ಸಾಯಿಪ್ರಕಾಶ್ 99ನೇ ಚಿತ್ರ ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು
Team Udayavani, Feb 19, 2017, 4:41 PM IST
ನಿರ್ದೇಶಕ ಸಾಯಿಪ್ರಕಾಶ್ ಈಗ ತಮ್ಮ 99ನೇ ಚಿತ್ರ ನಿರ್ದೇಶನ ಮಾಡಲು ಸಿದ್ಧರಾಗಿದ್ದಾರೆ. ಆ ಚಿತ್ರಕ್ಕೆ “ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು’ ಎಂದು ಹೆಸರಿಡಲಾಗಿದೆ. ಅಲ್ಲಿಗೆ ಸಾಯಿಪ್ರಕಾಶ್ ಮತ್ತೂಂದು ಭಕ್ತಿಪ್ರಧಾನ ಚಿತ್ರ ನಿರ್ದೇಶಿಸಲು ಹೊರಟಿದ್ದಾರೆನ್ನಬಹುದು. ಈ ಚಿತ್ರ ಮಾರ್ಚ್ 3 ರಂದು
ಆರಂಭವಾಗಲಿದೆ. ವಿಶ್ವ ಗಂಗ ಪ್ರೊಡಕ್ಷನ್ನಡಿ ಚಿತ್ರ ನಿರ್ಮಾಣವಾಗುತ್ತಿದೆ. ಶ್ರೀ ವಿಶ್ವಾರಾಧ್ಯ ಸಿದ್ದಿ ಸಂಸ್ಥಾನ ಮಠ ಯಾದಗಿರಿಯ ಬಳಿ ಇರುವ ದೇವಸ್ಥಾನ ಅಬ್ಬೆ ತುಮಕೂರು ಗ್ರಾಮದಲ್ಲಿ ನೆಲಸಿದೆ.
ಅಲ್ಲಿಯ ಪ್ರಸಿದ್ದ ವ್ಯಕ್ತಿ ಅಂದರೆ ಜೀವಂತ ಸಮಾಧಿ ಆದ ಶ್ರೀ ವಿಶ್ವಾರಾಧ್ಯ ಸಿದ್ದಿಪುರುಷರು. ಮಹಾಶಿವರಾತ್ರಿಯ ಸಮಯದಲ್ಲಿ ಇಲ್ಲಿ ನಡೆಯುವ ಜಾತ್ರೆಗೆ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ,
ಆಂಧ್ರ ಪ್ರದೇಶ, ತಮಿಳು ನಾಡು ರಾಜ್ಯಗಳಿದ ಧಾವಿಸಿ ಶ್ರೀ ವಿಶ್ವಾರಾಧ್ಯರ ಸಂಸ್ಥಾನದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವರು. ಶ್ರೀ ವಿಶ್ವಾರಾಧ್ಯರು ಸಾಯಿಪ್ರಕಾಶ್ 99ನೇ ಚಿತ್ರ
ಶ್ರೀ ವಿಶ್ವಾರಾಧ್ಯ ಸಿದ್ಧಿಪುರುಷರು ಈಗಲೂ ಸಕಲ ಸಂಕಷ್ಟಗಳನ್ನು ಭಕಾಧಿಗಳಿಗೆ ಪರಿಹರಿಸಿರುವ
ಉದಾಹರಣೆಗಳಿವೆ. ಈಗ ಶ್ರೀ ವಿಶ್ವಾರಾಧ್ಯ ಸ್ವಾಮಿಗಳ ಬಗ್ಗೆ ಹಲವಾರು ವಿಚಾರಗಳನ್ನು
ಪರದೆಯ ಮೇಲೆ ತರಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್.
ಚಿತ್ರದಲ್ಲಿ ಸಾಯಿಕುಮಾರ್ ನಟಿಸುವ ಸಾಧ್ಯತೆ ಇದೆಯಂತೆ. ನಿರ್ದೇಶಕ ಸಾಯಿಪ್ರಕಾಶ್ ಸಧ್ಯದÇÉೇ ಅವರ ಕಲಾವಿದರ ಹಾಗೂ ತಾಂತ್ರಿಕ ತಂಡವನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ