ಶಿರ್ವ : ಪಾಪನಾಶಿನಿ ನದಿಗಿಳಿದ ಮೂವರು ಯುವಕರು ನೀರುಪಾಲು
Team Udayavani, May 2, 2021, 7:06 PM IST
ಶಿರ್ವ: ಪಾಂಬೂರು ಅಮಾಸೆಕರಿಯ ಬಳಿ ಪಾಪನಾಶಿನಿ ನದಿಗಿಳಿದ ಮೂವರು ಯುವಕರು ನೀರುಪಾಲದ ಘಟನೆ ರವಿವಾರ ಸಂಜೆ ನಡೆದಿದೆ.
ಶಿರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಾಂಬೂರು ಅಮಾಸೆಕರಿಯ ಮೂವರು ಯುವಕರು ನೀರುಪಾಲಾಗಿದ್ದಾರೆ.ಮೃತರನ್ನು ಸುಭಾಷ್ ನಗರ ಸರ್ಕಾರಿಗುಡ್ಡೆ ನಿವಾಸಿ ಮೊಹಮ್ಮದ್ ಜಾಬೀರ್(18),ಕುರ್ಕಾಲು ಸುಭಾಷ್ ನಗರದ ನಿವಾಸಿ ಮಹಮ್ಮದ್ ರಿಜ್ವಾನ್(18) ಮತ್ತು ಮೂಡಬಿದಿರೆ ತಾಕೊಡೆ ನಿವಾಸಿ ಕೆಲ್ವಿನ್ ಕ್ಯಾಸ್ತಲಿನೋ(21) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಕಾಪು ವ್ರತ್ತ ನಿರೀಕ್ಷಕ ಪ್ರಕಾಶ್ ಮತ್ತು ಶಿರ್ವ ಕ್ರೈಮ್ ಎಸ್ ಐ ವೇದಾವತಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ.