ಕಂದನ ಉಸಿರು ನಿಲ್ಲಿಸಿದ ಬಿರುಗಾಳಿ : ಮೇಲ್ಛಾವಣಿ ಹಾರಿ ಮಗು ಸಾವು
Team Udayavani, Apr 28, 2021, 10:09 AM IST
ವಿಜಯಪುರ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಜೋರಾಗಿದೆ. ಬಿರುಗಾಳಿಗೆ ಮಗುವಿದ್ದ ಜೋಳಿಗೆ ಸಮೇತ ಮೇಲ್ಛಾವಣಿ ಹಾರಿ ಹೋಗಿ, ಹಸುಳೆ ಬಲಿಯಾದ ದುರ್ಘಟನೆ ವರದಿಯಾಗಿದೆ.
ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಅಬ್ದುಲ್ ರೆಹಮಾನ ಕಸಬ್ ಎಂಬವರ 5 ತಿಂಗಳ ಮಗು ಮುಸ್ಕಾನ್ ಮೃತ ದುರ್ದೈವಿ. ಮಗುವನ್ನು ಮನೆಯ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿ ಮಲಗಿಸಲಾಗಿತ್ತು.
ಇದನ್ನೂ ಓದಿ : ಪುಟ್ಟಣ್ಣ ಕಣಗಾಲ್ ಪುತ್ರ ರಾಮು ಕಣಗಾಲ್ ಕೋವಿಡ್ ಗೆ ಬಲಿ
ಮಂಗಳವಾರ ಸಂಜೆ ಬೀಸಿದ ಬಿರುಗಾಳಿಗೆ ಅಬ್ದುಲ್ ರೆಹಮಾನ್ ಕಸಾಬ ಹಾಗೂ ತಬಸುಮ್ ದಂಪತಿ ವಾಸವಿದ್ದ ಮನೆಯ ತಗಡಿನ ಹೊದಿಕೆಯ ಸೆಡ್ ಮೇಲ್ಛಾವಣಿ ಹಾರಿ ಹೋಗಿದೆ. ಈ ಸಂದರ್ಭದಲ್ಲಿ ಮೇಲ್ಛಾವಣಿ ಕಂಬಿಗೆ ಕಟ್ಟಿದ್ದ ಜೋಳಿಗೆಯಲ್ಲಿದ್ದ ಮಗು ಸಮೇತ ಸುಮಾರು 50 ಅಡಿ ದೂರದಲ್ಲಿದ್ದ ವಿದ್ಯುತ್ ಕಂಬಕ ಬಡಿದು, ಶಾಟ್ ಸರ್ಕ್ಯೂ ಆಗಿ ಮೃತಪಟ್ಟಿದೆ.
ಮಗುವನ್ನು ಕಳೆದುಕೊಂಡ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura ಮರ್ಯಾದಾ ಹತ್ಯೆ: ಇಬ್ಬರಿಗೆ ಗಲ್ಲು,ಐವರಿಗೆ ಜೀವಾವಧಿ ಶಿಕ್ಷೆ
ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ
Vijayapura: ಸೀಟಿಗಾಗಿ ಮಹಿಳೆಯರ ಕಿತ್ತಾಟ: ರಸ್ತೆಯಲ್ಲೇ ನಿಂತ ಬಸ್
BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ
Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ