ಎಲ್ ಐ ಸಿ ಯ ‘ಆಧಾರ್ ಶಿಲಾ’ ಉಳಿತಾಯ ಯೋಜನೆಯ ಬಗ್ಗೆ ನಿಮಗೆಷ್ಟು ಮಾಹಿತಿ ಇದೆ..?
Team Udayavani, Jul 12, 2021, 2:47 PM IST
ನವ ದೆಹಲಿ : ನಿರಂತರವಾಗಿ ತನ್ನ ಗ್ರಾಹಕರಿಗೆ ಹೊಸ ಯೋಜನೆಗಳನ್ನು ನೀಡುತ್ತಾ ಬಂದಿರುವ ಎಲ್ ಐ ಸಿ ಮತ್ತೊಂದು ಹೊಸ ಯೋಜನೆಯೊಂದನ್ನು ಬಿಡುಗಡೆ ಮಾಡಿದೆ. ಹೂಡಿಕೆ ಮಾಡಿದ ಹಣವು ಅತಿ ಹೆಚ್ಚು ಬಡ್ಡಿ ಹಾಗೂ ಭದ್ರತೆಯನ್ನು ಒದಗಿಸುತ್ತದೆ.
ಭಾರತೀಯ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಗುರಿ ಹೊಂದಿರುವ ಯೋಜನೆಯೊಂದನ್ನು ಎಲ್ ಐ ಸಿ ರೂಪಿಸಿದ್ದು, ಈ ಯೋಜನೆಯ ಮುಖಾಂತರವಾಗಿ ತ್ವರಿತವಾಗಿ ಹಣವನ್ನು ಬೆಳೆಸುವ ಅವಕಾಶವನ್ನು ಮಹಿಳೆಯರಿಗೆ ನೀಡುತ್ತಿದೆ.
ಇದನ್ನೂ ಓದಿ : ಎರಡು ಮಕ್ಕಳ ಜನಸಂಖ್ಯಾ ನೀತಿ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡ್ತೇವೆ : ಈಶ್ವರಪ್ಪ
8 ರಿಂದ 55 ವರ್ಷದೊಳಗಿನ ಮಹಿಳೆಯರು ಎಲ್ ಐ ಸಿ ಯ ‘ಆಧಾರ್ ಶಿಲಾ’ ಎಂಬ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು, ಸಣ್ಣ ಮೊತ್ತದ ಹೂಡಿಕೆ ಅಂದರೆ ದಿನವೊಂದಕ್ಕೆ ಕೇವಲ 29 ರೂಪಾಯಿಯನ್ನು ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಬಂದರ, ಯೋಜನೆ ಮುಕ್ತಾಯ ಹಂತದಲ್ಲಿ ಬರೋಬ್ಬರಿ 4 ಲಕ್ಷ ಕ್ಕೂ ಹೆಚ್ಚು ಒಟ್ಟು ಮೊತ್ತ ನಿಮ್ಮ ಪಾಲಾಗುತ್ತದೆ.
ಹೂಡಿಕೆದಾರರು ಯೋಜನೆಯ ಮುಕ್ತಾಯಕ್ಕಿಂತ ಮುಂಚೆಯೇ ಮರಣ ಹೊಂದಿದ್ದಲ್ಲಿ, ಎಲ್ ಐ ಸಿ ಮೃತನ ಕುಟುಂಬಕ್ಕೆ ಹಣಕಾಸಿನ ನೆರವು ನೀಡುತ್ತದೆ. ಹೂಡಿಕೆಯ ಮೇಲೆ ಖಚಿತ ಆದಾಯದ ಜೊತೆಗೆ ಎಲ್ ಐ ಸಿ ಯು ಈ ಯೋಜನೆಯಲ್ಲಿ ರಕ್ಷಣೆ ವ್ಯಾಪ್ತಿಯನ್ನು ಒದಗಿಸುತ್ತಿದೆ. ಎಲ್ ಐ ಸಿ ಯ ‘ಆಧಾರ್ ಶಿಲಾ’ ಯೋಜನೆಯಲ್ಲಿ ಹೂಡಿಕೆದಾರರಿಗೆ ಕನಿಷ್ಠ 75 ಸಾವಿರ ಹಾಗೂ ಗರಿಷ್ಠ 3 ಲಕ್ಷದವರೆಗೆ ಖಚಿತ ಮೊತ್ತದ ಭರವಸೆ ದೊರಕಲಿದೆ.
4 ಲಕ್ಷ ರೂ. ಮೆಚುರಿಟಿ ಮೊತ್ತವನ್ನು ಪಡೆದುಕೊಳ್ಳಲು ಮಹಿಳೆಯರು ವರ್ಷಕ್ಕೆ ಶೇಕಡಾ. 4.5 ರಷ್ಟು ತೆರಿಗೆ ಸಹಿತ 10,959 ರೂ.ಗಳನ್ನು 20 ವರ್ಷಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಆಗ ನಿಮ್ಮ ಪ್ರತಿದಿನದ ಉಳಿತಾಯದ ಮೊತ್ತ 29 ರೂ. ಆಗಲಿದೆ.
ಇನ್ನು, ಎಲ್ ಐ ಸಿ ನೀಡುತ್ತಿರುವ ಈ ಉತ್ತಮ ಯೋಜನೆಯಲ್ಲಿ ಯೋಜನೆಯಲ್ಲಿ ಹೂಡಿಕೆ ಮಾಡಲು ಮಹಿಳೆಯರು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಪ್ರೀಮಿಯಂಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಟ್ಟಾರೆ ದಿನವೊಂದಕ್ಕೆ 29 ರೂ. ಉಳಿಸಿ ‘ಆಧಾರ್ ಶಿಲಾ’ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ.
ಇದನ್ನೂ ಓದಿ : ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಹೇಳುವುದು ನ್ಯಾಯವಲ್ಲ: ಅರ್ಲೇಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿದ ಷೇರುಪೇಟೆ ಸೆನ್ಸೆಕ್ಸ್; ಭಾರೀ ನಷ್ಟ
GST ಎಪ್ರಿಲ್ನಲ್ಲಿ 2.10 ಲಕ್ಷ ಕೋಟಿ ರೂ. ಜಿಎಸ್ಟಿ ಸಂಗ್ರಹ !
Godrej: ಜನಪ್ರಿಯ ಗೋದ್ರೆಜ್ ಸಮೂಹ ಇಬ್ಭಾಗ: ಜಮ್ಶೆಡ್, ನಾದಿರ್ ನೂತನ ಮುಖ್ಯಸ್ಥರು
LPG Cylinders: ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
MUST WATCH
ಹೊಸ ಸೇರ್ಪಡೆ
Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ
Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು
ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ
PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್ ಗೆದ್ದಿದೆ: ಸಿಎಂ ಸಿದ್ದರಾಮಯ್ಯ
Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ