ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣ
Team Udayavani, Jan 31, 2018, 12:09 PM IST
ಮಹಾನಗರ: ಮಂಗಳೂರು ಜಂಕ್ಷನ್ ರೈಲ್ವೇ ನಿಲ್ದಾಣದಲ್ಲಿ ರೈಲ್ವೇ ಇಲಾಖೆಯು ಗುತ್ತಿಗೆ ನೀಡಿ ಹೊಸದಾಗಿ ಆರಂಭಗೊಂಡಿರುವ ಹೊಟೇಲ್ನ ನಾಮ ಫಲಕವನ್ನು ಕನ್ನಡದಲ್ಲಿ ಬರೆಯದೇ ಇರುವ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈಗ ಸಣ್ಣದಾಗಿ ಕನ್ನಡದಲ್ಲಿ ಹೊಟೇಲ್ನ ಹೆಸರು ಬರೆಯಲಾಗಿದೆ.
ಕನ್ನಡದಲ್ಲಿ ಅಗತ್ಯ
ರೈಲ್ವೇ ಇಲಾಖೆಯು ಪ್ರತಿ ರೈಲ್ವೇ ನಿಲ್ದಾಣಗಳಲ್ಲಿ ಖಾಸಗಿಯವರಿಗೆ ಗುತ್ತಿಗೆ ನೀಡಿ ಹೊಟೇಲ್ಗಳನ್ನು ನಡೆಸುತ್ತದೆ. ನಿಯಮದ ಪ್ರಕಾರ ರಾಜ್ಯದ ಪ್ರತಿ ರೈಲ್ವೇ ನಿಲ್ದಾಣಗಳಲ್ಲಿ ಇಂಗ್ಲಿಷ್, ಹಿಂದಿಯ ಜತೆಗೆ ಕನ್ನಡದಲ್ಲಿಯೂ ಬರೆಯುವುದು ಅತಿ ಅಗತ್ಯವಾಗಿದೆ. ಹೀಗಾಗಿ ಪ್ರತಿಯೊಂದೆಡೆ ಕನ್ನಡದ ಬರಹಗಳು ಕಂಡುಬರುತ್ತಿದೆ.
ರೈಲ್ವೇ ನಿಲ್ದಾಣದ ಹೊಟೇಲ್ ಗಳನ್ನು ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಷನ್ ಲಿ. (ಐಆರ್ಸಿಟಿಸಿ) ಖಾಸಗಿಯವರಿಗೆ ಗುತ್ತಿಗೆ ನೀಡುತ್ತದೆ. ಅದೇ ರೀತಿ ಜಂಕ್ಷನ್ ರೈಲ್ವೇ ನಿಲ್ದಾಣದ ಹೊಟೇಲನ್ನು ಕೇರಳದ ವ್ಯಕ್ತಿಯೊಬ್ಬರಿಗೆ ಗುತ್ತಿಗೆ ನೀಡಲಾಗಿತ್ತು. ಅವರ ಹೊಟೇಲ್ಗೆ ‘ಹೈವೇ ಪ್ಯಾಲೇಸ್’ ಎಂದು ಹೆಸರಿಟ್ಟಿದ್ದು, ಅದನ್ನು ಇಂಗ್ಲೀಷ್ ನಲ್ಲಿ ಮಾತ್ರ ಬರೆದಿದ್ದರು.
ಸ್ಥಳೀಯರ ಆಕ್ರೋಶ
ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿ ಅವರು ಕನ್ನಡದಲ್ಲಿಯೂ ಬರೆಯುವಂತೆ ಹೊಟೇಲ್ ಮಾಲಕರನ್ನು ಒತ್ತಾಯಿಸಿದ್ದರು. ಸ್ಥಳೀಯರು ಆಕ್ರೋಶಿತರಾಗಿರುವುದನ್ನು ಕಂಡ ಹೊಟೇಲ್ ಮಾಲಕ ಕನ್ನಡದಲ್ಲಿ ಬರೆಯುವುದಕ್ಕೆ ಒಪ್ಪಿಗೆ ನೀಡಿ, ಕನ್ನಡದಲ್ಲಿ ಬರೆದುಕೊಡುವಂತೆ ಸ್ಥಳೀಯರಲ್ಲಿ ಮನವಿ ಮಾಡಿದ್ದರು.
ಬಳಿಕ ಈ ವಿಚಾರವನ್ನು ರೈಲ್ವೇ ನಿಲ್ದಾಣದ ಅಧಿಕಾರಿಗಳ ಗಮನಕ್ಕೆ ತಂದು ಪ್ರಸ್ತುತ ಹೊಟೇಲ್ನ ನಾಮಫಲಕವನ್ನು ಕನ್ನಡದಲ್ಲಿಯೂ ಬರೆಯಲಾಗಿದೆ. ಆದರೆ ಅದು ಸಣ್ಣದಾಗಿ ಬರೆದಿದ್ದಾರೆ ಎಂದು ಸ್ಥಳೀಯರು ಮತ್ತೆ ತಗಾದೆ ತೆಗೆದಿದ್ದಾರೆ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?