ಮಲ್ಯಾಡಿ : ಸ್ಥಳೀಯ ಯುವಕರ ತಂಡದಿಂದ 10 ಕ್ವಿಂಟಾಲ್ಗೂ ಅಧಿಕ ಕಾಟ್ಲಾ ಮೀನಿನ ಬೇಟೆ
ಮೂಟೆಗಟ್ಟಲೆ ಮೀನು ಹಿಡಿದ ಸ್ಥಳೀಯರು | ಬೇಡಿಕೆ ಹೆಚ್ಚಿಸಿದ ತಾಜಾ ಮೀನುಗಳು
Team Udayavani, Jul 12, 2021, 9:01 PM IST
ತೆಕ್ಕಟ್ಟೆ : ಕುಂದಾಪುರ ತಾಲೂಕಿನ ತೆಕ್ಕಟ್ಟೆ ,ಮಲ್ಯಾಡಿ ಸುತ್ತಮುತ್ತಲ ಹೊಳೆಸಾಲುಗಳಲ್ಲಿ ನೀರಿನ ಒಳ ಹರಿವು ಹೆಚ್ಚಾಗಿದ್ದು ಹಿಂಡು ಹಿಂಡಾಗಿ ಮೀನು ಸಾಗಿ ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಯುವಕರ ಮೂರು ತಂಡ ಬಲೆ ಬೀಸಿ ಅಪಾರ ಪ್ರಮಾಣದ ಮೀನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಮೀನುಗಾರಿಕಾ ಸ್ಥಳದಲ್ಲಿ ಕುತೂಹಲದಿದಂದ ಅಪಾರ ಸಂಖ್ಯೆಯ ಮಂದಿ ಜಮಾಯಿಸಿರುವ ದೃಶ್ಯ ಇಂದು (ಸೋಮವಾರ, ಜುಲೈ 12) ಕಂಡು ಬಂತು.
ಇದನ್ನೂ ಓದಿ : SSLC ಫಲಿತಾಂಶ : ಶೇ. 99.72 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ
ಬೃಹತ್ ಗಾತ್ರದ ಮೀನುಗಳು : ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಗ್ರಾಮೀಣ ಭಾಗಗಳಿಂದ ಹಾದು ಹೋಗುವ ಹೊಳೆ ಸಾಲುಗಳಲ್ಲಿ ಅಪಾರ ಪ್ರಮಾಣದ ಮೀನುಗಳು ಕಾಣಸಿಗುತ್ತಿದೆ. ಐರ್, ಕಾಟ್ಲಾ , ಜಾತಿಗೆ ಸೇರಿದ ಭಾರೀ ಬೇಡಿಕೆಯ ಮೀನುಗಳು ಹಿಂಡು ಹಿಂಡಾಗಿ ಒಂದೆಡೆ ಇರುವುದನ್ನು ಇದನ್ನೇ ಗುರಿಯಾಗಿಸಿಕೊಂಡು ಗ್ರಾಮೀಣ ಯುವಕರ ತಂಡ ಮಲ್ಯಾಡಿ ಪರಿಸರದಲ್ಲಿ ವ್ಯಾಪಕವಾಗಿ ಬಲೆ ಬೀಸಿ ಮೀನು ಬೇಟೆಯನ್ನು ಅತ್ಯುತ್ಸಾಹದಿಂದ ಕಾರ್ಯಚರಿಸುತ್ತಿದ್ದಾರೆ.
ಮೂಟೆಗಟ್ಟಲೆ ಮೀನು ಹಿಡಿದ ಸ್ಥಳೀಯರು : ಸುಮಾರು 5ಕೆಜಿ ಗೂ ಅಧಿಕ ಭಾರದ ಕಾಟ್ಲಾ ಜಾತಿಗೆ ಸೇರಿದ ನೂರಾರು ಮೀನುಗಳನ್ನು ಹಿಡಿದು, ಮೂಟೆಯಲ್ಲಿ ತುಂಬಿಕೊಂಡು ವಾಹನದಲ್ಲಿ ತೆಗೆದುಕೊಂಡು ಹೋಗುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿದೆ.
ಇದನ್ನೂ ಓದಿ : ದೇಸಿಯ ತಳಿಯ ದನ ಸಾಕಾಣಿಕೆಯಲ್ಲಿ ಲಾಭ ಗಳಿಸುವುದು ಹೇಗೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ