ಕೋವಿಡ್ ಸಮಯದಲ್ಲಿ ಜನರಿಗೆ ಸಹಾಯ ಮಾಡುವಂತೆ ಕಂಗನಾಗೆ ರಾಖಿ ಮನವಿ
Team Udayavani, Apr 29, 2021, 8:59 PM IST
ಮುಂಬೈ : ದೇಶವು ಕೋವಿಡ್ನಿಂದಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಜನರಿಗೆ ಸಹಾಯ ಮಾಡು ಎಂದು ಬಾಲಿವುಡ್ ನಟಿ ಕಂಗನಾ ಅವರಿಗೆ ರಾಖಿ ಸಾವಂತ ಮನವಿ ಮಾಡಿದ್ದಾಳೆ.
ಇಂದು ಮಾಧ್ಯಮಗಳ ಎದುರು ಮಾತಾಡಿರುವ ರಾಖಿ ಸಾವಂತ್, ಕೋವಿಡ್ ಎರಡನೇ ಅಲೆಯಿಂದಾಗಿ ದೇಶವು ಸಂಕಷ್ಟಕ್ಕೆ ಸಿಲುಕಿದೆ. ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಜನರಿಗೆ ನಿನ್ನ ಸಹಾಯ ಅಗತ್ಯವೆನ್ನಿಸುತ್ತಿದೆ. ನೀನ್ನ ಬಳಿ ಕೋಟ್ಯಂತರ ರೂಪಾಯಿ ಹಣ ಇದೆ. ಅದರಿಂದ ಆಕ್ಸಿಜನ್ ಖರೀದಿಸಿ ಆಸ್ಪತ್ರೆಗಳಿಗೆ ಒದಗಿಸು, ಹಸಿದ ಜನರಿಗೆ ಅನ್ನ ನೀಡು ಎಂದು ಮನವಿ ಮಾಡಿಕೊಂಡಿದ್ದಾಳೆ.
ಇನ್ನು ಇತ್ತೀಚಿಗಷ್ಟೆ ರಾಖಿ ಸಾವಂತ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಬ್ರೈನ್ ಟ್ಯೂಮರ್ ನಿಂದಾಗಿ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಅವರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಆತನ ಸಹೋದರ ಸಹಾಯದ ಹಸ್ತ ಚಾಚಿದ್ದರು. ಸಲ್ಲು ಕುಟುಂಬದ ಆರ್ಥಿಕ ನೆರವಿನಿಂದ ರಾಖಿ ಅವರ ತಾಯಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದ ಸಲ್ಮಾನ್ ಖಾನ್ ಫ್ಯಾಮಿಲಿಗೆ ರಾಖಿ ಕೃತಜ್ಞತೆ ತಿಳಿಸಿದ್ದರು.