ಮಾಸ್ಕ್ ವಿತರಣೆ
Team Udayavani, May 31, 2021, 7:18 PM IST
ಚಿಂತಾಮಣಿ: ತಾಲೂಕಿನ ಯಗವಕೋಟೆ ಗ್ರಾಮದಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ಆಶಾ, ಅಂಗನವಾಡಿ ಕಾರ್ಯಕರ್ತರಿಗೆ ಸಮಾಜ ಸೇವಕ ದೇವನಹಳ್ಳಿ ವೇಣುಗೋಪಾಲ್ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಆರೋಗ್ಯ ಕ್ಷೇತ್ರದ ಹಲವು ಮಂದಿ ಕಷ್ಟದಲ್ಲಿದ್ದಾರೆ. ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಏರುತ್ತಲೇ ಇದ್ದು, ಜನಸಾಮಾನ್ಯರಿಗೆ ಒಂದೊತ್ತಿನ ಊಟದ ವ್ಯವಸ್ಥೆಗೂ ಪೇಚಾಡುವಂತಾಗಿದೆ.
ಅವರಿಗೆ ನನ್ನ ಕೈಲಾದಷ್ಟು ಸಹಾಯಮಾಡುತ್ತೇನೆ ಎಂದು ಹೇಳಿದರು. ಲಾಕ್ಡೌನ್ ಸಂಪೂರ್ಣ ಮುಗಿಯುವವರೆಗೂ ಜನರ ಮಧ್ಯೆ ಇದ್ದು, ಇನ್ನೂ ಹೆಚ್ಚಾಗಿಸಮಾಜ ಸೇವೆ ಮಾಡುತ್ತೆನೆಂದರು. ಸಿ.ಆರ್.ಶ್ರೀನಾಥ್,ಕೆ.ಎಂ.ರಾಜಶೇಖರ್ರೆಡ್ಡಿ, ಮಹೇಶ್ ಇತರರಿದ್ದರು.