ಸೂಕ್ಷ್ಮ ನೀರಾವರಿ ಯೋಜನೆಯಡಿ ಸಬ್ಸಿಡಿ ಮುಂದುವರಿಕೆ
Team Udayavani, Jul 17, 2021, 3:32 PM IST
ಬೆಂಗಳೂರು: ಸೂಕ್ಷ್ಮ ನೀರಾವರಿ ಯೋಜನೆಯಡಿ ರೈತರಿಗೆ ಈಹಿಂದೆ ನೀಡುತ್ತಿದ್ದ ಸಬ್ಸಿಡಿ ವ್ಯವಸ್ಥೆ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದುಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೃಷಿ ಅಧಿಕಾರಿಗಳ ಜೊತೆಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಕುರಿತು ಸಭೆ ನಡೆಸಿದನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆನೀಡುತ್ತಿದ್ದಸಬ್ಸಿಡಿಯನ್ನು ಯಥಾಸ್ಥಿತಿಮುಂದುವರಿಸಲಾಗುವುದು ಎಂದು ಹೇಳಿದರು.
ಎರಡು ಹೆಕ್ಟೇರ್ ಭೂಮಿಯುಳ್ಳ ರೈತರಿಗೆಶೇ.90.5 ಹೆಕ್ಟೇರ್ ಭೂಮಿಯುಳ್ಳ ರೈತರಿಗೆ ಶೇ. 45 ಸಬ್ಸಿಡಿ ನೀಡಲಾಗುತ್ತಿತ್ತು. ಮುಖ್ಯಮಂತ್ರಿಯವರ ಆದೇಶದಂತೆ ಹಳೆಯಮಾದರಿ ಸಬ್ಸಿಡಿ ಮುಂದುವರಿಸಲಾಗುವುದು. 5 ಹೆಕ್ಟೇರ್ಮೇಲ್ಪಟ್ಟ ರೈತರಿಗೆ ಸಬ್ಸಿಡಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಳೆ ಸಮೀಕ್ಷೆ ನಮೂದು: ರೈತರ ಆರ್ಟಿಸಿ ಪಹಣಿಯಲ್ಲಿ ಬೆಳೆಸಮೀಕ್ಷೆ ವಿವರ ನಮೂದಿಸಲಾಗುವುದು. ಇದರಿಂದ ರೈತರುಯಾವ ಬೆಳೆ ಎಷ್ಟು ಪ್ರದೇಶದಲ್ಲಿ ಬೆಳೆದಿದ್ದಾರೆ ಎಂಬುದರ ಸಮಗ್ರಮಾಹಿತಿ ಸಿಗಲಿದೆ ಎಂದು ಹೇಳಿದರು. ಈ ವರ್ಷವೂ ಕಳೆದವರ್ಷದಂತೆ ರೈತನೇ ತನ್ನ ಬೆಳೆಗೆ ತಾನೇ ಸಮೀಕ್ಷೆ ನಡೆಸಿ ನನ್ನ ಬೆಳೆನನ್ನ ಹಕ್ಕು ಎಂದು ಪ್ರಮಾಣಪತ್ರ ನೀಡುವ ಸಮೀಕ್ಷೆಗೆ ಚಾಲನೆನೀಡಲಾಗಿದೆ ಎಂದು ಹೇಳಿದರು.