ಭಾರತಕ್ಕೆ ಚೀನ ಭವಿಷ್ಯದ ಬೆದರಿಕೆ :ಭಾರತ ಸೇನಾ ಉಪ ಮುಖ್ಯಸ್ಥ ಎಚ್ಚರಿಕೆ
Team Udayavani, Jul 25, 2017, 7:22 PM IST
ಹೊಸದಿಲ್ಲಿ : ಸಿಕ್ಕಿಂ ಗಡಿಯ ಡೋಕ್ಲಾಂ ನಲ್ಲಿ ಭಾರತ – ಚೀನ ಸೇನಾ ಮುಖಾಮುಖೀ ಕಳೆದ ಎರಡು ತಿಂಗಳಿಂದ ಸಾಗಿದ್ದು ಸಮರ ಬೆದರಿಕೆ ಎದುರಾಗಿರುವ ನಡುವೆಯೇ ಭಾರತದ ಸೇನಾ ಉಪ ಮುಖ್ಯಸ್ಥ ಶರತ್ ಚಂದ್ ಅವರು “ಮುಂಬರುವ ವರ್ಷಗಳಲ್ಲಿ ಚೀನ ಭಾರತಕ್ಕೆ ದೊಡ್ಡ ಬೆದರಿಕೆಯಾಗಲಿದೆ’ ಎಂದು ಹೇಳಿದ್ದಾರೆ.
ಸೇನೆಯ ಮಾಸ್ಟರ್ ಜನರಲ್ ಆರ್ಡ್ನೆನ್ಸ್ ಆ್ಯಂಡ್ ಕಾನ್ಫೆಡರೇಶನ್ ಆಪ್ ಇಂಡಿಯನ್ ಇಂಡಸ್ಟ್ರಿ ಏರ್ಪಡಿಸಿದ ಜಂಟಿ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದ ಸೇನಾ ಉಪ ಮುಖ್ಯಸ್ಥ ಶರತ್ ಚಂದ್ ಅವರು ಎಲ್ಓಸಿಯಲ್ಲಿನ ಭಾರತೀಯ ಶಾಲೆಯನ್ನು ಗುರಿ ಇರಿಸಿಕೊಂಡು ಪಾಕ್ ಸೇನೆ ಶೆಲ್ ದಾಳಿ ನಡೆಸುತ್ತಿರುವುದು ಅತ್ಯಂತ ಹೇಯ ಹಾಗೂ ಹೇಡಿತನದ ಕೃತ್ಯ ಎಂದು ಹೇಳಿದರು.
ಶರತ್ ಚಂದ್ ಮುಂದುವರಿದು ಹೀಗೆ ಹೇಳಿದರು :
ನಮ್ಮ ಉತ್ತರ ದಿಕ್ಕಿನಲ್ಲಿ ಚೀನ ಇದೆ; ಅದರ ಭೂಭಾಗ ಅತ್ಯಂತ ದೊಡ್ಡದಿದೆ. ಅದರ ಸಂಪನ್ಮೂಲಗಳು ಅತ್ಯಪಾರ ಇವೆ; ಅದರ ಸೇನೆ ಕೂಡ ಬೃಹತ್ ಗಾತ್ರದಲ್ಲಿದೆ.
ನಮ್ಮ ಮತ್ತು ಅವರ ನಡುವೆ ಹಿಮಾಲಯ ಪರ್ವತ ಇದ್ದರೂ ಚೀನ ಮುಂಬರುವ ವರ್ಷಗಳಲ್ಲಿ ಭಾರತಕ್ಕೆ ಬಲು ದೊಡ್ಡ ಬೆದರಿಕೆಯಾಗಲಿದೆ. ಸೈನ್ನೀಕರಣದಲ್ಲಿ ಚೀನ ಈಗ ಅಮೆರಿಕದ ಜತೆಗೆ ಸ್ಪರ್ಧೆ ನಡೆಸುವಷ್ಟು ಮುಂದಕ್ಕೆ ಸಾಗಿದೆ. ಮಾತ್ರವಲ್ಲದೆ ಚೀನ ವಿಶ್ವದ ಎರಡನೇ ಬೃಹತ್ ಆರ್ಥಿಕ ಶಕ್ತಿಯಾಗಿದೆ; ಬೇಗನೆ ಅದು ಅಮೆರಿಕವನ್ನು ಹಿಂದಿಕ್ಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್