ನಾಡ ಪ್ರಭು ಕೆಂಪೇಗೌಡ ಜಯಂತಿ
Team Udayavani, Jun 27, 2021, 9:25 PM IST
ಮೈಸೂರು: ಕರ್ನಾಟಕ ಸೇನಾ ಪಡೆವತಿಯಿಂದ ಮೈಸೂರು ಪಾಲಿಕೆ ವಲಯಕಚೇರಿ-1ರ ಆವರಣದಲ್ಲಿ ನಾಡಪ್ರಭುಕೆಂಪೇಗೌಡ ಜಯಂತಿ ನಡೆಯಿತು.
ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆಪುಷ್ಪಾìಚನೆ ಮಾಡಿ ಮಾತನಾಡಿದ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷಹೇಮಂತ ಕುಮಾರ್ಗೌಡ, ಎಲ್ಲ ಜಾತಿ,ಮತ, ಪಂಥ, ಧರ್ಮದ ಜನಬದುಕು ಕಟ್ಟಿಕೊಳ್ಳಲು ಕೆಂಪೇಗೌಡರೇಕಾರಣ ಎಂದರು.ಕರ್ನಾಟಕದ ರಾಜಧಾನಿ ಬೆಂಗಳೂರು ವಿಶಾಲವಾಗಿ ಬೆಳೆಯಲು ತಳಹದಿಹಾಕಿದವರೇ ಕೆಂಪೇಗೌಡರು. ತಮ್ಮಆಡಳಿತಾವಧಿಯಲ್ಲಿ ನೂರಾರುಕೆರೆ ಕಟ್ಟೆ,ಗುಡಿ, ಗೋಪುರ ಮತ್ತು ಅಗ್ರಹಾರನಿರ್ಮಿಸಿದ್ದಾರೆಂದು ಸ್ಮರಿಸಿದರು.
ಮುಡಾ ಸದಸ್ಯೆ ಲಕ್ಷ್ಮೀದೇವಿ, ಸಮಾಜಸೇವಕರಾದ ಕೆ.ರಘುರಾಂ, ಎಂ.ಎನ್.ದೊರೆಸ್ವಾಮಿ, ನಾಡಪ್ರಭು ಕೆಂಪೇಗೌಡಸಂಘದ ಅಧ್ಯಕ್ಷ ಗಂಗಾಧರ, ಕರ್ನಾಟಕಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ಲೋಕೇಶ್ಗೌಡ, ಮಹೇಂದ್ರ ಸಿಂಗ್ಕಾಳಪ ³, ಜೀವಧಾರ ರಕ್ತನಿಧಿ ಕೇಂದ್ರದಡಾ.ಗಿರೀಶ್, ಡಾ ಶಾಂತರಾಜೇಅರಸ್,ಕುಮಾರ್ ಗೌಡ ಇದ್ದರು.