ಲಂಕೆಯನ್ನು ಮಗುಚಿದ ಸ್ಪಿನ್‌-ಧವನ್‌


Team Udayavani, Aug 21, 2017, 12:43 PM IST

21-ASPORTS-3.jpg

ಡಂಬುಲ: ಟೆಸ್ಟ್‌ ಸರಣಿಯ ವೈಭವವನ್ನು ಏಕದಿನದಲ್ಲೂ ಮುಂದುವರಿಸಿದ ಟೀಮ್‌ ಇಂಡಿಯಾ ಡಂಬುದಲ್ಲಿ ರವಿವಾರ ನಡೆದ ಮೊದಲ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ವಿಜೃಂಭಿಸಿದೆ. ಘಾತಕ ಸ್ಪಿನ್‌ ದಾಳಿ ಮತ್ತು ಆರಂಭಕಾರ ಶಿಖರ್‌ ಧವನ್‌ ಅವರ 11ನೇ ಶತಕ ಟೀಮ್‌ ಇಂಡಿಯಾದ ಗೆಲುವಿನ ಪ್ರಮುಖ ಆಕರ್ಷಣೆಯಾಗಿತ್ತು. ಈ ಪ್ರವಾಸದಲ್ಲಿ ಸತತ 4ನೇ ಸಲ ಟಾಸ್‌ ಗೆದ್ದ ವಿರಾಟ್‌ ಕೊಹ್ಲಿ ಮೊದಲು ಬೌಲಿಂಗನ್ನೇ ಆಯ್ದುಕೊಂಡರು. ಆರಂಭದಲ್ಲಿ ಲಂಕಾ ಬ್ಯಾಟಿಂಗ್‌ ಮೇಲುಗೈ ಸಾಧಿಸಿದಂತೆ ಕಂಡುಬಂದರೂ ಕೊನೆಯ 9 ವಿಕೆಟ್‌ಗಳನ್ನು ಪಟಪಟನೆ ಉರುಳಿಸಿಕೊಂಡು 43.2 ಓವರ್‌ಗಳಲ್ಲಿ 216 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಭಾರತ ಕೇವಲ 28.5 ಓವರ್‌ಗಳಲ್ಲಿ 1 ವಿಕೆಟಿಗೆ 220 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು.

ಧವನ್‌ ಶತಕ ಪರಾಕ್ರಮ
ಟೆಸ್ಟ್‌ ಸರಣಿಯಲ್ಲಿ ಬದಲಿ ಆಟಗಾರನಾಗಿ ಬಂದು 2 ಶತಕ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಎಡಗೈ ಆರಂಭಕಾರ ಶಿಖರ್‌ ಧವನ್‌ ಏಕದಿನದಲ್ಲೂ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಕೇವಲ 90 ಎಸೆತ ಎದುರಿಸಿದ ಅವರು 132 ರನ್‌ ಗಳಿಸಿ ಅಜೇಯರಾಗಿ ಉಳಿದರಲ್ಲದೇ ಮುರಿಯದ ಎರಡನೇ ವಿಕೆಟಿಗೆ ನಾಯಕ ವಿರಾಟ್‌ ಕೊಹ್ಲಿ ಜತೆ 197 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 20 ಆಕರ್ಷಕ ಬೌಂಡರಿ ಬಾರಿಸಿದ ಅವರು 3 ಸಿಕ್ಸರ್‌ ಸಿಡಿಸಿದ್ದರು. ಧವನ್‌ಗೆ ಉತ್ತಮ ಬೆಂಬಲ ನೀಡಿದ ಕೊಹ್ಲಿ 70 ಎಸೆತಗಳಿಂದ 10 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 82 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಗೆಲುವಿನಿಂದ  ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಜೇಯ ಶತಕ ಸಿಡಿಸಿದ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಪಿನ್‌ ಸುಳಿಗೆ ಸಿಲುಕಿದ ಲಂಕಾ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾಕ್ಕೆ ನಿರೋಷನ್‌ ಡಿಕ್ವೆಲ್ಲ-ದನುಷ್ಕ ಗುಣತಿಲಕ ಉತ್ತಮ ಆರಂಭ ಒದಗಿಸಿದ್ದರು. ಭುವನೇಶ್ವರ್‌ ಕುಮಾರ್‌-ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ದಾಳಿಯನ್ನು ಇವರಿಬ್ಬರೂ ಯಾವುದೇ ತಾಪತ್ರಯವಿಲ್ಲದೆ ನಿಭಾಯಿಸಿದ್ದರು. ಮೊದಲ 10 ಓವರ್‌ಗಳಲ್ಲಿ 55 ರನ್‌ ಒಟ್ಟುಗೂಡಿತು. ಭರ್ತಿ 14 ಓವರ್‌ಗಳ ಬ್ಯಾಟಿಂಗ್‌ ನಡೆಸಿದ ಈ ಜೋಡಿ 74 ರನ್‌ ಪೇರಿಸಿತು. 139 ರನ್‌ ತನಕ ಲಂಕಾ ಒಂದೇ ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆತಿಥೇಯರ ಮೊತ್ತ 270-280ರ ತನಕ ಬೆಳೆಯುವ ಎಲ್ಲ ಸೂಚನೆ ಇತ್ತು. ಟೆಸ್ಟ್‌ ಸರಣಿಯ ಹೀನಾಯ ಪ್ರದರ್ಶನವನ್ನು ಮರೆಸುವ ನಿಟ್ಟಿನಲ್ಲಿ ಆತಿಥೇಯರ ಹೋರಾಟ ಸಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತ ಯಾವಾಗ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿತೋ, ಲಂಕಾ ವಿಲವಿಲ ಒದ್ದಾಡತೊಡಗಿತು. 77 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿಸಿಕೊಂಡು ನಾಟಕೀಯ ಕುಸಿತವೊಂದಕ್ಕೆ ಸಾಕ್ಷಿಯಾಯಿತು. ಕೇವಲ 216 ರನ್ನಿಗೆ ಶ್ರೀಲಂಕಾ ಇನ್ನಿಂಗ್ಸ್‌ ಮುಗಿದಿತ್ತು!

ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ 34ಕ್ಕೆ 3 ವಿಕೆಟ್‌ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. ಪಟೇಲ್‌ ಕಳೆದ ಅಕ್ಟೋಬರ್‌ ಬಳಿಕ ಮೊದಲ ಏಕದಿನ ಪಂದ್ಯವಾಡಲು ಇಳಿದಿದ್ದರು. ಪಾರ್ಟ್‌ಟೈಮ್‌ ಬೌಲರ್‌ ಕೇದಾರ್‌ ಜಾಧವ್‌ 26ಕ್ಕೆ 2, ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ 60 ರನ್ನಿಗೆ 2 ವಿಕೆಟ್‌ ಕಿತ್ತರು. ಬುಮ್ರಾ ಸಾಧನೆ 22ಕ್ಕೆ 2 ವಿಕೆಟ್‌. ಗುಣತಿಲಕ ಅವರನ್ನು ರಾಹುಲ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ಚಾಹಲ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಭುವಿ-ಪಾಂಡ್ಯ ಜೋಡಿಗೆ ವಿಕೆಟ್‌ ಲಭಿಸಲಿಲ್ಲ.

ಶ್ರೀಲಂಕಾ ಸರದಿಯಲ್ಲಿ ಮೊದಲ 5 ಮಂದಿ ಎರಡಂಕೆಯ ಮೊತ್ತ ದಾಖಲಿಸಿದರೆ, ಉಳಿದ 6 ಮಂದಿ ಒಂದಂಕೆಯ ಗಡಿ ದಾಟಲಿಲ್ಲ. 64 ರನ್‌ ಮಾಡಿದ ಆರಂಭಕಾರ ಡಿಕ್ವೆಲ್ಲ ಅವರದು ಸರ್ವಾಧಿಕ ಗಳಿಕೆ. ಇದು ಅವರ 5ನೇ ಅರ್ಧ ಶತಕ. 74 ಎಸೆತ ಎದುರಿಸಿದ ಡಿಕ್ವೆಲ್ಲ 8 ಬೌಂಡರಿ ಬಾರಿಸಿದರು. ಇವರ ಜತೆಗಾರ ಗುಣತಿಲಕ 44 ಎಸೆತಗಳಿಂದ 35 ರನ್‌ (4 ಬೌಂಡರಿ) ಮಾಡಿದರೆ, ಮೆಂಡಿಸ್‌ ಮತ್ತು ಮ್ಯಾಥ್ಯೂಸ್‌ ತಲಾ 36 ರನ್‌ ಹೊಡೆದರು. ಇವರಲ್ಲಿ ಮ್ಯಾಥ್ಯೂಸ್‌ ಅವರದು ಅಜೇಯ ಬ್ಯಾಟಿಂಗ್‌. ಆದರೆ ಇವರಿಗೆ ಇನ್ನೊಂದು ತುದಿಯಿಂದ ಯಾರೂ ಬೆಂಬಲ ನೀಡಲಿಲ್ಲ. ಕಪುಗೆಡರ (1), ಪೆರೆರ (0) ಬೇಗನೇ ಪೆವಿಲಿಯನ್‌ ಸೇರಿದ್ದು ಲಂಕೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

ಸ್ಕೋರ್‌ಪಟ್ಟಿ
ಶ್ರೀಲಂಕಾ
ನಿರೋಷನ್‌ ಡಿಕ್ವೆಲ್ಲ    ಎಲ್‌ಬಿಡಬ್ಲ್ಯು ಜಾಧವ್‌    64
ದನುಷ್ಕ ಗುಣತಿಲಕ    ಸಿ ರಾಹುಲ್‌ ಬಿ ಚಾಹಲ್‌    35
ಕುಸಲ್‌ ಮೆಂಡಿಸ್‌    ಬಿ ಪಟೇಲ್‌    36
ಉಪುಲ್‌ ತರಂಗ    ಸಿ ಧವನ್‌ ಬಿ ಜಾಧವ್‌    13
ಏಂಜೆಲೊ ಮ್ಯಾಥ್ಯೂಸ್‌    ಔಟಾಗದೆ    36
ಚಾಮರ ಕಪುಗೆಡರ    ರನೌಟ್‌    1
ವನಿಂದು ಹಸರಂಗ    ಸಿ ಜಾಧವ್‌ ಬಿ ಪಟೇಲ್‌    2
ತಿಸರ ಪೆರೆರ    ಬಿ ಬುಮ್ರಾ    0
ಲಕ್ಷಣ ಸಂದಕನ್‌    ಎಲ್‌ಬಿಡಬ್ಲ್ಯು ಪಟೇಲ್‌    5
ಲಸಿತ ಮಾಲಿಂಗ    ಸ್ಟಂಪ್ಡ್ ಧೋನಿ ಬಿ ಚಾಹಲ್‌    8
ವಿಶ್ವ ಫೆರ್ನಾಂಡೊ    ಬಿ ಬುಮ್ರಾ    0

ಇತರ        16
ಒಟ್ಟು  (43.2 ಓವರ್‌ಗಳಲ್ಲಿ ಆಲೌಟ್‌)    216
ವಿಕೆಟ್‌ ಪತನ: 1-74, 2-139, 3-150, 4-166, 5-169, 6-176, 7-178, 8-187, 9-209.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6-0-33-0
ಹಾರ್ದಿಕ್‌ ಪಾಂಡ್ಯ        6-0-35-0
ಜಸ್‌ಪ್ರೀತ್‌ ಬುಮ್ರಾ        6.2-0-22-2
ಯಜುವೇಂದ್ರ ಚಾಹಲ್‌        10-0-60-2
ಕೇದಾರ್‌ ಜಾಧವ್‌        5-0-26-2
ಅಕ್ಷರ್‌ ಪಟೇಲ್‌        10-0-34-3

ಭಾರತ
ರೋಹಿತ್‌ ಶರ್ಮ    ರನೌಟ್‌    4
ಶಿಖರ್‌ ಧವನ್‌    ಔಟಾಗದೆ    132
ವಿರಾಟ್‌ ಕೊಹ್ಲಿ    ಔಟಾಗದೆ    82

ಇತರ        2
ಒಟ್ಟು  (28.5 ಓವರ್‌ಗಳಲ್ಲಿ 1 ವಿಕೆಟಿಗೆ)    220
ವಿಕೆಟ್‌ ಪತನ: 1-23

ಬೌಲಿಂಗ್‌:
ಲಸಿತ ಮಾಲಿಂಗ        8-0-52-0
ವಿಶ್ವ ಫೆರ್ನಾಂಡೊ        6-0-43-0
ಏಂಜೆಲೊ ಮ್ಯಾಥ್ಯೂಸ್‌        2-0-9-0
ತಿಸರ ಪೆರೆರ        2-0-18-0
ಲಕ್ಷಣ ಸಂದಕನ್‌        6-0-63-0
ವನಿಂದು ಹಸರಂಗ        4.5-0-36-0

ಪಂದ್ಯಶ್ರೇಷ್ಠ: ಶಿಖರ್‌ ಧವನ್‌ 

ದ್ವಿತೀಯ ಏಕದಿನ  ಆ. 24: ಪಲ್ಲೆಕಿಲೆ

 

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.