England ವಿರುದ್ದದ ಗೆಲುವು ಭೂಕಂಪ ಪೀಡಿತ ಅಫ್ಘಾನ್‌ ಜನತೆಗೆ ಅರ್ಪಣೆ


Team Udayavani, Oct 17, 2023, 12:00 AM IST

1-csasds

ಹೊಸದಿಲ್ಲಿ: ಅಫ್ಘಾನಿಸ್ಥಾನದ ಈ ಐತಿಹಾಸಿಕ ಗೆಲುವಿನ್ನು ದೇಶದ ಭೂಕಂಪ ಪೀಡಿತ ಜನತೆಗೆ ಅರ್ಪಿಸುವುದಾಗಿ ಪಂದ್ಯಶ್ರೇಷ್ಠ ಆಟಗಾರ ಮುಜೀಬ್‌ ಉರ್‌ ರೆಹಮಾನ್‌ ಹೇಳಿದ್ದಾರೆ.

ರವಿವಾರದ ಹೊಸದಿಲ್ಲಿ ಮುಖಾ ಮುಖಿಯಲ್ಲಿ ಅಫ್ಘಾನಿಸ್ಥಾನ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನು 69 ರನ್ನುಗಳಿಂದ ಕೆಡವಿ ಜಾಗತಿಕ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಿತ್ತು. ಇದು 18 ವಿಶ್ವಕಪ್‌ ಪಂದ್ಯಗಳಲ್ಲಿ ಅಫ್ಘಾನ್‌ಗೆ ಒಲಿದ ಕೇವಲ 2ನೇ ಜಯ. ತಂಡದ ಸಾಂಘಿಕ ಪ್ರಯತ್ನದಿಂದ ಇಂಥದೊಂದು ಸಾಧನೆ ಸಾಧ್ಯವಾಗಿತ್ತು.

“ವಿಶ್ವಕಪ್‌ ಪಂದ್ಯಾವಳಿಯಲ್ಲಿ ಭಾಗ ವಹಿಸಲು ಇಲ್ಲಿಗೆ ಬಂದಿರುವುದು, ಹಾಲಿ ಚಾಂಪಿಯನ್‌ ತಂಡವೊಂದನ್ನು ಸೋಲಿಸಿರುವುದು ನಿಜಕ್ಕೂ ಮಹತ್ಸಾಧ ನೆಯಾಗಿದೆ. ನಮ್ಮ ಪಾಲಿಗೆ ಇದು ಹೆಮ್ಮೆಯ ಹಾಗೂ ಅತ್ಯಂತ ಖುಷಿಯ ಸಂಗತಿ. ಇಂಥದೊಂದು ಗೆಲುವಿನ ಹಿಂದೆ ನಮ್ಮ ಅಪಾರ ಪರಿಶ್ರಮವಿದೆ. ನಮ್ಮ ತಂಡದ ಬಗ್ಗೆ ಬಹಳ ಅಭಿಮಾನ ಮೂಡುತ್ತಿದೆ. ನಾನು ಈ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ದೇಶದ ಭೂಕಂಪ ಪೀಡಿತ ಸಂತ್ರಸ್ತರಿಗೆ ಅರ್ಪಿಸುತ್ತೇನೆ’ ಎಂದು ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿರುವ ಮುಜೀಬ್‌ ಉರ್‌ ರೆಹಮಾನ್‌ ಹೇಳಿದರು.
ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಆಡಲಿಳಿದ ಮುಜೀಬ್‌ 28 ರನ್‌ ಬಾರಿಸುವ ಜತೆಗೆ 51 ರನ್ನಿಗೆ 3 ವಿಕೆಟ್‌ ಉಡಾಯಿಸಿದ್ದರು. ಜೋ ರೂಟ್‌, ಹ್ಯಾರಿ ಬ್ರೂಕ್‌ ಮತ್ತು ಕ್ರಿಸ್‌ ವೋಕ್ಸ್‌ ಅವರನ್ನು ಮುಜೀಬ್‌ ಪೆವಿಲಿಯನ್‌ಗೆ ಅಟ್ಟಿದ್ದರು.

ಬೌಲಿಂಗ್‌ ಆರಂಭಿಸುವ ಸವಾಲು
ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್‌ ಅಫ್ಘಾನ್‌ ಬೌಲಿಂಗ್‌ ಆರಂಭಿಸುವುದೊಂದು ವಿಶೇಷ. ಇದು ಅತ್ಯಂತ ಕಠಿನ ಸವಾಲು ಎಂಬುದಾಗಿ ಅವರು ಹೇಳುತ್ತಾರೆ. “ಕೇವಲ ಇಬ್ಬರು ಕ್ಷೇತ್ರರಕ್ಷಕರನ್ನು ಬೌಂಡರಿ ಗೆರೆಯಲ್ಲಿ ನಿಲ್ಲಿಸಿ ಓರ್ವ ಸ್ಪಿನ್ನರ್‌ ಬೌಲಿಂಗ್‌ ಆರಂಭಿಸುವುದು ನಿಜಕ್ಕೂ ಕಷ್ಟ. ಇದೊಂದು ದೊಡ್ಡ ಸವಾಲು. ಇದನ್ನು ಸ್ವೀಕರಿಸುವ ಧೈರ್ಯ ಇದ್ದರಷ್ಟೇ ಇಂಥ ರಿಸ್ಕ್ ತೆಗೆದು ಕೊಳ್ಳಬೇಕು. ಹಿಂದೆ ವಿಶ್ವಕಪ್‌ನಲ್ಲಿ ಇಂಥ ಅನೇಕ ಸ್ಪಿನ್‌ ಪ್ರಯೋಗ ನಡೆದಿತ್ತು. ನಾನು ಇದನ್ನು ಬಹಳ ಕಷ್ಟದಿಂದ ನಿಭಾಯಿಸುತ್ತಿದ್ದೇನೆ. ಇಲ್ಲಿ ಲೈನ್‌-ಲೆಂತ್‌ ಕಾಪಾಡಿಕೊಳ್ಳುವುದು ಮುಖ್ಯ. ಇದರಲ್ಲಿ ನಾನು ಯಶಸ್ವಿ ಆಗುತ್ತಿದ್ದೇನೆ’ ಎಂಬುದಾಗಿ ಮುಜೀಬ್‌ ಹೇಳಿದರು.

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

World Cup 2023; ಫೈನಲ್ ನಲ್ಲಿ ನಾವು ರಕ್ಷಣಾತ್ಮಕವಾಗಿ ಆಡಿದ್ದಲ್ಲ,ಆದರೆ….: ಕೋಚ್ ದ್ರಾವಿಡ್

1-sadsdas

World Cup 2023 ; ಭಾರತವನ್ನು ರೂಪಿಸಿದ ತ್ರಿಮೂರ್ತಿಗಳು

1-qweqwwqe

ICC ವಿಶ್ವಕಪ್‌ ಸಾಧಕರ ತಂಡಕ್ಕೆ ರೋಹಿತ್‌ ನಾಯಕ; ತಂಡ ಹೀಗಿದೆ

1-ww-eqeqwe

World Cup Final; ವೀಕ್ಷಕರು ಮೌನಕ್ಕೆ ಶರಣು:ಕ್ಯಾಪ್ಟನ್‌ ಪ್ಯಾಟ್‌ ಕಮಿನ್ಸ್‌  ಫುಲ್‌ ಖುಷ್‌

1-saddasd

Head line ನಲ್ಲಿ ಮಿಂಚಿದ ಟ್ರ್ಯಾವಿಸ್‌ ಹೆಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.