ಮಾತಿನ ಮಂಟಪದಲ್ಲಿ ತಿಥಿ ಮತ್ತು ಪ್ರಸ್ಥ


Team Udayavani, Aug 6, 2017, 10:25 AM IST

tathana-thithi.jpg

ಕೆಲವು ಕಥೆಗಳು ತುಂಬಾ ಕಾಡುತ್ತವೆ, ಆ ಕಾರಣಕ್ಕಾಗಿ ಸಿನಿಮಾಗಳಾಗುತ್ತವೆ. ಇನ್ನು ಎಲ್ಲೋ ನಡೆದ ಘಟನೆ ಸಿನಿಮಾಕ್ಕೆ ಪ್ರೇರಣೆಯಾಗುತ್ತದೆ. ಈ ತರಹದ ಕಾರಣಗಳಿಗಾಗಿಯೂ ಅನೇಕ ಸಿನಿಮಾಗಳು ಬಂದಿವೆ. ಆದರೆ, “ತಾತನ ತಿಥಿ ಮೊಮ್ಮಗನ ಪ್ರಸ್ಥ’ ಸಿನಿಮಾವಾಗಲು ತುಂಬಾ ಕಾಡಿರುವ ಅಂಶವೆಂದರೆ ಬಹುಶಃ ಪ್ರಸ್ಥ ಇರಬೇಕು. ಮೊಮ್ಮಗನ ಪ್ರಸ್ಥವನ್ನು ಊರಿಗೆಲ್ಲಾ ತೋರಿಸಬೇಕು ಎಂಬ ತಾತನ ಆಸೆಯ ಒನ್‌ಲೈನ್‌ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಹಾಗಾಗಿ, ಪ್ರಸ್ಥ ಒಂದು ಸಿನಿಮಾಕ್ಕೆ ವಿಷಯವಾಗಬಲ್ಲದು ಎಂಬುದನ್ನು ತಮ್ಮ ಮೊದಲ ನಿರ್ದೇಶನದಲ್ಲಿ ತೋರಿಸಿಕೊಟ್ಟಿದ್ದಾರೆ ನಿರ್ದೇಶಕ ಕೃಷ್ಣ ಚಂದ್ರ.

ಮೊಮ್ಮಗನಿಗೆ ಮದುವೆ ಮಾಡಿಸುವುದನ್ನು ಎಷ್ಟೆಲ್ಲಾ ಡಬಲ್‌ ಮೀನಿಂಗ್‌ನೊಂದಿಗೆ ಕಟ್ಟಿಕೊಡಬಹುದೋ ಅವೆಲ್ಲವನ್ನು ಇಲ್ಲಿ ಮಾಡಿದ್ದಾರೆ. ಹಾಗಾಗಿ, ಇದನ್ನು ಕಾಮಿಡಿ ಸಿನಿಮಾ ಎಂದು ಏಕಾಏಕಿ ಕರೆಯೋದು ಕೂಡಾ ಕಷ್ಟ. ಏಕೆಂದರೆ, ಸಿನಿಮಾದಲ್ಲಿ ಕಾಮಿಡಿಗಿಂತ ಡಬಲ್‌ ಮೀನಿಂಗ್‌ ಸಂಭಾಷಣೆಗಳೇ ಹೆಚ್ಚು. ನೀವು ಬೇಕಾದರೆ ಅದನ್ನು ಸಿಂಗಲ್‌ ಮೀನಿಂಗ್‌ನಿಂದ ನೋಡಬಹುದು. ಈ ಚಿತ್ರದಲ್ಲಿ ನಾಯಕ-ನಾಯಕಿ ಬಿಟ್ಟರೆ ಮುಖ್ಯ ಪಾತ್ರಧಾರಿಗಳು ಸೆಂಚುರಿ ಗೌಡ, ಗಡ್ಡಪ್ಪ ಹಾಗೂ ತಮ್ಮಣ್ಣ. “ತಿಥಿ’ ನಂತರ ಏಕಾಏಕಿ ಜನಪ್ರಿಯತೆ ಪಡೆದ ಅವರು ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬಹುತೇಕ ಅವರ ಪಾತ್ರಗಳು ರಿಪೀಟ್‌ ಆಗುತ್ತಲೇ ಬಂದಿವೆ. ಅವರ ಬಾಯಿಂದ ಒಂದಷ್ಟು ಲೋಕಲ್‌ ಡೈಲಾಗ್ಸ್‌, ಪೋಲಿ ಮಾತುಗಳನ್ನು ಹೇಳಿಸಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಪ್ರಯತ್ನ ಇಲ್ಲೂ ಮುಂದುವರೆದಿದೆ. ಹಾಗಾಗಿಯೇ ನಾಯಕನಿಗಿಂತ ಹೆಚ್ಚಾಗಿ ಆ ಮೂವರೇ ತೆರೆಯನ್ನು ಆಕ್ರಮಿಸಿಕೊಂಡಿದ್ದಾರೆ. ಹಾಗಾಗಿ, ಅವರ ಪೋಲಿ ಸಂಭಾಷಣೆಗಳಲ್ಲೇ ಬಹುತೇಕ ಸಿನಿಮಾ ಮುಗಿದು ಹೋಗುತ್ತದೆ. ಮೊಮ್ಮಗನ ಪ್ರಸ್ಥ ನೋಡಿಯೇ ತನ್ನ ಆತ್ಮಕ್ಕೆ ತೃಪ್ತಿ, ಊರ ಜನರನ್ನೆಲ್ಲಾ ಪ್ರಸ್ಥಕ್ಕೆ ಕರೆಯಬೇಕು ಎಂಬ ಸತ್ತು ಹೋದ ನಂತರವೂ ಆಗಾಗ ಬಂದು ಕಾಡುತ್ತಿರುವ ಸೆಂಚುರಿ ಗೌಡ ಅವರ ಆಸೆಯಂತೆ ಅವರ ಮೊಮ್ಮಗನಿಗೆ ಹುಡುಗಿ ಹುಡುಕುವ ಕಾರ್ಯ ಆರಂಭವಾಗುತ್ತದೆ.

ಸಖತ್‌ ಬೋಲ್ಡ್‌ ಹುಡುಗಿಯೇ ಸಿಗುತ್ತಾಳೆ, ಸಿಗುತ್ತಾಳೆ ಅನ್ನೋದಕ್ಕಿಂತ ಮೊಮ್ಮಗನೇ ಹುಡುಕಿಕೊಳ್ಳುತ್ತಾನೆ. ಆ ನಂತರ ನಡೆಯೋದು ಮದುವೆ ಡ್ರಾಮಾ. ಇಷ್ಟರಲ್ಲಿ ಇಡೀ ಸಿನಿಮಾ ಮುಗಿಸಿದ್ದಾರೆ. ಆರಂಭದಿಂದ ಕೊನೆವರೆಗೆ ಇಲ್ಲಿ ನಿಮಗೆ ಒಂದೇ ದಿನ ಗಂಭೀರ ದೃಶ್ಯಗಳು ಕಾಣಸಿಗೋದಿಲ್ಲ. ಇಡೀ ಸಿನಿಮಾವನ್ನು ಡಬಲ್‌ ಮೀನಿಂಗ್‌ ಹಿನ್ನೆಲೆಯಲ್ಲಿ ಕಾಮಿಡಿಯಾಗಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರಷ್ಟೇ. ಹಾಗಾಗಿ, ಇಲ್ಲಿ ಹೊಸದೇನನ್ನು ನೀವು ನಿರೀಕ್ಷಿಸುವಂತಿಲ್ಲ. ಯಾವುದೇ ಲಾಜಿಕ್‌ ಇಲ್ಲದೇ, ಕಥೆಯ ಹಂಗಿಗೆ ಹೋಗದೇ ಇದ್ದರೆ ಒಂದು ಸಿನಿಮಾವನ್ನು ಎಷ್ಟು “ಸುಲಭ’ವಾಗಿ ಮಾಡಬಹುದೆಂಬುದಕ್ಕೆ “ತಾತನ ತಿಥಿ ಮೊಮ್ಮಗನ ಪ್ರಸ್ಥ’ ಒಂದು ಒಳ್ಳೆಯ ಉದಾಹರಣೆ ಎಂದರೆ ತಪ್ಪಿಲ್ಲ.

ಇಲ್ಲಿ ನಿರ್ದೇಶಕರು ಕೂಡಾ ಹೆಚ್ಚು ರಿಸ್ಕ್ ತಗೊಂಡಿಲ್ಲ. ಏಕೆಂದರೆ, ಸಿನಿಮಾ ನಿಂತಿರೋದು ಕಥೆ, ನಿರೂಪಣೆಗಿಂತ ಹೆಚ್ಚಾಗಿ ಡೈಲಾಗ್‌ ಮೇಲೆ ಎನ್ನಬಹುದು. ಆ ಜವಾಬ್ದಾರಿಯನ್ನು ಮಳವಳ್ಳಿ ಸಾಯಿಕೃಷ್ಣ ವಹಿಸಿಕೊಂಡಿದ್ದಾರೆ. ನಿರ್ದೇಶಕರ “ಕಲ್ಪನೆ’ಗೆ ತಕ್ಕಂತೆ ಅವರ ಸಂಭಾಷಣೆಗಳಿವೆ. ಚಿತ್ರದಲ್ಲಿ ನಟಿಸಿದ ಹಿರಿಯ ನಟರು ಕೂಡಾ “ಲೀಲಾಜಾಲ’ವಾಗಿ ಡಬಲ್‌ ಮೀನಿಂಗ್‌ ಡೈಲಾಗ್‌ಗಳನ್ನು ಹೇಳಿದ್ದಾರೆ. ಚಿತ್ರದಲ್ಲಿ ಬರುವ ಕೆಲವು ದೃಶ್ಯಗಳಿಗೆ ಅರ್ಥವಿಲ್ಲ. ಅವೆಲ್ಲದಕ್ಕೆ ಕತ್ತರಿ ಹಾಕುವ ಅವಕಾಶ ನಿರ್ದೇಶಕರಿಗಿತ್ತು.

ಚಿತ್ರದಲ್ಲಿ ಲೋಕಿ ನಾಯಕ. ಇಲ್ಲೇನು ಅವರು ನಟನೆಗೆ ಹೆಚ್ಚಿನ ಸ್ಕೋಪ್‌ ಇಲ್ಲ. ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದಾರೆ. ನಾಯಕಿ ಶುಭಾ ಪೂಂಜಾ ಮತ್ತೂಮ್ಮೆ ಮೈ ಚಳಿ ಬಿಟ್ಟು ನಟಿಸಿದ್ದಾರೆ. ಈ ಮೂಲಕ ಪಡ್ಡೆಗಳಿಗೆ ಇಷ್ಟವಾಗುತ್ತಾರೆ. ಉಳಿದಂತೆ ಓಂ ಪ್ರಕಾಶ್‌ ರಾವ್‌, ಮಳವಳ್ಳಿ ಸಾಯಿಕೃಷ್ಣ, ಶ್ರೀನಿವಾಸ್‌ ಮೂರ್ತಿ, ಪದ್ಮಾವಾಸಂತಿ, ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಶ್ರೀಧರ್‌ ಸಂಭ್ರಮ್‌ ಸಂಗೀತ ನೀಡಿದ್ದಾರೆ. 

ಚಿತ್ರ: ತಾತನ ತಿಥಿ ಮೊಮ್ಮಗನ ಪ್ರಸ್ಥ
ನಿರ್ಮಾಣ: ಮಧುಕುಮಾರ್‌, ಮಂಜುನಾಥ್‌
ನಿರ್ದೇಶನ: ಕೃಷ್ಣ ಚಂದ್ರ
ತಾರಾಗಣ: ಲೋಕಿ, ಶುಭಾ ಪೂಂಜಾ, ಸೆಂಚುರಿ ಗೌಡ, ಗಡ್ಡಪ್ಪ, ತಮ್ಮಣ್ಣ, ಓಂ ಪ್ರಕಾಶ್‌ ರಾವ್‌, ಮಳವಳ್ಳಿ ಸಾಯಿಕೃಷ್ಣ, ಶ್ರೀನಿವಾಸ್‌ ಮೂರ್ತಿ ಮತ್ತಿತರರು. 

* ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.