ಏರ್ಇಂಡಿಯಾದಲ್ಲಿ ಶಿವಸೇನೆ ಸಂಸದನ ದುರ್ವರ್ತನೆ: ಜನ ಏನಂತಾರೆ?
Team Udayavani, Mar 25, 2017, 5:31 AM IST
ಅನ್ಸಲ್
ಶಿವಸೇನೆಯಲ್ಲಿ “ಸ್ಲಿಪ್ಪರ್ ಸೆಲ್’ ಅಂತ ಮಾಡಿ ಅದಕ್ಕೆ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ರನ್ನು ಮುಖ್ಯಸ್ಥರನ್ನಾಗಿಸಬೇಕು!
ಕೆಆರ್ಕೆ
ರವೀಂದ್ರ ಗಾಯಕ್ವಾಡ್ ಅವರು ನಿಜಕ್ಕೂ ಅರ್ನಬ್ ಗೋಸ್ವಾಮಿ ಅವರಿಗೆ ಥ್ಯಾಂಕ್ಸ್ ಹೇಳಬೇಕು. ಇಲ್ಲದಿದ್ದರೆ, ಇಷ್ಟೊತ್ತಿಗೆ ರಾಜೀನಾಮೆ ಕೊಡಬೇಕಿತ್ತು.
ಧನುಶ್ರೀ
ಏರ್ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯಲ್ಲಿ ಹೊಡೆದ ಶಿವಸೇನೆ ಸಂಸದ: ಈಗ ಏರ್ ಇಂಡಿಯಾದಿಂದ ಹೊಸ ಘೋಷಣೆ- ಚಪ್ಪಲಿ ಹಾಕಿ ವಿಮಾನ ಹತ್ತುವಂತಿಲ್ಲ!
ಸುಶೀಲ್
ಗೂಂಡಾ ಕೋಟಾದಲ್ಲೇ ರವೀಂದ್ರ ಗಾಯಕ್ವಾಡ್ ಶಿವಸೇನೆ ಸಂಸದರಾಗಿದ್ದಾರೆ. ಇನ್ನು ಅವರು ಕ್ಷಮೆ ಕೇಳುವುದನ್ನು ನಿರೀಕ್ಷಿಸಲು ಸಾಧ್ಯವೇ?
ಪೈರೇಟೆಡ್ ಸರ್ದಾರ್
ರವೀಂದ್ರ ಗಾಯಕ್ವಾಡ್ ನಿಜಕ್ಕೂ ಅಪ್ರತಿಮ ಸಾಧನೆ ಮಾಡಿದ್ದಾರೆ. ಈಗ ನೋಡಿ ಭಾರತೀಯರೆಲ್ಲ ಏರ್ ಇಂಡಿಯಾವನ್ನು ಬೆಂಬಲಿಸುವಂತೆ ಮಾಡಿದ್ದಾರೆ!
ಅನ್ನುಸೂನಿ
ರವೀಂದ್ರ ಗಾಯಕ್ವಾಡ್ಗೆ ಈಗ ಎರಡೇ ಅವಕಾಶ. ಒಂದೋ ದೆಹಲಿಯಿಂದ ಪುಣೆಗೆ ರೈಲು ಹತ್ತಬೇಕು. ಇಲ್ಲಾ ಅಂದ್ರೆ, ಅದೇ ಏರ್ ಇಂಡಿಯಾ ಸಿಬ್ಬಂದಿಗೆ ಹೊಡೆದ್ರಲ್ಲ.. ಅದೇ ಚಪ್ಪಲಿ ಹಾಕಿ ನಡೆದುಕೊಂಡು ಹೋಗಬೇಕು!
ಶಂಕರ್ರಾಜ್
ಭಾರತೀಯ ವಿಮಾನಯಾನ ಕಂಪನಿಗಳು ಗಾಯಕ್ವಾಡ್ಗೆ ನಿರ್ಬಂಧ ವಿಧಿಸಿದ ಹಿನ್ನೆಲೆಯಲ್ಲಿ ಶಿವಸೇನೆ ವಿಶೇಷ ಡ್ರೋನ್ ಬಳಸಿ ಅವರನ್ನು ಏರ್ಲಿಫ್ಟ್ ಮಾಡಬೇಕು!
7 ಅಭಿಷೇಕ್
ರವೀಂದ್ರ ಗಾಯಕ್ವಾಡ್ ಪ್ರಕರಣದ ಬಳಿಕ ಶಿವಸೇನೆಯಿಂದ ಹೊಸ ಏರ್ಲೈನ್ಸ್ “ಚಪ್ಪಲ್ ಚಾಪ್ ಏರ್ಲೈನ್ಸ್’ ಶುರುಮಾಡುವುದಾಗಿ ಘೋಷಣೆ
ಜೀವನ್
ಚಪ್ಪಲಿಯಲ್ಲಿ ಹೊಡೆದಿದ್ದಕ್ಕೆ, ರವೀಂದ್ರ ಗಾಯಕ್ವಾಡ್ ಕ್ಷಮೆ ಕೋರುವ ಪ್ರಶ್ನೆಯೇ ಇಲ್ಲ. ಶಿವಸೇನೆ ಪ್ರಕಾರ ಪೆಟ್ಟು ತಿಂದವರೇ ಗಾಯಕ್ವಾಡ್ ಕ್ಷಮೆ ಕೋರಬೇಕು!
ಪಟೇಲ್
ಮುಂದಿನ ಬಾರಿ ಬಿಗ್ಬಾಸ್ಗೆ ಹೋಗಲು ಏನಾದ್ರೂ ರವೀಂದ್ರ ಗಾಯಕ್ವಾಡ್ ಟ್ರೈ ಮಾಡ್ತಿರ್ಬಹುದಾ..?
ಅಭಿಷೇಕ್ ರಾಜ್ಗೋರ್
ಶಿವಸೇನೆಯ ಸಂಸದರು, ಶಾಸಕರು ಸಾರ್ವಜನಿಕವಾಗಿ ಹೇಗೆ ವರ್ತಿಸಬೇಕೆಂದು ರವೀಂದ್ರ ಗಾಯಕ್ವಾಡ್ ಹೊಸಬರಿಗೆ ಪಾಠ ಹೇಳಿಕೊಟ್ಟಿದ್ದಾರೆ!
ಭಾರತ್ಬ್ಯಾಂಗ್
ರವೀಂದ್ರ ಗಾಯಕ್ವಾಡ್ಗೆ ವಿಮಾನಯಾನ ನಿರ್ಬಂಧ ಮಾತ್ರವಲ್ಲ, ಜೀವಮಾನವಿಡೀ ಸ್ಲಿಪ್ಪರ್ ಖರೀದಿಸದಂತೆಯೂ ನಿರ್ಬಂಧ ಹೇರಬೇಕು!
ಟಾಪ್ ನ್ಯೂಸ್
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್