2 ಸಾವಿರ ನೆರವು ಅರ್ಜಿ ಸಲ್ಲಿಕೆಗೆ ಜು.20 ಕೊನೆ ದಿನ
Team Udayavani, Jun 13, 2021, 6:58 PM IST
ಚಿಕ್ಕಬಳ್ಳಾಪುರ: ಲಾಕ್ಡೌನ್ನಿಂದ ಸಂಕಷ್ಟಕ್ಕೆ ಒಳಗಾದಅಸಂಘಟಿತ ಕಾರ್ಮಿಕರಿಗೆ ನೆರವು ನೀಡಲು ಸೇವಾ ಸಿಂಧುಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಲು ಜು.20 ಕೊನೆಯ ದಿನ ಎಂದು ಕಾರ್ಮಿಕ ಇಲಾಖೆ ಆಯುಕ್ತ ಅಕ್ರಂಪಾಷ ತಿಳಿಸಿದ್ದಾರೆ.
ಇಲಾಖೆಯಲ್ಲಿ ನೋಂದಾಯಿತ,ಅಲ್ಲದ 11 ವಲಯದ ಅಸಂಘಟಿತಕಾರ್ಮಿಕರಾದ ಅಗಸರು, ûೌರಿಕರು,ಗೃಹ ಕಾರ್ಮಿಕರು, ಟೈಲರ್ಗಳು,ಹಮಾಲರು, ಚಿಂದಿ ಆಯುವವರು,ಅಕ್ಕಸಾಲಿಗರು, ಮೆಕಾನಿಕ್ಗಳು,ಕುಂಬಾರರು, ಕಮ್ಮಾರರು, ಮಂಡಕ್ಕಿಭಟ್ಟಿ ಕಾರ್ಮಿಕರು ಒಂದು ಬಾರಿ 2000 ರೂ. ನೆರವು ನೀಡಲು ಸರ್ಕಾರ ಘೋಷಿಸಿದೆ ಎಂದಿದ್ದಾರೆ.
ಅರ್ಜಿ ಸಲ್ಲಿಸುವವರು ಬಿಪಿಎಲ್ ಕಾರ್ಡ್ ಹೊಂದಿರಬೇಕು,ಆಧಾರ್ ಜೋಡಣೆ ಆದ ಬ್ಯಾಂಕ್ ಖಾತೆ ಹೊಂದಿರಬೇಕು, ತಮ್ಮವ್ಯಾಪ್ತಿಯ ಸಂಬಂ ಧಿಸಿದ ಅಧಿ ಕಾರಿಗಳಿಂದ ಉದ್ಯೋಗ ಪ್ರಮಾಣಪತ್ರ ಪಡೆದು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರುತಿಳಿಸಿದ್ದಾರೆ.