ಏಳು ಬೀಳುಗಳ ಹೊಸ ವರ್ಷ


Team Udayavani, May 6, 2017, 11:11 AM IST

Happy-New-year.jpg

ಐದು ಜೋಡಿಗಳು, ಐದು ಕಥೆಗಳು, ಐದು ಸಂಘರ್ಷಗಳು … ಇವಿಷ್ಟನ್ನೂ ಬೆಸೆಯುವುದು ಒಂದು ಹೊಸ ವರ್ಷ. ಒಂದು ಹೊಸ ವರ್ಷದ ಸಂದರ್ಭದಲ್ಲಿ ನಡೆಯಬಹುದಾದ ಲಕ್ಷಾಂತರ ಕಥೆಗಳಲ್ಲಿ, ಐದು ಕಥೆಗಳನ್ನು ಹೆಕ್ಕಿ “ಹ್ಯಾಪಿ ನ್ಯೂ ಇಯರ್‌’ ಚಿತ್ರದ ಮೂಲಕ ಇಡುವುದಕ್ಕೆ ಪ್ರಯತ್ನಿಸಿದ್ದಾರೆ. ಇದೊಂದು ಅದ್ಭುತ ಪ್ರಯೋಗ ಅಥವಾ ಈ ತರಹದ ಪ್ರಯೋಗಗ ಕನ್ನಡದಲ್ಲಿ ಆಗಿಯೇ ಇಲ್ಲ ಎಂದು ಹೇಳುವುದು ಕಷ್ಟ.

“ನೀರ್‌ ದೋಸೆ’ ಚಿತ್ರದಲ್ಲೂ ನಾಲ್ಕು ವಿಭಿನ್ನ ಕಥೆಗಳನ್ನು ನೀರ್‌ ದೋಸೆ ಹೇಗೆ ಬೆಸೆಯುತ್ತದೆ ಎಂದು ತೋರಿಸಲಾಗಿತ್ತು. ಇಲ್ಲಿ ನೀರ್‌ ದೋಸೆ ಬದಲಿಗೆ ಹೊಸ ವರ್ಷವೊಂದು ಅಷ್ಟೂ ಕಥೆಗಳಿಗೆ ವೇದಿಕೆಯಾಗುತ್ತದೆ. ಹಾಗಾಗಿಯೇ ಈ ತರಹದ್ದೊಂದು ಪ್ರಯತ್ನ ಆಗಿಲ್ಲ ಎಂದು ಹೇಳುವುದು ಕಷ್ಟ. ಆದರೆ, ನಿರ್ದೇಶಕ ಪನ್ನಗ ತಮ್ಮ ಮೊದಲ ಚಿತ್ರದಲ್ಲೇ ಒಂದು ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿರುವ ರೀತಿಯನ್ನು ಮೆಚ್ಚಬೇಕು.

ಚಿತ್ರ ಶುರುವಾಗುವುದು ಡಿಸೆಂಬರ್‌ 27ರಂದು. ಮುಕ್ತಾಯವಾಗುವುದು ಡಿಸೆಂಬರ್‌ 31ರ ಮಧ್ಯರಾತ್ರಿಯಂದು. ಈ ಐದು ದಿನಗಳಲ್ಲಿ ಐದು ಜೋಡಿಗಳ ಜೀವನ ಹೇಗೆಲ್ಲಾ ಬದಲಾಗುತ್ತದೆ ಮತ್ತು ಆ ಜೋಡಿಗಳು ಏನೆಲ್ಲಾ ಸತ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಈ ಜೋಡಿಗಳ ಮೂಲಕ ಪ್ರೇಕ್ಷಕರಿಗೆ ಒಂದಿಷ್ಟು ವಿಷಯಗಳನ್ನು ತಲುಪಿಸುವ ಪ್ರಯತ್ನವನ್ನು ಪನ್ನಗ ಮಾಡುತ್ತಾ ಹೋಗುತ್ತಾರೆ.

ಪ್ರಮುಖವಾಗಿ ಜೀವನದಲ್ಲಿ ಸಂತೋಷವಾಗಿರುವುದಕ್ಕೆ ಪ್ರಯತ್ನಿಸಬೇಕು ಮತ್ತು ಆ ಸಂತೋಷವನ್ನು ಮುಂದೂಡದೇ ಅನುಭವಿಸಬೇಕು ಎಂಬುದನ್ನು ಪನ್ನಗ ಚಿತ್ರದುದ್ದಕ್ಕೂ ಹೇಳಿದ್ದಾರೆ. ಇಲ್ಲಿ ಒಂದೊಂದು ಕಥೆಗೂ ಹಿನ್ನೆಲೆ, ಪರಿಸರ, ವಯೋಮಾನ ಎಲ್ಲವೂ ಬೇರೆ ಇದೆ. ಮಧ್ಯವಯಸ್ಕ ಮದುವೆಯಾಗದ ಮತ್ತು ಅನಾಥ ರೌಡಿಯ ಕಥೆ ಒಂದು ಕಡೆಯಾದರೆ, ಇನ್ನೊಂದು ಕಡೆ ತನ್ನ ಹೆಂಡತಿ ಗೊಡ್ಡು ಸಂಪ್ರದಾಯಸ್ಥೆ ಎಂದು ಗೊಣಗಾಡುವ ಶ್ರೀಮಂತನಿದ್ದಾನೆ.

ಕೆಲಸ ಮಾಡಿ ಹೈರಾಣಾಗಿರುವ ಐಟಿ ಉದ್ಯೋಗಿ ಮತ್ತೂಂದು ಕಡೆ ಇದ್ದರೆ, ಮಗದೊಂದು ಕಡೆ ಒಬ್ಬ ಸಾಮಾನ್ಯ ಮತ್ತು ಪ್ರಾಮಾಣಿಕ ಪೇದೆ ಇದ್ದಾನೆ. ಇವರೆಲ್ಲರ ಜೊತೆಗೆ ತನ್ನ ಸ್ನೇಹಿತೆಯನ್ನು ಸಾವಿನಿಂದ ಬದುಕಿಸಿಕೊಳ್ಳುವುದಕ್ಕೆ ಹೋರಾಡುತ್ತಿರುವ ರೇಡಿಯೋ ಜಾಕಿ ಬೇರೆ … ಇವರೆಲ್ಲರದ್ದೂ ಒಂದೊಂದು ಹೋರಾಟ ಮತ್ತು ಸಂಘರ್ಷ. ಈ ಎಲ್ಲಾ ಕಥೆಗಳಿಗೂ ಹಿನ್ನೆಲೆಯಲ್ಲಿ ನಿಂತಿರುವುದು ಹೊಸ ವರ್ಷ.

ಕೆಲವರು ಹೊಸ ವರ್ಷದಂದು ಏನೋ ಗಳಿಸುತ್ತಾರೆ, ಇನ್ನೇನೋ ಕಳೆದುಕೊಳ್ಳುತ್ತಾರೆ. ಯಾರ್ಯಾರು ಏನೇನು ಕಳೆದುಕೊಳ್ಳುತ್ತಾರೆ ಮತ್ತು ಗಳಿಸುತ್ತಾರೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಹಾಗೆ ನೋಡಿದರೆ ಒಂದಕ್ಕೊಂದು ಕಥೆಗಳಿಗೆ ಸಂಬಂಧವಿಲ್ಲ. ಒಮ್ಮೆ ಮಾತ್ರ ಪೊಲೀಸ್‌ ಪೇದೆ ಮತ್ತು ರೇಡಿಯೋ ಜಾಕಿ ಒಂದು ದೃಶ್ಯದಲ್ಲಿ ಒಟ್ಟಾಗುತ್ತಾರೆ ಎನ್ನುವುದು ಬಿಟ್ಟರೆ, ಕಥೆಗಳಿಗೂ ಮತ್ತು ಪಾತ್ರಗಳಿಗೂ ಸಂಬಂಧವಿಲ್ಲ.

ಹಾಗೆ ಒಂದೇ ಚಿತ್ರದಲ್ಲಿ ಇದ್ದೂ, ಒಂದೊಂದು ಕಥೆಗೂ ಪ್ರತ್ಯೇಕವಾದ ಐಡೆಂಟಿಟಿ ಕೊಟ್ಟಿರುವುದು ಒಂದು ಹೆಚ್ಚುಗಾರಿಕೆಯಾದರೆ. ಅದೇ ತರಹದ ಕೆಲವು ಮಿತಿಗಳಿವೆ. ಪ್ರಮುಖವಾಗಿ ಈ ಎಲ್ಲಾ ಕಥೆಗಳಿಗೂ ಒಂದು ಸ್ಪಷ್ಟ ಅರ್ಥ ಸಿಗುವುದು ಕೊನೆಯ 20 ನಿಮಿಷಗಳಲ್ಲಿ ಮಾತ್ರ. ಅದಕ್ಕೂ ಮುನ್ನ ಒಂದೊಂದು ಕಥೆಯ ಒಂದೊಂದು ಘಟನೆ ಒಂದರಹಿಂದೊಂದು ನಡೆಯುತ್ತಲೇ ಇರುತ್ತದೆ. ಹೀಗೆ ಒಂದರಹಿಂದೊಂದು ಘಟನೆಗಳು ನಡೆಯುವುದರಿಂದ, ಯಾವುದಕ್ಕೂ ಒಂದು ಸ್ಪಷ್ಟ ಚಿತ್ರಣ ಸಿಗುವುದಿಲ್ಲ.

ಹಾಗೆಯೇ ಯಾವುದೋ ಕಥೆಯಲ್ಲಿ ಒಂದೊಳ್ಳೆಯ ತಿರುವು ಸಿಕ್ಕಿತು ಎನ್ನುವಷ್ಟರಲ್ಲಿ ಇನ್ನೊಂದು ಕಥೆಗೆ ಶಿಫ್ಟ್ ಆಗುವುದರಿಂದ ತುಂಡರಿಸಿದಂತಾಗುತ್ತದೆ. ಹಾಗಾಗಿ ಚಿತ್ರದಲ್ಲಿ ತರಹೇವಾರಿ ಎಮೋಷನ್‌ಗಳಿದ್ದರೂ, ಅದು ಹಿಡಿದಿಡುವುದಿಲ್ಲ. ಆಗಾಗ ಸ್ವಲ್ಪ ತಟ್ಟಿ ಮಾಯವಾಗುತ್ತದೆ. ಬಹುಶಃ ಕಥೆಗಳ ಸಂಖ್ಯೆ ಕಡಿಮೆ ಮಾಡಿದ್ದರೆ ಮತ್ತು ಎಲ್ಲಾ ಕಥೆಗಳಿಗೂ ಒಂದಿಷ್ಟು ಕತ್ತರಿ ಆಡಿಸಿದ್ದರೆ, ಚಿತ್ರ ಇನ್ನಷ್ಟು ಅರ್ಥಪೂರ್ಣವಾಗಿರುತಿತ್ತು. ಈ ತರಹದ ವಿಷಯಗಳನ್ನು ಬಿಟ್ಟರೆ, ಚಿತ್ರದಲ್ಲಿ ತಪ್ಪುಗಳನ್ನು ಕಂಡುಹಿಡಿಯುವುದು ಕಷ್ಟ.

ಮಿಕ್ಕಂತೆ ಅಭಿನಯ, ಛಾಯಾಗ್ರಹಣ, ಸಂಗೀತ ಎಲ್ಲಾ ವಿಷಯದಲ್ಲೂ ಚಿತ್ರದಲ್ಲಿ ಪ್ಲಸ್‌ ಜಾಸ್ತಿಯಾಗಿಯೇ ಇದೆ. ಐದೂ ಕಥೆಗಳ ಐದು ನಾಯಕಿಯರು, ನಾಯಕಿಯರು ತಮ¤ಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಅದರಲ್ಲೂ ಸಾಯಿಕುಮಾರ್‌ ಮತ್ತು ಧನಂಜಯ್‌ ಒಂದು ಹೆಜ್ಜೆ ಮುಂದೆಯೇ ಎಂದರೆ ತಪ್ಪಿಲ್ಲ. ಸಾಯಿಕುಮಾರ್‌ ನಾಟಿ ಮಧ್ಯವಯಸ್ಕನಾಗಿ ಹೆಚ್ಚು ಗಮನಸೆಳೆಯುತ್ತಾರೆ. ಶ್ರೀಷ ಕೂದುವಳ್ಳಿ ಚಂದವಾದ ಪರಿಸರ ಕಟ್ಟಿಕೊಟ್ಟರೆ, ರಘು ದೀಕ್ಷಿತ್‌ ಸಂದರ್ಭಕ್ಕೆ ತಕ್ಕ ಸಂಗೀತ ಒದಗಿಸಿದ್ದಾರೆ.

ಚಿತ್ರ: ಹ್ಯಾಪಿ ನ್ಯೂ ಇಯರ್‌
ನಿರ್ದೇಶನ: ಪನ್ನಗ ಭರಣ
ನಿರ್ಮಾಣ: ವನಜಾ ಪಾಟೀಲ್‌
ತಾರಾಗಣ: ಧನಂಜಯ್‌, ವಿಜಯ್‌ ರಾಘವೇಂದ್ರ, ದಿಗಂತ್‌, ಬಿ.ಸಿ. ಪಾಟೀಲ್‌, ಸಾಯಿಕುಮಾರ್‌, ಶ್ರುತಿ ಹರಿಹರನ್‌, ಸೃಷ್ಠಿ ಪಾಟೀಲ್‌ ಮುಂತಾದವರು

* ಚೇತನ್‌ ನಾಡಿಗೇರ್‌

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.