ಮಕ್ಕಳ ಆರೋಗ್ಯ ರಕ್ಷಣೆಗಾಗಿ ಯೋಗಾಸನ


Team Udayavani, Jul 9, 2021, 6:10 AM IST

ಮಕ್ಕಳ ಆರೋಗ್ಯ ರಕ್ಷಣೆಗಾಗಿ ಯೋಗಾಸನ

“ಯೋಗ’ ನಮ್ಮ ಪೂರ್ವಜರು ಮನುಕುಲಕ್ಕೆ ಕೊಟ್ಟ ಬಲುದೊಡ್ಡ ಕೊಡುಗೆ. ಇದು ಶಾಂತಿ ಹಾಗೂ ಅಭಿವೃದ್ಧಿಗಾಗಿ ಒಂದು ರಹದಾರಿ ಎನ್ನಬಹುದು. ಲೌಕಿಕ ಸುಖಗಳು ನಿಜವಾದ ಸಂತೋಷವನ್ನು ಕೊಡುವುದಿಲ್ಲ. ನಮ್ಮ ಆಶೋತ್ತರಗಳನ್ನು ಈಡೇರಿಸುವುದಕ್ಕೆ ಎಣೆಯೇ ಇಲ್ಲ. ನಮ್ಮ ದೈನಂದಿನ ಕಾರ್ಯಗಳನ್ನು ನಿಷ್ಕಾಮವಾಗಿ ಮಾಡುವುದೇ ಯೋಗ. ಈ ಒಂದು ನಿಷ್ಪಕ್ಷವಾದ ಧೋರಣೆಯನ್ನು ಹೊಂದಿ ನಮ್ಮ ಕರ್ತವ್ಯಗಳನ್ನು ನಿಭಾಯಿಸುವುದೇ ಯೋಗ.

ಇದಕ್ಕೆ ಬೇಕಾದ ಸಾಧನಗಳು – ದೇಹ/ಶರೀರ (ಸ್ವಸ್ಥ), ಮನಸ್ಸು (ಶುದ್ಧ), ಬುದ್ಧಿ (ಸಮರ್ಪಕವಾಗಿ ವಿವೇಚನಯುಕ್ತ).

ಆದರೆ ಈಗಿನ ಪರಿಸ್ಥಿತಿ: ದೇಹ (ಸ್ವಸ್ಥ  ಇಲ್ಲ ),

ಮನಸ್ಸು (ಶುದ್ಧವಿಲ್ಲ), ಬುದ್ಧಿ (ವಿವೇಚನಾ ರಹಿತ) ಯೋಗವು ಇವೆಲ್ಲವನ್ನು ಸರಿಪಡಿ ಸಲು ಸಹಾಯಕ. ಯೋಗಾಸನವು ಬರೀ ಅವಯವಗಳ ಬಾಗಿ ಸುವಿಕೆ /ತಿರುಚುವಿಕೆಯ ಪ್ರದರ್ಶನವಲ್ಲ. ಇದು ಎಲ್ಲ ವಯೋಮಿತಿಯವರಿಗೂ ಅನ್ವಯಿ ಸುತ್ತದೆ. ಒಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಅಡಿಪಾಯವನ್ನು ಒದಗಿಸುತ್ತದೆ.

ಮಕ್ಕಳಲ್ಲಿ  ಯೋಗದ ವಿವಿಧ ಸಾಧನಗಳಿಂದ ಆಗುವ ಲಾಭಗಳು :

  1. ಮಂತ್ರ: ಮಂತ್ರಗಳ ಉಚ್ಚಾರಣೆಯಿಂದ ಆಗುವ ತರಂಗಗಳ ಉತ್ಪತ್ತಿ ಮಾನಸಿಕ ನೆಮ್ಮದಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಭಾಷೆ ಬೆಳವಣಿಗೆಗೆ ಉಪಯುಕ್ತವಾಗುತ್ತದೆ. ಬೇರೆ ಯವರ ಜತೆ ಬೆರೆಯುವಾಗ, ಕಣ್ಣಲ್ಲಿ ನೇರವಾಗಿ ನೋಡಿ ಮಾತನಾಡುವುದು ಇತ್ಯಾದಿ.
  2. ಉಸಿರಾಟ: ದೀರ್ಘ‌ ಶ್ವಾಸದಿಂದ ಹಿತ ವಾದ ಅನುಭವ/ಪರಿಣಾಮ ಉಂಟಾ ಗುತ್ತದೆ. ಮಕ್ಕಳು ಒತ್ತಡವನ್ನು ಎದುರಿಸಿದಾಗ ಅವರಿಗೆ ನಯವಾಗಿ ದೀರ್ಘ‌ ಶ್ವಾಸವನ್ನು ತೆಗೆ ದುಕೊಳ್ಳುವಂತೆ ತರಬೇತಿ ಕೊಡಬಹುದು. ಸರಿ ಯಾದ ಉಸಿರಾಟ (ಮನಃಪೂರ್ವಕವಾಗಿ) ಮಾತನಾಡುವುದರಿಂದ ದೈಹಿಕ ಹಾಗೂ ಮಾತಿನ ಸಮ ತೋಲನ ಕಾಯ್ದುಕೊಳ್ಳಬಹುದು.
  3. ಆಸನಗಳು: ಸರ್ವಾಂಗಿಣ ಬೆಳವಣಿಗೆ, ದೇಹದ ಅರಿವು.
04. ಗಾಢ ವಿಶ್ರಾಂತಿ: ಸ್ವಲ್ಪ (ಅತ್ಯಲ್ಪ) ಸಮಯದ ಗಾಢ ವಿಶ್ರಾಂತಿಯಿಂದ ಮಕ್ಕಳಿಗೆ

peractive children especially)ತುಂಬ ಲಾಭವಾಗುತ್ತದೆ & Done by using risulalization techniques.


  1. ಧ್ಯಾನದ ಸಾಧನಗಳು:
    ಏಕಾಗ್ರತೆಯನ್ನು ವೃದ್ಧಿಸುತ್ತದೆ. ಒಂದು ಕಡೆ ಕುಳಿತು ಕೆಲಸ ಮಾಡುವುದಕ್ಕೆ ಸಹಾಯವಾಗುತ್ತದೆ. ಸಕಾರಾತ್ಮಕ ಭಾವನೆಗಳಿಗೆ ಒತ್ತು ಕೊಟ್ಟು, ಸರಳವಾದ ಸಂಕಲ್ಪವನ್ನು ಮನನ ಮಾಡಿಸುವುದರಿಂದ ತುಂಬಾ ಉಪಯೋಗವಿದೆ.

 ಶಿಶುಗಳಲ್ಲಿ  ಯೋಗ :

  • ಹೆತ್ತವರೊಂದಿಗೆ interaction
  • ಕೈಕಾಲುಗಳಿಗೆ ಸೈಕ್ಲಿಂಗ್‌ ಚಲನೆ ಮಾಡಿಸುವುದು./ 5ರಿಂದ 15 ನಿಮಿಷ.
  • ಕೈಗಳ ಚಲನೆ.
  • ಹಾಡುಗಳು – ಭಾವದೊಂದಿಗೆ.

Toddlers upto 3yrs: ವರ್ಷಕ್ಕಿಂತ ಮೇಲೆ – ಮೂರು ವರ್ಷಗಳವರೆಗೆ

  • ಸರಳವಾದ stretching
  • ಪ್ರಾಣಿಗಳ ಅನುಕರಣೆ
  • “ನಾನು ಮಾಡಬಲ್ಲೆ’ ಎಂಬ ಸಕಾರಾತ್ಮಕ ಸಂಕಲ್ಪ / 5-10 ನಿಮಿಷ. 30-60 ಸೆಕೆಂಡ್‌ ವಿಶ್ರಾಂತಿ.

Preschooler (4-6 yrs) :

  • ಯೋಗದ ಬಗ್ಗೆ ಸ್ವಲ್ಪ ಮಾಹಿತಿ  ಕೊಡುವುದು. /15-25 ನಿಮಿಷ
  • ಆಲೋಚನ ಲಹರಿಗೆ ಅವಕಾಶ ಮಾಡಿ ಕೊಡುವುದು. / 15-25 ನಿಮಿಷ
  • ಒಂದೆಡೆ ಕುಳಿತುಕೊಂಡು ಅಂತರ್ಮುಖೀ ಆಗುವುದು. / 15-25 ನಿಮಿಷ
  • ಸರಳ ಆಸನಗಳು / 15-25 ನಿಮಿಷ, 1-2 ನಿಮಿಷ ವಿಶ್ರಾಂತಿ.

ಸಾಮಾನ್ಯ ಮಾಹಿತಿಗಳು:

  • ಯೋಗ ಸ್ಪರ್ಧಾತ್ಮಕ ಅಲ್ಲ: ಶುಭ್ರ ಗಾಳಿ ಇರುವ ಸ್ಥಳ ಆಯ್ಕೆ.
  • ಆಹಾರ ಸೇವಿಸುವ ಮೊದಲು ಆಸನಗಳ ಅಭ್ಯಾಸ.
  • ಸರಳವಾದ ಆಸನಗಳು ಮೃದುವಾಗಿ ಮಾಡಿಸುವುದು.
  • ಉಸಿರಾಟದ ಕಡೆ ಗಮನ ಕೊಡುವುದಕ್ಕೆ ಒತ್ತು.
  • ವಿಶ್ರಾಂತಿಯೊಂದಿಗೆ ಮುಗಿಸುವುದು.
  • ಪ್ರಾರಂಭಕ್ಕೆ ಪ್ರಾರ್ಥನೆ ಮತ್ತು ಕೊನೆಗೆ ಶಾಂತಿ ಪಾಠ.
  1. 7 ವರ್ಷ ಮೇಲ್ಪಟ್ಟವರಿಗೆ:

ಅವರ ಸಾಮರ್ಥ್ಯಕ್ಕೆ ತಕ್ಕಂತೆ ನಿಯಮಿತ ಸ್ಥಳ, ಸಮಯವನ್ನು ನಿಗದಿಪಡಿಸಿ ಯೋಗಸಾಧನಗಳನ್ನು ಮಾಡಿಸುವುದು.

  • 30 ನಿಮಿಷ
  • 3-5 ನಿಮಿಷ ವಿಶ್ರಾಂತಿ.

ಯೋಗಾಸನದ ಲಾಭಗಳು :

  1. ಶಾರೀರಿಕ ಸಮತೋಲನ ಮತ್ತು ನಮ್ಯತೆ
  2. ಹೃದಯದ ಸಮರ್ಪಕ ಕಾರ್ಯನಿರ್ವಹಿಸುವಿಕೆ.
  3. ಸರಿಯಾದ ಪಚನ ಕ್ರಿಯೆ.
  4. ಹೊಟ್ಟೆಯ ಸ್ನಾಯುಗಳ ಬಲವೃದ್ಧಿ.
  5. ಅವಯವದ ಸ್ನಾಯುಗಳು ಬಲಿಷ್ಠಗೊಳ್ಳುವುದು.
  6. ತೂಕ ನಿರ್ವಹಣೆ.
  7. ಶಕ್ತಿಯ ಪ್ರಮಾಣ ಹೆಚ್ಚಿಸುವುದು.
  8. ರೋಗ ನಿರೋಧಕ ಶಕ್ತಿ ಬಲಪಡಿಸುವಿಕೆ. ಶಕ್ತಿ (ಸಮತೋಲನ ಮತ್ತು ಅಗತ್ಯಕ್ಕೆ ತಕ್ಕಂತೆ).

ಮಾನಸಿಕ ಲಾಭಗಳು :

1. ಅತಿಯಾದ ಒತ್ತಡದಿಂದ ನಿವಾರಣೆ

  1. ಒತ್ತಡಗಳಿಂದ ಬರುವಂಥ ಕಾಯಿಲೆಗಳನ್ನು

ದೂರ ಇಡುವುದು.

  1. ಬುದ್ಧಿಮತ್ತೆಯ ಬೆಳವಣಿಗೆ.

ಹೇಗೆ ಒತ್ತಡ ಮುಕ್ತಗೊಳಿಸುತ್ತದೆ? :

  1. ನಮ್ಮ ಸ್ನಾಯುಗಳ, ರಕ್ತನಾಳಗಳ, ನರಗಳ ಇತ್ಯಾದಿ ಮೇಲೆ ಮಸಾಜ್‌ ಮಾಡಿದಂತಾಗಿ ಮುದ ನೀಡುತ್ತದೆ.
  2. ಮನಸ್ಸಿಗೆ ಖುಷಿ ಕೊಡುವಂಥ Happy Hormones (Endorphins)) ಬಿಡುಗಡೆಯಾಗುತ್ತದೆ.
  3. Sympathetic & Parasympathetic ಚಟುವಟಿಕೆಯ ಸಮತೋಲನ.
  4. ಯಾವುದೇ ಕಾರ್ಯ ನಿರ್ವಹಿಸುವಾಗ ಏಕಾಗ್ರತೆಯನ್ನು ಒದಗಿಸುತ್ತದೆ. (ಆಸನಗಳ ಅಭ್ಯಾಸ‌, ಪ್ರಾಣಾಯಾಮ, ಧ್ಯಾನದ ಸಾಧನಗಳಿಂದ).

 

-ಡಾ| ದಿನೇಶ್‌ ಎಂ. ನಾಯಕ್‌

ಪ್ರೊಫೆಸರ್‌ ಮತ್ತು ಮುಖ್ಯಸ್ಥರು, ಮಕ್ಕಳ ವಿಭಾಗ,

ಟಿ.ಎಂ.ಎ. ಪೈ ಆಸ್ಪತ್ರೆ, ಉಡುಪಿ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.