ನಮ್ಮ ಬಲ ಕಾಲುಗಳೆಂಬ ಬೇರುಗಳಲ್ಲಿವೆ..


Team Udayavani, Apr 8, 2021, 1:08 AM IST

ನಮ್ಮ ಬಲ ಕಾಲುಗಳೆಂಬ ಬೇರುಗಳಲ್ಲಿವೆ..

ನಾನು ಎಂದಾಕ್ಷಣ ಅದನ್ನು “ಅಹಂ’ ಎಂದೇ ಅರ್ಥೈ ಸಬೇಕಿಲ್ಲ. ಅಹಂ ಇಲ್ಲದೆ ನಮ್ಮ ವ್ಯಕ್ತಿತ್ವ ಪರಿಪೂರ್ಣ ಎಂದೆನಿಸಿಕೊಳ್ಳದು. ಹಾಗೆಂದು ಈ ಅಹಂ ಅತಿಯಾದರೆ ಅದು ದುರಹಂಕಾರ. ಇದು ನಮ್ಮನ್ನು ವಿನಾಶದತ್ತ ತಳ್ಳುತ್ತದೆ. ಹಾಗಾದರೆ ಅಹಂಕಾರ ಪಡು ವಂತಿಲ್ಲವೇ? ಎಂಬ ಪ್ರಶ್ನೆ ನಮ್ಮನ್ನು ಕಾಡು ವುದು ಸಹಜ. ಅಹಂ ಇರಲೇಬೇಕು. ಆದರೆ ಈ ಅಹಂ ನಮ್ಮ ಇತಿಮಿತಿಯೊಳಗೆ ಇದ್ದರಷ್ಟೇ ಚೆನ್ನ. ಇಂತಹ ಅಹಂ ನಮ್ಮ ಜೀವನದ ಗುರಿಯನ್ನು ತಲುಪಲು ಏಣಿಯಾಗಬಹುದು.

ಸ್ವಾವಲಂಬನೆಯಲ್ಲಿಯೇ ಅವಲಂಬನೆ ಸಮ್ಮಿಳಿತವಾಗಿದೆ. ಸ್ವಾವಲಂಬನೆಯಿಂದ ನಾವು ಸದೃಢಗೊಳ್ಳಬಹುದು. ಅವಲಂಬನೆ ನಮ್ಮನ್ನು ಸ್ವಾವಲಂಬನೆಯ ಹಾದಿಯಲ್ಲಿ ಕೊಂಡೊಯ್ಯಬಹುದು. ಇಲ್ಲೂ ಹಾಗೆ ಅವಲಂಬನೆಗೂ ಮಿತಿ ಇದೆ. ಇದು ಹೆಚ್ಚಾದಲ್ಲಿ ಅದು ನಮ್ಮನ್ನು ಬಡಮೇಲು ಗೊಳಿಸಬಹುದು. ಒಂದು ಚೌಕಟ್ಟಿನಲ್ಲಿ ಅವಲಂಬನೆ ಕೇವಲ ನಮ್ಮನ್ನು ಮಾತ್ರವಲ್ಲದೆ ನಾವು ಅವಲಂಬಿಸಿರುವವರನ್ನು ಸ್ವಾವಲಂಬಿಗಳನ್ನಾಗಿ ಮಾಡಬಲ್ಲುದು.

ಅಮೆರಿಕದ ನದಿ ತೀರಗಳಲ್ಲಿ ಹಲವಾರು ವರ್ಷಗಳಿಂದ ಗಾಳಿ ಮಳೆಗೆ ಅಂಜದೆ ಗಟ್ಟಿಯಾಗಿ ನಿಂತಿರುವ ಮರಗಳನ್ನು ನೋಡಿದ ವಿಜ್ಞಾನಿಗಳಿಗೆ ಇದಕ್ಕೆ ಕಾರಣವೇನು? ಎಂಬ ಕುತೂಹಲ ಉಂಟಾಯಿತು. ಈ ಕೌತುಕದ ಹಿಂದಿನ ಕಾರಣವನ್ನು ಸಂಶೋಧಿಸಲು ಅವರು ಆ ಬಗ್ಗೆ ಅಧ್ಯಯನ ನಡೆಸಲು ಮುಂದಾದರು. ಮೊದಲು ಅದರ ಮರದ ಬುಡವನ್ನು ಅಗೆದು ಬೇರುಗಳನ್ನು ಪರೀಕ್ಷಿಸಿದರು. ಬೇರುಗಳು ಭೂಮಿಯೊಳಗೆ ಆಳವಾಗಿ ಚಾಚದೆ ಮೇಲಿನ ಪದರದಲ್ಲಿತ್ತು. ಅವರಿಗೆ ಮತ್ತಷ್ಟು ಆಶ್ಚರ್ಯವಾಯಿತು. ಆಳವಾಗಿ ಬೇರೂರಿದ್ದರೆ ತಾನೇ ಮರಗಳು ಗಟ್ಟಿಯಾಗಿ ನಿಲ್ಲುವುದು. ಹಾಗಾದರೆ ಈ ಮರಗಳು ಸಾವಿರಾರು ವರ್ಷ ಗಾಳಿ, ಮಳೆ, ಬಿರುಗಾಳಿಯನ್ನು ಎದುರಿಸಿ ನಿಂತಿದ್ದಾದರೂ ಹೇಗೆ ಎಂಬ ಪ್ರಶ್ನೆ ಅವರನ್ನು ಕಾಡತೊಡಗಿತು. ಕುತೂಹಲ ತಡೆಯಲಾರದೆ ಅವರು ಸಂಶೋಧನೆಯನ್ನು ಮುಂದುವರಿಸಿದಾಗ ಅವರಿಗೆ ಅಚ್ಚರಿಯ ದೃಶ್ಯ ಕಂಡು ಬಂತು. ಅದೇನೆಂದರೆ ಮರಗಳ ಬೇರುಗಳು ಅದೇ ಜಾತಿಯ ಇನ್ನೊಂದು ಮರದ ಬೇರಿಗೆ ಸುತ್ತಿಕೊಂಡಿದ್ದವು. ಮತ್ತೂ ಪರೀಕ್ಷಿಸಿದಾಗ ಅವೆರಡರ ಬೇರುಗಳು ಅದೇ ಜಾತಿಯ ಮಗದೊಂದು ಮರಕ್ಕೆ ಸುತ್ತಿಕೊಂಡಿವೆ. ಹೀಗೆ ಪ್ರತಿಯೊಂದೂ ಮರದ ಬೇರುಗಳು ಒಂದಕ್ಕೊಂದು ಸುತ್ತಿಕೊಂಡಿರುವುದರಿಂದ ಅವುಗಳಿಗೆ ಸಾವಿರಾರು ವರ್ಷಗಳಿಂದ ಯಾವುದೇ ಬಿರುಗಾಳಿಗೂ ನೆಲಕಚ್ಚದೆ ಸದೃಢವಾಗಿ ನಿಲ್ಲಲು ಸಾಧ್ಯವಾಗಿದೆ ಎಂಬುದು ವಿಜ್ಞಾನಿಗಳಿಗೆ ದೃಢಪಟ್ಟಿತು.

ನಮ್ಮ ಜೀವನವೂ ಅಷ್ಟೇ. ನಾವು ಎಲ್ಲ ಕಷ್ಟಗಳನ್ನು ಎದುರಿಸಿ ಗಟ್ಟಿಯಾಗಿ ಆತ್ಮ ಬಲದಿಂದ ನಿಲ್ಲಬೇಕು. ಯಾವುದಕ್ಕೂ ಹೆದರಬಾರದು. ನಮ್ಮ ಕಾಲುಗಳು ಭೂಮಿಯ ಮೇಲೆ ಬಲವಾಗಿ ಬೇರೂರಿ ಬೀಳದ ಹಾಗೆ ನಿಲ್ಲಬೇಕು. ಜೀವ ಅಮೂಲ್ಯ. ಮರಗಳಿಗೆ ಜೀವ ಇದ್ದಂತೆ ನಮಗೂ ಜೀವ ಇದೆ ತಾನೇ. ಹಾಗಾದರೆ ಭಯವೇಕೆ. ನಾವೆಲ್ಲರೂ ಒಗ್ಗಟ್ಟಾಗಿ ನಿಂತರೆ ಶತ್ರುಗಳೂ ನಮ್ಮ ಹತ್ತಿರ ಸುಳಿಯಲಾರರು. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದು ಇದಕ್ಕೇ ತಾನೆ. ಒಗ್ಗಟ್ಟು ನಮ್ಮ ಶಕ್ತಿಯನ್ನು ನೂರ್ಮಡಿ ಹೆಚ್ಚಿಸಬಲ್ಲುದು.

ನಮ್ಮನ್ನು ನಾವು ಮೊದಲು ಪರೀಕ್ಷಿಸಿಕೊಳ್ಳಬೇಕು. ನಮ್ಮಲ್ಲಿರುವ ಶಕ್ತಿಯನ್ನು ನಾವು ಹೊರಹಾಕಬೇಕು. ಮಾತ್ರವಲ್ಲ ಅದನ್ನು ಸರಿಯಾದ ಸಮಯದಲ್ಲಿ ಉಪಯೋಗಿಸಬೇಕು. ಈ ಮೂಲಕ ನಾವು ಕೂಡ ಬಲಿಷ್ಠರು ಎಂದು ಸಮಾಜಕ್ಕೆ ತೋರಿಸಿ ಕೊಡಬೇಕು.
ನಮ್ಮ ಬಲ ನಮ್ಮ ಕಾಲಲ್ಲಿ ಇರುವಾಗ ಇನ್ನೊಬ್ಬರ ಸಹಾಯ ನಮಗೆ ಬೇಕಿಲ್ಲ. ಅದುವೇ ಆತ್ಮನಿರ್ಭರ. ನಾವು ನಮ್ಮ ಕಾಲಲ್ಲಿ ಗಟ್ಟಿಯಾಗಿ ನಿಂತು ಎಲ್ಲವನ್ನು ಆತ್ಮ ಬಲದಿಂದ ಎದುರಿಸೋಣ.

- ಕೆ.ಪಿ.ಎ. ರಹೀಮ…, ಮಂಗಳೂರು

ಟಾಪ್ ನ್ಯೂಸ್

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.