ಆಂಬುಲೆನ್ಸ್ ಚಾಲಕನ ಬಂಧನ
Team Udayavani, May 29, 2021, 2:47 PM IST
ಬೆಂಗಳೂರು: ಕೊರೊನಾ ಸೋಂಕಿನಿಂದಮೃತಪಟ್ಟ ವ್ಯಕ್ತಿಯ ಶವವನ್ನು ಚಿತಗಾರಕ್ಕೆಕೊಂಡೊಯ್ಯಲು ಹೆಚ್ಚು ಹಣಕ್ಕೆ ಬೇಡಿಕೆಇಟ್ಟಿದಲ್ಲದೆ, ಮೃತದೇಹವನ್ನು ರಸ್ತೆ ಬದಿಯಲ್ಲಿ ಇಟ್ಟು ಪರಾರಿಯಾಗಿದ್ದ ಆ್ಯಂಬುಲೆನ್ಸ್ಚಾಲಕನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆ ತುರವೇಕೆರೆಯ ಶರತ್ಬಂಧಿತ. ಆರೋಪಿ ಎರಡು ಆ್ಯಂಬುಲೆನ್ಸ್ಇಟ್ಟುಕೊಂಡಿದ್ದು, ಮೇ 24ರಂದು ತಡರಾತ್ರಿಬಿಹಾರ ಮೂಲದ ಅಮೃತ್ ಸಿಂಗ್ (53)ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಅವರ ಸಂಬಂಧಿಕರ ಸೂಚನೆಯಂತೆ ಹೆಬ್ಟಾಳದ ಚಿತಾಗಾರಕ್ಕೆ ಮೃತದೇಹ ಕೊಂಡೊಯ್ಯ ಬೇಕಿತ್ತು.ಮಾರ್ಗ ಮಧ್ಯೆ ಆರೋಪಿ 15 ಸಾವಿರ ರೂ.ಗೆಬೇಡಿಕೆ ಇಟ್ಟಿದ್ದಾನೆ. ಆ ಹಣ ಕೊಡಲುಸಾಧ್ಯವಿಲ್ಲ. ಅಷ್ಟು ಹಣವಿಲ್ಲ ಎಂದು ಮೃತರ ಕಡೆಯವರು ಹೇಳಿದ್ದಾರೆ.ಅದಕ್ಕೆ ಕೋಪಗೊಂಡ ಆರೋಪಿ ಅಮೃತಹಳ್ಳಿ ಠಾಣೆ ವ್ಯಾಪ್ತಿಯ ರಸ್ತೆಯೊಂದರ ಬದಿಯಲ್ಲಿ ಮೃತದೇಹವನ್ನು ಇಟ್ಟು ಪರಾರಿಯಾಗಿದ್ದ.
ಬಳಿಕ ಅಮೃತ್ ಸಿಂಗ್ ಕುಟುಂಬಸದಸ್ಯರು ಮತ್ತೂಂದು ವಾಹನ ಮಾಡಿಕೊಂಡು ಅಂತ್ಯಕ್ರಿಯೆ ನಡೆಸಿದ್ದರು. ಈ ವಿಚಾರ ತಿಳಿದ ಸ್ಥಳೀಯ ಬಿಬಿಎಂಪಿ ಅಧಿಕಾರಿಗಳು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ