ಪರ್ಕಳ: ಕಾಂಗ್ರೆಸ್ ಕಚೇರಿಗೆ ಸಿದ್ದರಾಮಯ್ಯ ಭೇಟಿ
Team Udayavani, Feb 22, 2021, 9:53 PM IST
ಉಡುಪಿ: ಪರ್ಕಳದಲ್ಲಿರುವ ಕಾಂಗ್ರೆಸ್ ಕಚೇರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯದ ಸರಕಾರಿ ಮಟ್ಟದ ಲಾಂಛನದಲ್ಲಿ ಪ್ರಚುರಪಡಿಸಿದ ಫಲಾನುಭವಿಯಾದ ಲಲಿತಾ ಪ್ರಭು ಪರ್ಕಳ ಅವರನ್ನು ಭೇಟಿ ಮಾಡಿ ವಿಚಾರಿಸಿದರು.
ಈ ಸಂದರ್ಭ ಶಾಸಕ ಯು.ಟಿ. ಖಾದರ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ರಮಾನಾಥ ರೈ, ಮಾಜಿ ಶಾಸಕ ಮೊದಿನ್ ಬಾವಾ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಕವಿತಾ ಸನಿಲ್, ಸ್ಥಳೀಯ ಮುಖಂಡರಾದ ಮೋಹನ್ದಾಸ್ ನಾಯಕ್ ಪರ್ಕಳ, ಗಣೇಶ ರಾಜ್ ಸರಳೇಬೆಟ್ಟು, ಜಯ ಶೆಟ್ಟಿ ಬನ್ನಂಜೆ, ಎ.ಪಿ. ರಾವ್ ಅಚ್ಯುತ ನಗರ, ಬಿ. ಜಯರಾಂ ಪರ್ಕಳ, ಸುಕೇಶ್ ಕುಂದರ್ ಹೆರ್ಗ, ಸದಾನಂದ ಪೂಜಾರಿ, ಉಪೇಂದ್ರ ನಾಯ್ಕ, ತುಳಜಾ ಪರ್ಕಳ, ಗಣೇಶ್ ಶೆಟ್ಟಿ ಕೀಳಂಜೆ, ದೇವೇಂದ್ರ ನಾಯಕ್, ವಾಲ್ಟರ್ ಡಿ’ಸೋಜಾ ಕೊಳಲಗಿರಿ, ದೇವಿಪ್ರಸಾದ್ ಆಚಾರ್ಯ, ದೇವೇಂದ್ರ ನಾಯ್ಕ, ಲಲಿತಾ ಪ್ರಭು, ಉಷಾ ನಾಯಕ್, ಹರೀಶ್ ಶೆಟ್ಟಿ ಕೀಳಂಜೆ, ಸುರೇಶ್ ನಾಯಕ್ ಹಿರೇಬೆಟ್ಟು, ಸುಧೀರ್ ಪಟ್ಲ ಉಪಸ್ಥಿತರಿದ್ದರು.