ಸರ್ಕಾರಗಳು ವಿಫಲವಾಗಿದ್ದೆ 2ನೇ ಅಲೆ ತೀವ್ರತೆಗೆ ಕಾರಣ
Team Udayavani, May 15, 2021, 7:27 PM IST
ಕೋಲಾರ: ಭಾರತದಲ್ಲಿ ಕೋವಿಡ್-19 ಹರಡಿದಪ್ರಾರಂಭದಲ್ಲೇ ಸರಿಯಾದ ರೀತಿಯಲ್ಲಿ ಅರಿಯುವಲ್ಲಿ ಸರ್ಕಾರಗಳು ವಿಫಲವಾಗಿದ್ದರಿಂದಲೇ 2ನೇಅಲೆಯೂ ಅತ್ಯಂತ ತೀವ್ರತೆಯಿಂದ ಕೂಡುವಂತಾಯಿತು ಎಂದು ಸಾಮಾಜಿಕ ಹೋರಾಟಗಾರ ಹಾಗೂವೈದ್ಯ ಡಾ.ಎಚ್.ವಿ. ವಾಸು ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬೆಂಗಳೂರು ಉತ್ತರವಿವಿ ಕನ್ನಡ ಮತ್ತು ಸಮಾಜ ಕಾರ್ಯ ವಿಭಾಗದವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ”ಕೋವಿಡ್ 2ನೇ ಅಲೆ ಎಚ್ಚರಿಕೆ ಮತ್ತು ಕೋವಿಡ್ತಡೆಯಲು ಅನುಸರಿಸಬೇಕಾದ ಕ್ರಮಗಳು’ ಎಂಬಉಪನ್ಯಾಸ ಮತ್ತು ಸಂವಾದದ ವೆಬಿನಾರ್ನಲ್ಲಿಮಾತನಾಡಿದರು.2ನೇ ಅಲೆ ತನ್ನ ರೂಪ ಬದಲಿಸಿ ಸಮುದಾಯದೊಳಗೆ ಪ್ರವೇಶಿಸಿದೆ. ಆದರೆ, ಕಾಯಿಲೆ ಯಾರಿಂದಬಂತು ಎಲ್ಲಿಂದ ಬಂತು ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ, ಅದೇ ಮೂಲ ಕಾರಣವೇಇಷ್ಟೊಂದು ಸಮಸ್ಯೆಗೆ ಕಾರಣವಾಗಿದೆ ಎಂದರು.
ಅನೇಕ ಗೊಂದಲ: ದೇಶದಲ್ಲಿ ಮೊದಲನೇ ಅಲೆಬಂದಾಗ 10 ಸಾವಿರ ವೆಂಟಿಲೇಟರ್ಗಳಿದ್ದವು 2ನೇಅಲೆ ಬರುವಷ್ಟರಲ್ಲಿ 25 ಸಾವಿರ ವೆಂಟಿಲೇಟರ್ಗಳಾದವು. ಕರ್ನಾಟಕದ ಚಿತ್ರಣ ನೋಡಿದರೆ 950ಐಸಿಯು ಬೆಡ್ಗಳಿದ್ದು 2ನೇ ಅಲೆ ಬರುವಷ್ಟರಲ್ಲಿಅಷ್ಟೊಂದು ಬದಲಾವಣೆ ಕಾಣಲಿಲ್ಲ. ಮಹಾರಾಷ್ಟ್ರದಲ್ಲಿ ಮೊದಲನೇ ಅಲೆಯಲ್ಲಿಯೇ 1200 ವೆಂಟಿಲೇಟರ್ ಹೆಚ್ಚಿಸಿಕೊಂಡರು. ಎರಡನೇ ಅಲೆಯಲ್ಲಿಪರೀಕ್ಷೆ ಬಗ್ಗೆ ಅನೇಕ ಗೊಂದಲಗಳಿವೆ.
ಟೆಸ್ಟ್ನಲ್ಲಿನೆಗೆಟಿವ್ ಬಂದು ಸಿಟಿಸ್ಕ್ಯಾನ್ ನಲ್ಲಿ ಪಾಸಿಟಿವ್ಬಂದಿರುವ ಕೇಸು ನೋಡುತ್ತೇವೆ ಎಂದರು.ಶ್ರಮವಹಿಸಿ ಕಾರ್ಯ: ಈ ವೇಳೆ ಸರ್ಕಾರವನ್ನುಸಮಾಜ ದೂಷಿಸದೆ ನಮ್ಮಿಂದ ಏನು ಮಾಡಲುಸಾಧ್ಯ ಎಂಬುದನ್ನು ನಾವೆಲ್ಲರೂ ಅರಿಯಬೇಕು.ಈ ನಿಟ್ಟಿನಲ್ಲಿ ಕರ್ನಾಟಕ ಕೋವಿಡ್ ವಾಲಂಟೀರ್ಸ್ಟೀಂ ಕಾರ್ಯಕರ್ತರು ಅಮೆರಿಕ ಮತ್ತು ಬ್ರಿಟನ್ನಿಂದ ಸಹಾಯ ಮಾಡುತ್ತಿದ್ದಾರೆ. ಸರ್ಕಾರದ ಅ ಧಿಕಾ ರಿ ಗಳು ಸಿಬ್ಬಂದಿಗಳು ವರ್ಗ, ಆರೋಗ್ಯಇಲಾಖೆ ಸಿಬ್ಬಂದಿ ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಹೋರಾಡಬೇಕಿದೆ: ವೆಬಿನಾರ್ನಲ್ಲಿ ಬೆಂಗಳೂರುಉತ್ತರ ವಿಶ್ವವಿದ್ಯಾಲಯ ಕುಲಪತಿ ಟಿ.ಡಿಕೆಂಪರಾಜು, ಪ್ರಾಸ್ತಾವಿಕವಾಗಿ ಮಾತನಾಡಿ, 2ನೇಅಲೆ ಬಗ್ಗೆ ದೇಶದಲ್ಲಿ ಈಗಾಗಲೇ ಕೋವಿಡ್ ತಡೆಗೆಅನೇಕ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ವಿವಿಮಟ್ಟದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಎಲ್ಲರೂವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು, ಕೋವಿಡ್ ಬಗ್ಗೆಭಯ ಬೇಡ. ಭವಿಷ್ಯತ್ತಿನಲ್ಲಿ ಮಹಾಮಾರಿಹಿಮ್ಮೆಟ್ಟಿಸಲು ಒಂದಾಗಿ ಹೋರಾಡಬೇಕಾಗಿದೆಎಂದರುವೆಬಿನಾರ್ನಲ್ಲಿ ಕನ್ನಡ ವಿಭಾಗದ ಡಾ.ನೇತ್ರಾವತಿನಿರೂಪಿಸಿ, ಸಮಾಜ ಕಾರ್ಯ ವಿಭಾಗದ ಸಂಯೋಜಕ ಡಾ.ಗುಂಡಪ್ಪ ದೇವಿಕೇರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?