು ನೀಡುತ್ತಾರೆ.

ಮನೆಯ ಸದಸ್ಯರಂತೆ ಹಾವುಗಳು ಮನೆಯೊಳಗೇ ಆಚೆ ಈಚೆ ತಿರುಗಾಡುತ್ತಿರುತ್ತವೆ ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳನ್ನು ಪೋಸ್ಟ್ ಮಾಡಲಾಗಿದೆ, ಮನೆಮಂದಿ ತಮ್ಮ ಪಾಡಿಗೆ ಮನೆಗೆಲಸ ಮಾಡಿಕೊಂಡಿದ್ದರೆ ಹಾವುಗಳು ಕೂಡ ಅವುಗಳ ಪಾಡಿಗೆ ಮನೆಯೊಳಗೇ ಸಂಚರಿಸುತ್ತಿರುತ್ತವೆ.

ಶಾಲೆಯಲ್ಲೂ ಹಾವು:
ಈ ಗ್ರಾಮದಲ್ಲಿರುವ ಶಾಲೆಯ ಕೊಠಡಿಯೊಳಗೂ ಹಾವುಗಳು ತಿರುಗಾಡುತ್ತಿರುತ್ತವೆಯಂತೆ ಅಷ್ಟು ಮಾತ್ರವಲ್ಲದೆ ಕಲೆ ವಿದ್ಯಾರ್ಥಿಗಳು ಹಾವುಗಳನ್ನು ಶಾಲೆಗೂ ತರುತ್ತಾರಂತೆ. ಶಾಲೆಯ ಶಿಕ್ಷಕರು ಹಾವುಗಳ ಜೊತೆಗೆ ಪಾಠ ಮಾಡುತ್ತಾರೆ.

ಹಲವಾರು ವರ್ಷಗಳಿಂದ ಜನ ಈ ಗ್ರಾಮದಲ್ಲಿ ಹಾವುಗಳ ಜೊತೆ ವಾಸಮಾಡುತ್ತಿದ್ದಾರೆ ಆದರೆ ಯಾವ ಕಾರಣಕ್ಕಾಗಿ ಈ ಗ್ರಾಮದ ಜನರು ಹಾವುಗಳನ್ನು ಮನೆ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂಬುದು ಮಾತ್ರ ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ನೀವು ಹಾವಿನ ಗ್ರಾಮವನ್ನು ನೋಡಲು ಬಯಸುತ್ತೀರಾ?
ನೀವು ಶೆಟ್‌ಫಾಲ್‌ಗೆ ಹೋಗಲು ಬಯಸಿದ್ದರೆ, ಈ ಗ್ರಾಮಕ್ಕೆ ಹತ್ತಿರವಿರುವ ರೈಲು ನಿಲ್ದಾಣವೆಂದರೆ ಮೊಡ್ನಿಂಬ್ ಮತ್ತು ಅಷ್ಟಿ ರೈಲು ನಿಲ್ದಾಣ ಇಲ್ಲಿಗೆ ಬಂದು ಬಾಡಿಗೆ ವಾಹನದಲ್ಲಿ ಶೆಟ್ಪಾಲ್ ಗ್ರಾಮವನ್ನು ತಲುಪಬಹುದು ಇಲ್ಲವಾದಲ್ಲಿ ಶೋಲಾಪುರಕ್ಕೆ ಬಂದು ಇಲ್ಲಿಂದ ಕ್ಯಾಬ್ ಅಥವಾ ಬಸ್ ಮೂಲಕ ಹಾವಿನ ಗ್ರಾಮವನ್ನು ತಲುಪಬಹುದು.

– ಸುಧೀರ್. ಪರ್ಕಳ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.