ಮಲಾಡ್, ಸಾಂತಾಕ್ರೂಜ್ ನಿರಂಕರಿ ಭವನಗಳಲ್ಲಿ ಲಸಿಕೆ ಕೇಂದ್ರ ಪ್ರಾರಂಭ
Team Udayavani, May 25, 2021, 7:44 PM IST
ಮುಂಬಯಿ: ಸಂತ ನಿರಂಕರಿ ಮಿಷನ್ ಸಾಂತಾಕ್ರೂಜ್ನಲ್ಲಿರುವ ಸತ್ಸಂಗ್ ಭವನದಲ್ಲಿ ಕೋವಿಡ್ ಲಸಿಕೆ ಕೇಂದ್ರವನ್ನು ಮುಂಬಯಿ ಮಹಾನಗರ ಪಾಲಿಕೆ ಲಭ್ಯಗೊಳಿಸಿದೆ. ಮೇ 20ರಂದು ಮಲಾಡ್ ಪೂರ್ವದ ಕುರಾರ್ ಗ್ರಾಮದ ಸಂತ ನಿರಂಕರಿ ಸತ್ಸಂಗ ಭವನದಲ್ಲಿ ಲಸಿಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಮೊದಲ ದಿನವೇ 74 ನಾಗರಿಕರಿಗೆ ಬಿಎಂಸಿ ಲಸಿಕೆ ನೀಡಿದೆ.
ಕೇಂದ್ರವನ್ನು ಶಾಸಕ ಮನೋಜ್ ಕೋಟಕ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಕೌನ್ಸಿಲರ್ ವಿನೋದ್ ಮಿಶ್ರಾ, ಸಂತ ನಿರಂಕರಿ ಮಂಡಲದ ವಲಯ ಸಂಯೋಜಕರಾದ ಶಂಭುನಾಥ ತಿವಾರಿ ಮತ್ತು ಆರೋಗ್ಯ ಇಲಾಖೆಯ ಡಾ| ರುತುಜಾ ಬಾವಸ್ಕರ್ ಉಪಸ್ಥಿತರಿದ್ದರು. ನಿರಂಕರಿ ಭವನ ದಲ್ಲಿ ಸ್ಥಳಾವಕಾಶ ಕಲ್ಪಿಸಿದ್ದಕ್ಕಾಗಿ ಶಾಸಕ ಮತ್ತು ಕಾರ್ಪೊರೇಟರ್ ಸಂತ ನಿರಂಕರಿ ಮಂಡಲಕ್ಕೆ ಧನ್ಯವಾದ ಅರ್ಪಿಸಿದರು. ಎರಡನೇ ಕೇಂದ್ರವನ್ನು ಮೇ 21ರಂದು ಸಂತ ನಿರಂಕಾರಿ ಸತ್ಸಂಗ್ ಭವನ, ದಾವರಿ ನಗರದಲ್ಲಿ ಪ್ರಾರಂಭಿಸಲಾಗಿದೆ.
ಈ ಸಂದರ್ಭದಲ್ಲಿ ಶಿವಸೇನೆ ಮಹಿಳಾ ಶಾಖೆಯ ಮುಖ್ಯಸ್ಥೆ ನಂದಾ ಶಿಂಧೆ ಮತ್ತು ಮಂಡಳಿಯ ಸ್ಥಳೀಯ ವ್ಯವಸ್ಥಾಪಕರು ಉಪಸ್ಥಿತರಿದ್ದರು. ಸಂತ ನಿರಂಕರಿ ಮಿಷನ್ನ ನಿಸ್ವಾರ್ಥ ಕಾರ್ಯವನ್ನು ಗಣ್ಯರು ಶ್ಲಾಘಿಸಿದರು. ಇದಕ್ಕೂ ಮುನ್ನ ಮೇ 14ರಂದು ಚೆಂಬೂರಿನ ಮಹುಲ್ ರಸ್ತೆಯ ಸಂತ ನಿರಂಕರಿ ಸತ್ಸಂಗ್ ಭವನದಲ್ಲಿ ಲಸಿಕೆ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಬಿಎಂಸಿಯ ಯೋಜನೆಯ ಪ್ರಕಾರ ಈ ಎಲ್ಲ ಲಸಿಕೆ ಕೇಂದ್ರಗಳು ನಿಯಮಿತವಾಗಿ ಕಾರ್ಯನಿರ್ವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Women’s T20 World Cup: ಭಾರತ- ಪಾಕಿಸ್ತಾನ ಪಂದ್ಯ ಯಾವಾಗ? ಪಂದ್ಯಗಳ ವೇಳಾಪಟ್ಟಿ ಇಲ್ಲಿದೆ
The Family Man 3: ಬಹು ನಿರೀಕ್ಷಿತ ʼದಿ ಫ್ಯಾಮಿಲಿ ಮ್ಯಾನ್ʼ ಸೀಸನ್ – 3 ಶೂಟ್ ಅರಂಭ
Movie Theater: ಸಿನಿಮಾ ಪ್ರದರ್ಶನವನ್ನು ಶಾಶ್ವತವಾಗಿ ನಿಲ್ಲಿಸಿದ ʼಕಾವೇರಿ ಥಿಯೇಟರ್ʼ
Bantwala; ಕಾರಿಗೆ ಸೈಡ್ ಕೊಟ್ಟಿಲ್ಲವೆಂದು ಕೆಎಸ್ಆರ್ ಟಿಸಿ ಬಸ್ ಚಾಲಕನಿಗೆ ತಂಡದಿಂದ ಹಲ್ಲೆ
Mangaluru; ಕೊಂಕಣಿ ಸಾಹಿತಿ ರೊನಾಲ್ಡ್ ಸಿಕ್ವೇರಾ ನಿಧನ