ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ


Team Udayavani, Mar 18, 2021, 6:20 AM IST

ಅವರವರ ಪ್ರಕೃತಿಗೆ ಅನುಸರಿಸಿ ಸುಖ, ಸಂತೋಷ

ಸಂತಸ ಅಥವಾ ಮನಸಿನ ತೃಪ್ತಿ ಅಂದರೆ ಇದಮಿತ್ತಂ ಅಂತ ಹೇಳಬರುವುದಿಲ್ಲ. ಕೆಲವರಿಗೆ ಹಣ ಕೂಡಿ ಹಾಕಿ ಹಾಕಿ ರಸ್ತೆಯಲ್ಲಿ ಕುಣಿದು ಕುಪ್ಪಳಿಸುವ ಆಸೆ ಯಾದರೆ? ಇನ್ನೂ ಕೆಲವರಿಗೆ ದೊಡ್ಡ ಸಾಧನೆ ಮಾಡದೆ ಪ್ರಚಾರ ಗಿಟ್ಟಿಸುವ ಗೀಳು. ಮತ್ತೆ ಕೆಲವರಿಗೆ ದೊಡ್ಡ ರಾಜಕಾರಣಿಗಳ ಸಂಗ ಮಾಡಿ ಅವರಿಗೆ ಭೋಪರಾಕು ಹಾಕುವುದೇ ಜೀವನದ ಸುಂದರ ಕ್ಷಣಗಳು. ತಿಂಡಿಪೋತರಿಗೆ ಪುಗಸಟ್ಟೆ ಹೊಟ್ಟೆ ತುಂಬಾ ತಿಂದು ತೇಗುವುದೆ ಗಮ್ಮತ್ತು. ಇನ್ನೂ ಕೆಲವು ಮಂದಿ ಚಿತ್ರಕಲೆ, ಗಾಯನ, ನೃತ್ಯ ಇತ್ಯಾದಿಗಳನ್ನು ಸುಖದ ತಾಣವಾಗಿ, ಹವ್ಯಾಸವಾಗಿ ಬೆಳೆಸಿಕೊಳ್ಳುತ್ತಾರೆ.

ಇದಲ್ಲದೆ ಇನ್ನೊಂದು ಅಪರೂಪದ ಗುಂಪು ಕೂಡ ಇದೆ. ಇವರು ಸಂತಸವನ್ನು ಅರಸಿ ಬಡಬಗ್ಗರ, ದೀನ ದಲಿತರ ಸೇವೆಯಲ್ಲಿ ತಮ್ಮ ಜೀವನದಲ್ಲಿ ಸಾರ್ಥಕ್ಯ ಕಾಣುತ್ತಾರೆ. ಆದರೆ ಈ ಕೊನೆಯ ವರ್ಗ ಮಾತ್ರ ಅಪರೂಪದ ಮತ್ತು ಅತೀ ಕಡಿಮೆ ಸಂಖ್ಯೆಯಲ್ಲಿರುವವರು. ಇವರಿಗೆ ಹಣಬಲ ಬೇಕೆಂದೇನೂ ಇಲ್ಲ. ಆದರೆ ತಮ್ಮೊಂದಿಗೆ ಸಹಕರಿಸುವ, ಸ್ಪಂದಿಸುವ ಜನಬಲವೇ ಇವರ ಆಸ್ತಿ.

ಹಾಗೆ ಲೋಕದಲ್ಲಿ ಜನರ ಸುಖ ಸಂತೋಷ ಅಳೆಯುವುದು ಅವರವರ ಪ್ರಕೃತಿಗೆ ಅನುಸರಿಸಿ ಎನ್ನದೆ ವಿಧಿ ಇಲ್ಲ.
ಆದರೆ ಇದಕ್ಕೆಲ್ಲ ವಿಪರೀತವಾಗಿ ನಾನು, ನನ್ನದು ಎಂದು ಬಗೆದು ಲೋಕ ಮುಳುಗಿದರೆ ನನಗೇನು ಎಂಬ ಭಾವ ಮೆರೆಯುವ ಸ್ವಕೇಂದ್ರಿತ, ಸ್ವಜನ ಹಿತ ಬಯಸುವ, ಸಮಾಜದ ಋಣ ನಾನೇಕೆ ತೀರಿಸಲಿ ಎಂದು ಅಹಂಕಾರದ ಮೂಟೆ ಹೊತ್ತು ಜೀವಿಸುವ ವರ್ಗ ಮಾತ್ರ ಅದೇನು ಸುಖದಿಂದ ಬಾಳುತ್ತದೋ ತಿಳಿಯದು. ಕೊನೆಗೆ ನಂದ ರಾಯನ ಬದುಕು ನರಿ, ನಾಯಿ ತಿಂದು ಹೋಯಿತು ಅಂದ ಹಾಗೆ ಇವರ ಬದುಕು.

ನಮ್ಮ ಗಳಿಕೆ ಎಂಬುದು ಸಮಾಜ ಒದಗಿಸಿದ್ದು. ಕೆಲವೊಮ್ಮೆ ನಮ್ಮ ನಿರೀಕ್ಷೆಗೂ ಮೀರಿ ಧನ ಸಂಪತ್ತು ಲಭ್ಯವಾಗುವುದು ಸುಳ್ಳಲ್ಲ. ದೇವರು ಕೆಲವೊಂದು ಮಂದಿಗೆ ಅದೇಕೋ ಉದಾರತೆ ತೋರುತ್ತಾನೆ. ಆ ಸಂದರ್ಭದಲ್ಲಿ ವ್ಯಕ್ತಿ ಅಹಂಕಾರ ಮೆರೆಯುವುದು ಸರಿಯಲ್ಲ. ತನ್ನ ಆವಶ್ಯಕತೆಗೆ ತಕ್ಕಷ್ಟು ತನ್ನದು ಉಳಿದದ್ದು ಸಮಾಜಕ್ಕೆ ಸಲ್ಲ ಬೇಕಾದದ್ದು ಎಂಬ ಮನೋಧರ್ಮ ತನ್ನದಾಗಿಸಿಕೊಂಡರೆ ಆತನ ಸಂತಸದ ಕ್ಷಣಗಳು ಹೆಚ್ಚುತ್ತವೆ. ಬಾಯಾರಿದವನಿಗೆ ನೀರು, ಹಸಿದವನಿಗೆ ಒಂದು ಹಿಡಿ ಅನ್ನ, ರೋಗದಿಂದ ಬಳಲುವ ವ್ಯಕ್ತಿಗೆ ತಕ್ಕ ಚಿಕಿತ್ಸೆ ಇತ್ಯಾದಿ ಕರ್ಮಗಳನ್ನು ಮಾಡಿ ಅದರಲ್ಲಿ ತನ್ನ ಜೀವನದ ಸಾರ್ಥಕ್ಯ ಭಾವ ಮೆರೆಯುವ ಜನರು ನಿಜವಾಗಿಯೂ ಧನ್ಯರು. ತಮ್ಮ ಬದುಕು ತಮಗಾಗಿಯೇ ಅಲ್ಲ. ಸಹಜೀವಿಗಳಿಗೂ ಅದರಲ್ಲಿ ಹಕ್ಕು ಇದೆ ಎಂಬ ಮನಸ್ಸು ನಿಜ ಅರ್ಥದಲ್ಲಿ ಶ್ರೀಮಂತಿಕೆ. ಈ ತರದ ಸಮಾಜಮುಖೀ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡು ಬಾಳುವ ಮಂದಿ ನಿಜವಾಗಿಯೂ ದೇವರಿಗೆ ಪೂಜೆ ಪುನಸ್ಕಾರ ಮಾಡದಿದ್ದರೂ “ಮಾನವ ಸೇವೆ ಮಾಧವ ಸೇವೆ’ ಎಂಬ ಧರ್ಮ ಅನುಸರಿಸುವ ಮಹಾನ್‌ ಚೇತನಗಳು. ಇವರೇನೂ ತಮ್ಮ ಸತ್ಕಾರ್ಯಗಳಿಗೆ ಪ್ರತಿಯಾಗಿ ಏನೇನೂ ಅಪೇಕ್ಷೆ ಇಟ್ಟುಕೊಳ್ಳುವ ಜಾಯಮಾನದವರಲ್ಲ. ತಮ್ಮ ಕಾಯಕ ನೆರವೇರಿಸಿ ಅದರಲ್ಲೇ ತೃಪ್ತಿ, ಸಂತಸ ಪಡುವ ಮನೋಧರ್ಮದ ಶ್ರೀಮಂತರು.

ಮನುಷ್ಯ ಜೀವನದ ಉದ್ದೇಶ ಏನೆಂದು ಅರಿತು, ಸಂತೃಪ್ತಿ-ಸಂತೋಷಗಳ ನಿರ್ವಚ ನವನ್ನು ಆವಿಷ್ಕರಿಸಿದ ವ್ಯಕ್ತಿ ಹುಟ್ಟಿದ್ದು ನಿಜವಾಗಿಯೂ ಸಾರ್ಥಕ. ಯಾವುದು ಸರಿಯೋ ಅದನ್ನು ಆರಿಸಿ ತಮ್ಮ ಜೀವನಕ್ಕೆ ಅರ್ಥ ಕಂಡುಕೊಳ್ಳಿ. ಅರ್ಥವತ್ತಾಗಿ ಜೀವಿಸಲು ಕಲಿಯಿರಿ, “ಅರ್ಥ’ ಹೊತ್ತು ಹೊತ್ತು, ಬಳಲಿ ಕೊನೆಯಲ್ಲಿ ನಾಲ್ಕು ಜನಕ್ಕೆ ಹೊರುವ ಕಾಯಕ ಸಿಗದಂತೆ ಜೀವನಕ್ಕೆ ವಿದಾಯ ಹೇಳಬೇಡಿ.

– ಬಿ. ನರಸಿಂಗ ರಾವ್‌, ಕಾಸರಗೋಡು

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.