ಜಿಎಸ್‌ಟಿ ಅಡಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರ: ಪಾರದರ್ಶಕತೆಗೆ ಸಹಕಾರಿ


Team Udayavani, Oct 14, 2017, 9:00 AM IST

GST-Logo-2-600.jpg

ಆರ್ಥಿಕತೆ ಚಟುವಟಿಕೆಗಳಿಗೆ ಅತಿ ಹೆಚ್ಚಿನ ಯೋಗದಾನ ನೀಡುವ ವಲಯಗಳಲ್ಲಿ ರಿಯಲ್‌ ಎಸ್ಟೇಟ್‌ ಕೂಡ ಸೇರಿದೆ. ಒಂದು ಅಂದಾಜಿನ ಪ್ರಕಾರ 2020ಕ್ಕಾಗುವಾಗ ಭಾರತ‌ದ ರಿಯಲ್‌ ಎಸ್ಟೇಟ್‌ ವ್ಯವಹಾರ 12 ಲಕ್ಷ ಕೋಟಿಗೇರಲಿದೆ. ಕೃಷಿಯ ಬಳಿಕ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದು ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ. ಜಿಡಿಪಿಗೆ ಸರಾಸರಿ ಶೇ.6 ಕೊಡುಗೆ ಸಲ್ಲುತ್ತಿರುವುದು ರಿಯಲ್‌ ಎಸ್ಟೇಟ್‌ನಿಂದ. ಈ ವಲಯನ್ನು ನಂಬಿಕೊಂಡು ಸುಮಾರು 250 ಉದ್ದಿಮೆಗಳಿವೆ. ಅತಿ ಹೆಚ್ಚು ಹಣ ಹೂಡಿಕೆಯಾಗುತ್ತಿರುವುದು ಕೂಡ ರಿಯಲ್‌ ಎಸ್ಟೇಟ್‌ ವಲಯದಲ್ಲಿ. ಆದರೆ ಇದೇ ವೇಳೆ ಅತಿ ಹೆಚ್ಚು ತೆರಿಗೆ ವಂಚನೆ ನಡೆಯುತ್ತಿರುವುದು ಮತ್ತು ಪಾರದರ್ಶಕತೆಯ ಕೊರತೆಯಿರುವುದು ಕೂಡ ರಿಯಲ್‌ ಎಸ್ಟೇಟ್‌ ವಲಯದಲ್ಲಿ ಎನ್ನುವ ಸತ್ಯವನ್ನು ಕೂಡ ನಾವು ಒಪ್ಪಿಕೊಳ್ಳಬೇಕು. ದೇಶದ ಆರ್ಥಿಕತೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುವ ರಿಯಲ್‌ ಎಸ್ಟೇಟ್‌ ಸದ್ಯ ಜಿಎಸ್‌ಟಿ ವ್ಯಾಪ್ತಿಗೆ ಒಳಪಟ್ಟಿಲ್ಲ. ಆದರೆ ಇದೀಗ ಸರಕಾರ ರಿಯಲ್‌ ಎಸ್ಟೇಟ್‌ಗೆ ಜಿಎಸ್‌ಟಿ ಅನ್ವಯಿಸುವ ಕುರಿತು ಚಿಂತನೆ ನಡೆಸುತ್ತಿದೆ. ಹಣಕಾಸು ಸಚಿವ ಅರುಣ್‌ ಜೇತ್ಲೀ ಗುರುವಾರ ಈ ಕುರಿತು ಸುಳಿವೊಂದನ್ನು ನೀಡಿದ್ದಾರೆ. ನ.9ರಂದು ಗುವಾಹಟಿಯಲ್ಲಿ ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ರಿಯಲ್‌ ಎಸ್ಟೇಟ್‌ ಅನ್ನು ಜಿಎಸ್ಟಿಗೆ ವ್ಯಾಪ್ತಿಗೊಳಪಡಿಸುವ ಕುರಿತು ಚರ್ಚೆ ನಡೆಯಲಿದೆ ಎಂದಿದ್ದಾರೆ ಜೇತ್ಲೀ. ಒಂದೇ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಆದರೆ ಈ ನಿಟ್ಟಿನಲ್ಲಿ ಸರಕಾರ ಮುಂದಡಿ ಇಟ್ಟಿರುವುದು ಸಕಾರಾತ್ಮಕವಾದ ನಡೆ ಎನ್ನಬಹುದು. ಜಿಎಸ್‌ಟಿ ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ನಡೆಯುತ್ತಿರುವ ನಕಲಿ ವ್ಯವಹಾರಗಳಿಗೆ ಕಡಿವಾಣ ಹಾಕಿ ಈ ಕ್ಷೇತ್ರಕ್ಕೆ ತೀರಾ ಅಗತ್ಯವಾಗಿರುವ ಪಾರದರ್ಶಕತೆಯನ್ನು ತರಲಿದೆ. 

ಪ್ರಸ್ತುತ ರಿಯಲ್‌ ಎಸ್ಟೇಟ್‌ಗೆ ವ್ಯಾಟ್‌, ಸೇವಾ ತೆರಿಗೆ, ಅಬಕಾರಿ ಸುಂಕ, ಪ್ರವೇಶ ತೆರಿಗೆ, ನೋಂದಣಿ ಶುಲ್ಕ, ಅಕ್ಟ್ರಾಯ್‌ ಎಂದು ಹತ್ತಾರು ರೀತಿಯ ತೆರಿಗೆಗಳಿವೆ. ಅಂತೆಯೇ ಈ ತೆರಿಗೆಗಳನ್ನು ತಪ್ಪಿಸುವ ಸಲುವಾಗಿ ಬಿಲ್ಡರ್‌ಗಳು ಮತ್ತು ಕಂಟ್ರಾಕ್ಟರ್‌ಗಳು ಹತ್ತಾರು ಒಳದಾರಿಗಳನ್ನು ಕೂಡ ಕಂಡುಕೊಂಡಿದ್ದಾರೆ. ಇವೆಲ್ಲವನ್ನೂ ಮನೆ ಅಥವಾ ಸ್ತಿರಾಸ್ಥಿಯ ಅಂತಿಮ ಬೆಲೆಯಲ್ಲಿ ಸೇರಿಸಿ ಖರೀದಿದಾರನ ಮೇಲೆ ಹೊರಿಸಲಾಗುತ್ತದೆ. ಈ ಅಂತಿಮ ತೆರಿಗೆ ಹೊರೆಯ ಭಾರವನ್ನು ಕಡಿಮೆಗೊಳಿಸಲು ಜಿಎಸ್‌ಟಿ ಅನ್ವಯಿಸುವುದು ಸರಕಾರದ ಉದ್ದೇಶ. ಜಿಎಸ್‌ಟಿ ಬಂದರೆ ತೆರಿಗೆಯಲ್ಲಿ ಏಕರೂಪತೆ ಜತೆಗೆ ತೆರಿಗೆ ಪ್ರಕ್ರಿಯೆಯೂ ಸರಳಗೊಳ್ಳಲಿದೆ. ಒಟ್ಟು ತೆರಿಗೆಯಲ್ಲಿ ತುಸು ಹೆಚ್ಚಳವಾದರೂ ಸರಳೀಕರಣ ಮತ್ತು ಏಕರೂಪತೆಯಿಂದಾಗಿ ಮನೆ ಖರೀದಿಸುವವರಲ್ಲಿ ಹೆಚ್ಚು ಗೊಂದಲ ಉಂಟಾಗುವ ಸಾಧ್ಯತೆಯಿಲ್ಲ. ಅಂತೆಯೇ ಸರಕಾರದ ಬೊಕ್ಕಸಕ್ಕೂ ದೊಡ್ಡ ಮೊತ್ತದ ಕಂದಾಯ ಹರಿದು ಬರಲಿದೆ. ರಿಯಲ್‌ ಎಸ್ಟೇಟ್‌ ಮಾರುಕಟ್ಟೆ ತಜ್ಞರ ಪ್ರಕಾರ ಜಿಎಸ್‌ಟಿ ಅನ್ವಯವಾದರೆ ಜಿಡಿಪಿಗೆ ರಿಯಲ್‌ ಎಸ್ಟೇಟ್‌ ವಲಯದ ಕೊಡುಗೆ ಶೇ.2ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದರಿಂದ ಆರ್ಥಿಕತೆಗೆ ಉತ್ತೇಜನ ಸಿಗಲಿದ್ದು, ಆರ್ಥಿಕ ಚಟುವಟಿಕೆಗಳು ಗರಿಗೆದರಿದರೆ ರಿಯಲ್‌ ಎಸ್ಟೇಟ್‌ ಉದ್ಯಮವೂ ಚೇತರಿಸಿಕೊಳ್ಳುತ್ತದೆ. ಏಕರೂಪದ ತೆರಿಗೆ ವ್ಯವಸ್ಥೆಯಡಿ ಬಂದರೆ ನಿರ್ಮಾಣ ವೆಚ್ಚವೂ ಕಡಿಮೆಯಾಗಲಿದೆ. ಹೀಗಾಗಿ ರಿಯಲ್‌ ಎಸ್ಟೇಟ್‌ಗೆ ಜಿಎಸ್‌ಟಿ ಅನ್ವಯಿಸುವುದನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. 

ಕಟ್ಟಡ ನಿರ್ಮಾಣಕ್ಕೆ ಬಳಸುವ ಅನೇಕ ವಸ್ತುಗಳು ಈಗ ಜಿಎಸ್‌ಟಿಯಡಿಯಲ್ಲಿರುವುದರಿಂದ ನಿರ್ಮಾಣ ವೆಚ್ಚ ಕಡಿಮೆಯಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಬಿಲ್ಡರ್‌ಗಳು ನಿರಾಕರಿಸುತ್ತಿದ್ದಾರೆ. ಇದಕ್ಕೆ ಕಾರಣ ಮನೆಗಳ ಬೆಲೆ ನಿರ್ಮಾಣ ವೆಚ್ಚದ ಬದಲು ಮಾರುಕಟ್ಟೆಯ ವಿವಿಧ ಅಂಶಗಳ ಮೇಲೆ ನಿರ್ಧಾರ ಆಗುತ್ತಿರುವುದು. ಉದಾಹರಣೆಗೆ-ನಗರದಲ್ಲಿ, ಗ್ರಾಮೀಣ ಭಾಗಗಳಲ್ಲಿ 1000 ಚದರ ಅಡಿ ಮನೆಯ ಬೆಲೆಯಲ್ಲಿ ಭಾರೀ ಮೊತ್ತದ ಅಂತರವಿರುತ್ತದೆ. ಆದರೆ ನಗರದ ಕೆಲವು ಹೆಚ್ಚುವರಿ ತೆರಿಗೆಗಳನ್ನು ಹೊರತುಪಡಿಸಿದರೆ ಎರಡೂ ಮನೆ ನಿರ್ಮಾಣಕ್ಕೆ ಹೆಚ್ಚು ಕಡಿಮೆ ಒಂದೇ ರೀತಿಯ ಖರ್ಚು ವೆಚ್ಚವಾಗಿರುತ್ತದೆ. ಜಿಎಸ್‌ಟಿಯಡಿಯಲ್ಲಿ ಆಯಾಯ ಪ್ರದೇಶಗಳಿಗನುಗಣವಾಗಿ ಜಿಎಸ್‌ಟಿ ದರವನ್ನು ನಿರ್ಧರಿಸಲು ಅವಕಾಶವಿರುವುದರಿಂದ ಜನರು ಈ ರೀತಿಯ ವಂಚನೆ ಗೊಳಗಾಗುವುದನ್ನು ತಪ್ಪಿಸಬಹುದು. ಮೇಲ್ನೋಟಕ್ಕೆ ಜಿಎಸ್‌ಟಿಯಿಂದ ಬಿಲ್ಡರ್‌ಗಳಿಗೆ ನಷ್ಟವಾಗುವಂತೆ ಕಾಣಿಸುತ್ತಿದೆಯಾದರೂ ವಾಸ್ತವ ಹೀಗಿರುವುದಿಲ್ಲ. ಹಲವು ರೀತಿಯ ತೆರಿಗೆಗಳು ಹೋಗುವುದರಿಂದ ಅವರಿಗೆ ಲಾಭವಾಗಲಿದೆ. ಆದರೆ ಅವರು ವ್ಯವಹಾರದಲ್ಲಿ ಪ್ರಾಮಾಣಿಕತೆಯನ್ನು ಪಾಲಿಸಬೇಕು.

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.