ರಿಜ್ವಿ ಶಿರಚ್ಛೇದಕ್ಕೆ ಇನಾಮು ಘೋಷಿಸಿದವನ ಮೇಲೆ ಎಫ್ಐಆರ್
ಕುರಾನ್ನಿಂದ 26 ಪದ್ಯ ಕೈಬಿಡಬೇಕು ಎಂದಿದ್ದ ರಿಜ್ವಿ
Team Udayavani, Mar 16, 2021, 11:30 PM IST
ಲಕ್ನೋ : ಇಸ್ಲಾಂ ಧರ್ಮಗ್ರಂಥ ಕುರಾನ್ನಿಂದ ವಿವಾದಿತ 26 ಪದ್ಯಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಉ.ಪ್ರ. ಶಿಯಾ ಸೆಂಟ್ರಲ್ ವಕ್ಫ್ ಬೋರ್ಡ್ನ ಮಾಜಿ ಅಧ್ಯಕ್ಷ ವಾಸೀಮ್ ರಿಜ್ವಿ ಭಾರೀ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಹೇಳಿಕೆಗೆ ಕೆರಳಿರುವ ವಕೀಲ ಅಮಿರುಲ್ ಹಸನ್ ಝೈದಿ ಎಂಬಾತ, “ರಿಜ್ವಿಯ ಶಿರಚ್ಛೇದ ಮಾಡಿದವರಿಗೆ 11 ಲಕ್ಷ ರೂ. ಇನಾಮು’ ಘೋಷಿಸಿದ್ದಾರೆ. ವಕೀಲನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಇನ್ನೊಂದೆಡೆ, ಶಿಯಾ ಮುಸ್ಲಿಂ ಯುವಕರು ಕೂಡ ರಿಜ್ವಿ ಹೇಳಿಕೆ ಖಂಡಿಸಿದ್ದು, “ಶಿಯಾ ಮುಸ್ಲಿಂ ಸ್ಮಶಾನದಲ್ಲಿ ಗೋರಿಯಾಗಲು ರಿಜ್ವಿಗೆ ಅರ್ಹತೆಯೇ ಇಲ್ಲ. ಕುರಾನ್ ವಿರುದ್ಧದ ಹೇಳಿಕೆ ಬಳಿಕ ರಿಜ್ವಿ ಮುಸ್ಲಿಮರನ್ನು ಅಗಲಿದ್ದಾರೆ’ ಎಂದು ಆರೋಪಿಸಿದ್ದಾರೆ. ದೆಹಲಿಯ ಜಾಮಾ ಮಸೀದಿ ರಿಜ್ವಿ ವಿರುದ್ಧ ಮಾ.19ರಂದು ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.
ಇದನ್ನೂ ಓದಿ :ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಹೊಸ ತಿರುವು : ಯುವತಿಯ ಅಪಹರಣವಾಗಿದೆ ಎಂದು ಪೋಷಕರ ದೂರು
ಬಿಜೆಪಿಯೂ ಗರಂ!: “ಯಾವುದೇ ಧರ್ಮದ ಗ್ರಂಥಕ್ಕೆ ಅಪಮಾನ ಎಸಗುವ ಹೇಳಿಕೆಯನ್ನು ಬಿಜೆಪಿ ಬೆಂಬಲಿಸುವುದಿಲ್ಲ. ಇದು ನಿಜಕ್ಕೂ ಖಂಡನೀಯ’ ಎಂದು ಬಿಜೆಪಿಯ ಹಿರಿಯ ಮುಸ್ಲಿಂ ಮುಖಂಡ ಸೈಯದ್ ಶಹನವಾಜ್ ಹುಸೇನ್ ಸ್ಪಷ್ಟಪಡಿಸಿದ್ದಾರೆ.
ರಿಜ್ವಿ ವಾದವೇನು?
“ಕುರಾನ್ನಲ್ಲಿನ 26 ಪದ್ಯಗಳು ಹಿಂಸಾತ್ಮಕ ಪ್ರಚೋದನೆ ಹೊಂದಿವೆ. ಇದು ಮೂಲ ಕುರಾನ್ನ ಭಾಗವೇ ಅಲ್ಲ. ಪ್ರವಾದಿ ಮೊಹಮ್ಮದ್ ಮರಣ ಬಳಿಕ ಇವನ್ನು ಸೇರಿಸಲಾಗಿದೆ’ ಎನ್ನುವುದು ರಿಜ್ವಿ ವಾದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು