ಜೀವನ್ಮರಣ ಹೋರಾಟದಲ್ಲಿದ್ದ ಮಗುವಿಗೆ ಕಿಮ್ಸ್‌ ವೈದ್ಯರಿಂದ ಜೀವದಾನ


Team Udayavani, Mar 13, 2021, 3:09 PM IST

ಜೀವನ್ಮರಣ ಹೋರಾಟದಲ್ಲಿದ್ದ ಮಗುವಿಗೆ ಕಿಮ್ಸ್‌ ವೈದ್ಯರಿಂದ ಜೀವದಾನ

ಹುಬ್ಬಳ್ಳಿ: ತೋಳ ಕಚ್ಚಿದ್ದರಿಂದ ದವಡೆ ಕಿತ್ತು ಗಂಭೀರ ಸ್ಥಿತಿಯಲ್ಲಿದ್ದ ಒಂಭತ್ತು ತಿಂಗಳ ಮಗುವಿಗೆ ಸತತ ನಾಲ್ಕು ತಾಸುಗಳವರೆಗೆ ಫೇಸಿಯೋ ಮ್ಯಾಕ್ಸಿಲರಿ ಸರ್ಜರಿ ನಡೆಸಿಕಿಮ್ಸ್‌ ವೈದ್ಯರು ಜೀವದಾನ ಮಾಡಿದ್ದಾರೆ. ಕಿಮ್ಸ್‌ನ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರು ಕ್ಲಿಷ್ಟಕರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಕೈಗೊಂಡಿದ್ದರಿಂದ ಹಾವೇರಿ ಜಿಲ್ಲೆ ಹೊಸರಿತ್ತಿ ಗ್ರಾಮದ 9 ತಿಂಗಳ ಮಗು ಅನ್ನಪ್ಪ ಬದುಕಿಳಿದಿದೆ.

ಕೂಲಿಕಾರ್ಮಿಕರಾದ ಮಗುವಿನ ತಂದೆ ಹುಸೇನಪ್ಪ ದುರ್ಗಮುರಗಿ ದಂಪತಿಯು ಹೊಸರಿತ್ತಿಯ ಹೊರವಲಯದ ಹೊಲದಲ್ಲಿ ಜೋಪಡಿ ಹಾಕಿಕೊಂಡುಮಲಗಿದ್ದರು. ಮಾ. 7ರಂದು ರಾತ್ರಿ ವೇಳೆ ತೋಳವೊಂದುಮಗು ಅನ್ನಪ್ಪನ ಮೇಲೆ ಏಕಾಏಕಿ ದಾಳಿ ಮಾಡಿ, ಮುಖಕಚ್ಚಿ ತಿಂದು ಮುಖ ಮತ್ತು ದವಡೆಯ ಕೆಳಗಿನ ಭಾಗ ಸಂಪೂರ್ಣ ಸೀಳಿ ಹಾಕಿತ್ತು. ಹೀಗಾಗಿ ಮಗುವಿಗೆ ತೀವ್ರ ರಕ್ತಸ್ರಾವವಾಗಿ ಸ್ಥಿತಿ ಗಂಭೀರವಾಗಿತ್ತು.

ತಕ್ಷಣ ಪಾಲಕರು ಮಗುವನ್ನು ಹೊಸರಿತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದು, ಹಾವೇರಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿದ್ದರು. ಅಲ್ಲಿ ಬಾಯಿಮತ್ತು ಶಸ್ತ್ರಚಿಕಿತ್ಸಾ ಸೌಲಭ್ಯ ಇಲ್ಲದ್ದರಿಂದ ಕಿಮ್ಸ್‌ಗೆಕಳುಹಿಸಿದ್ದರು. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಮಾ.8ರಂದು ಕಿಮ್ಸ್‌ ಆಸ್ಪತ್ರೆಯ ಚಿಕ್ಕ ಮಕ್ಕಳ ವಿಭಾಗಕ್ಕೆ ದಾಖಲಿಸಲಾಗಿತ್ತು.

ಸತತ 4 ತಾಸು ಶಸ್ತ್ರಚಿಕಿತ್ಸೆ: ಕಿಮ್ಸ್‌ನ ಚಿಕ್ಕ ಮಕ್ಕಳ ವಿಭಾಗದಲ್ಲಿ ದಾಖಲಾಗಿದ್ದ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಲು ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗಕ್ಕೆ ರೆಫರ್‌ ಮಾಡಲಾಗಿತ್ತು. ಇದನ್ನು ವಿಭಾಗದ ವೈದ್ಯರು ಸವಾಲಾಗಿ ಸ್ವೀಕರಿಸಿದರು.

ತೋಳವು ಮಗುವಿನ ಕೆಳಗಿನ ದವಡೆ ಮತ್ತು ಮುಖ ಕಿತ್ತು ತಿಂದಿದ್ದು, ಮಗುವಿಗೆ ಹಾಲು ಕುಡಿಯಲು ಆಗುತ್ತಿರಲಿಲ್ಲ. ಮಾ. 10ರಂದು ಕಿಮ್ಸ್‌ನ ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ ವಿಭಾಗದವರು ಮಗುವಿಗೆತುರ್ತು ಚಿಕಿತ್ಸೆ ನೀಡಲು ಮುಂದಾದರು. ಶಸ್ತ್ರಚಿಕಿತ್ಸೆಗೂಮುನ್ನ ರಕ್ತಸ್ರಾವ ತಡೆಗಟ್ಟಿ, ರೇಬಿಸ್‌ ಹಾಗೂ ನಂಜುಹರಡದಂತೆ ರೋಗ ನಿರೋಧಕ ಡ್ರಗ್ಸ್‌ ಕೊಟ್ಟು ನಂತರ ಅರವಳಿಕೆ ವಿಭಾಗದ ತಜ್ಞರಾದ ಡಾ| ಉಮೇಶ,ತರಣಜಿತ್‌ ಕೌರ್‌ ಅವರು ಮೂಗಿನಿಂದ ಟ್ಯೂಬ್‌ ಹಾಕಿ ಅರವಳಿಕೆ ನೀಡಿದರು. ಬಳಿಕ ಕೆಳಗಿನ ದವಡೆಗೆ ಪ್ಲೇಟ್‌ ಹಾಗೂ ಮೇಲಿನ ಚರ್ಮಕ್ಕೆ ನೀಟಾಗಿ ಹೊಲಿಗೆ ಹಾಕಿ ಮುಖದ ಕೆಳಗಿನ ದವಡೆಯ ಎಲುಬು (ಫೇಸಿಯೋಮ್ಯಾಕ್ಸಿಲರಿ ಸರ್ಜರಿ) ಜೋಡಿಸಿದ್ದಾರೆ. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ.

ಕಿಮ್ಸ್‌ನಲ್ಲಿ ಮಾತ್ರ ಎಫ್‌ಎಂಎಸ್‌ ಸೌಲಭ್ಯ: ಉತ್ತರ ಕರ್ನಾಟಕ ಭಾಗದ ಸರಕಾರಿ ಆಸ್ಪತ್ರೆಗಳಲ್ಲಿ ಬಾಯಿ ಮತ್ತುಮುಖ ಶಸ್ತ್ರಚಿಕಿತ್ಸಾ ವಿಭಾಗ ಬಳ್ಳಾರಿ ಹೊರತುಪಡಿಸಿದರೆ ಕಿಮ್ಸ್‌ ಆಸ್ಪತ್ರೆಯಲ್ಲಿ ಮಾತ್ರ ಲಭ್ಯವಿದೆ.

ಮಗುವಿನ ಆರೋಗ್ಯ ಸ್ಥಿರ :

ತೋಳ ದಾಳಿಯಿಂದ 9 ತಿಂಗಳ ಮಗುವಿನ ಮುಖದ ಚರ್ಮ ಮತ್ತು ದವಡೆಯ ಕೆಳಗಿನ ಸಂಪೂರ್ಣ ಭಾಗ ಕಿತ್ತು ಹೋಗಿತ್ತು. ತುರ್ತು ಚಿಕಿತ್ಸೆ ಆಧಾರ ಮೇಲೆ ಮಾ. 10ರಂದು ಕೆಳಗಿನ ದವಡೆಗೆ ಪ್ಲೇಟ್‌ ಹಾಕಿ, ಮೇಲಿನ ಚರ್ಮ ಹೊಲಿದು ಸತತ 4 ತಾಸುಗಳ ಕಾಲ ಶಸ್ತ್ರಚಿಕಿತ್ಸೆಮಾಡಲಾಯಿತು. ಈಗ ಮಗುವಿನ ಆರೋಗ್ಯ ಸ್ಥಿರವಾಗಿದೆ. ಮಗು ಈಗ ಚಿಕ್ಕದಾಗಿದ್ದರಿಂದ ಆರು ತಿಂಗಳು ಇಲ್ಲವೆ ಒಂದು ವರ್ಷದ ನಂತರ ಮೇಲಿನ ಮತ್ತು ಕೆಳಗಿನ ದವಡೆ ಮತ್ತೆ ಮರುಸ್ಥಾಪಿಸಲಾಗುವುದು ಎಂದು ಬಾಯಿ ಮತ್ತು ಮುಖ ಶಸ್ತ್ರಚಿಕಿತ್ಸಾ (ಫೇಸಿಯೋ ಮ್ಯಾಕ್ಸಿಲರಿ ಸರ್ಜರಿ) ವಿಭಾಗದ ಡಾ| ಮಂಜುನಾಥ ಎಂ. ವಿಜಾಪುರ ತಿಳಿಸಿದರು.

 

-ಶಿವಶಂಕರ ಕಂಠಿ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.