ಬಡ ಮಕ್ಕಳಿಗೆ ಪುಸ್ತಕ ವಿತರಣೆ
Team Udayavani, Jul 11, 2021, 7:02 PM IST
ಬೆಂಗಳೂರು : ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್ನ ಸ್ಥಾಪನಾ ದಿನಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿನದ ಅಂಗವಾಗಿ ಬಡ ವಿದ್ಯಾರ್ಥಿಗಳಿಗೆಪುಸ್ತಕ ಹಾಗೂ ನೋಟ್ ಬುಕ್ ವಿತರಣೆ ಮಾಡಲಾಯಿತು.
ಎಬಿವಿಪಿ ಪ್ರಾಂತಕಾರ್ಯಲಯದಲ್ಲಿ ಧ್ವಜಾರೋಹಣ ಮಾಡುವುದರ ಮೂಲಕ ಸಂಸ್ಥಾಪನಾದಿನ ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿನಾಚರಣೆ ನಡೆಸಲಾಯಿತು. ನಂತರಬೆಂಗಳೂರಿನ ಸುಮಾರು 33 ಅಧಿಕ ಸ್ಥಳಗಳಲ್ಲಿ ಬಡ ಮತ್ತು ಪ್ರತಿಭಾವಂತವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾ ಯಿತು.
ಈ ಕಾರ್ಯಕ್ರಮದಲ್ಲಿ1103 ವಿದ್ಯಾರ್ಥಿಗಳಿಗೆ 3,538 ಪುಸ್ತಕ ಮತ್ತು ನೋಟ್ಬುಕ್ ಪಡೆದಿದ್ದಾರೆಎಂದು ಪ್ರಾಂತಕಾರ್ಯಾಲಯಕಾರ್ಯದರ್ಶಿ ಪ್ರಶಾಂತ್ ತಿಳಿಸಿದ್ದಾರೆ.