ಎಪ್ರಿಲ್ ಫೂಲ್ ಎಂದು ನೆರವಿಗೆ ಬಾರದ ಗ್ರಾಮಸ್ಥರು: ವಿಷ ಸೇವಿಸಿದ್ದ ಬಾಲಕಿ ಸಾವು
Team Udayavani, Apr 1, 2021, 11:02 PM IST
ಸಾಂದರ್ಭಿಕ ಚಿತ್ರ
ಎಚ್.ಡಿ.ಕೋಟೆ: ಬಾಲಕಿಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನೊಡನೆ ಸೆಣಸಾಡುತ್ತಿದ್ದರೂ ಎಪ್ರಿಲ್ ಫೂಲ್ ಎಂದು ಭಾವಿಸಿ ಸಕಾಲದಲ್ಲಿ ಗ್ರಾಮಸ್ಥರು ಸಹಾಯಕ್ಕೆ ಬಾರದ ಕಾರಣ ಆಕೆ ಮೃತಪಟ್ಟ ಘಟನೆ ತಾಲೂಕಿನ ಹೊಸಳ್ಳಿಯಲ್ಲಿ ನಡೆದಿದೆ.
ಎಚ್.ಡಿ. ಕೋಟೆ ತಾಲೂಕಿನ ಎನ್. ಬೇಗೂರು ಹೊಸಳ್ಳಿ ಗ್ರಾಮದ ನಾಗರಾಜು ಎಂಬವರ ಪುತ್ರಿ ಜ್ಯೋತಿ (17) ಸಹೋದರ ಬೈದಿದ್ದಾನೆ ಎಂಬ ಕಾರಣಕ್ಕಾಗಿ ಕ್ರಿಮಿನಾಶಕ ಸೇವಿಸಿದ್ದಳು. ಆಕೆ ಅಸ್ವಸ್ಥಳಾಗುತ್ತಿದ್ದಂತೆ ಮನೆಯವರು ಗ್ರಾಮಸ್ಥರಲ್ಲಿ ಸಹಾಯ ಯಾಚಿಸಿದ್ದರು. ಎಪ್ರಿಲ್ ಫೂಲ್ ಮಾಡುತ್ತಿರಬೇಕು ಎಂದು ಭಾವಿಸಿ ಯಾರೂ ಬಂದಿರಲಿಲ್ಲ. ಕೊನೆಗೆ ಮನೆಯವರೇ ಕಷ್ಟಪಟ್ಟು ಎಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ಆಕೆ ದಾರಿ ಮಧ್ಯೆ ಕೊನೆಯುಸಿರೆಳೆದಳು.