ಲಾಕ್ಡೌನ್ ನಮಗೆ ಎಚ್ಚರಿಕೆ ಗಂಟೆ ಆಗಲಿ: ರವಿಕುಮಾರ್
Team Udayavani, Jul 21, 2021, 7:32 PM IST
ಕೆಜಿಎಫ್: ಕೊರೊನಾ ಸೋಂಕು ನಿಗ್ರಹಿಸಲು ಸಾಧ್ಯವಾಗದೆ ಆಸ್ಟ್ರೇಲಿಯಾ, ಅಮೆರಿಕ, ಇಂಗ್ಲೆಂಡ್ ಲಾಕ್ಡೌನ್ ಆಗುತ್ತಿವೆ. ಇದು ನಮಗೆ ಎಚ್ಚರಿಕೆಯ ಗಂಟೆಯಾಗಬೇಕುಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಮತ್ತು ವಿಧಾನ ಪರಿಷತ್ ಸದಸ್ಯರವಿಕುಮಾರ್ ಹೇಳಿದರು.
ನಗರದ ಬಿಜಿಎಂಎಲ್ ಆಸ್ಪತ್ರೆಯಲ್ಲಿ ನಡೆದ ಕೋವಿಡ್ ಲಸಿಕೆ ಅಭಿಯಾನದಲ್ಲಿಮಾತನಾಡಿ, ಎಲ್ಲರೂ ಮಾಸ್ ತೆಗೆದುಮನೆ ಒಳಗೆ ಇಟ್ಟಿದ್ದಾರೆ. ಅದಕ್ಕೆ ರೋಗಉಲ½ಣಗೊಳ್ಳುತ್ತಿದೆ. ಸಾರ್ವಜನಿಕವಾಗಿಅವರು ಮಾಸ್ಕ್ ಬಳಕೆ ಬಿಟ್ಟಿದ್ದಾರೆ.ಗುಂಪುಗಳಲ್ಲಿ ಸಂಚರಿಸಿದ್ದರ ಪರಿಣಾಮವಾಗಿ ಮೂರನೇ ಅಲೆ ಬೇರೆ ದೇಶದಲ್ಲಿಹೆಚ್ಚಾಗುತ್ತಿದೆ. ಆದ್ದರಿಂದ ಲಾಕ್ಡೌನ್ಆಗಿದೆ ಎಂದು ವಿವರಿಸಿದರು.
ವೈದ್ಯರಿಗೆ ಆಸ್ಪತ್ರೆಯೇ ಮನೆ: ಒಂದನೇಬಾರಿಗೆ ಲಾಕ್ಡೌನ್ ಆದಾಗ ನಾವುರೇಷನ್ ಕಿಟ್ ಕೊಡಬೇಕಾಯಿತು.ಒಂದು ವೇಳೆ ನಮ್ಮ ದೇಶಕ್ಕೆ ಕೂಡಮೂರನೇ ಅಲೆ ಬಂದರೆ, ಎಷ್ಟು ಕಷ್ಟವಾಗುತ್ತದೆ ಎಂಬುದನ್ನು ಅರಿಯಬೇಕು.ಕೊರೊನಾ ನಿಗ್ರಹಿಸಲು ವೈದ್ಯಕೀಯಸಿಬ್ಬಂದಿಯ ಪಾಲು ದೊಡ್ಡದು. ಅವರನ್ನುದೇವರಂತೆ ಪೂಜಿಸಬೇಕು. ಮನೆಯನ್ನುಮರೆತು, ಆಸ್ಪತ್ರೆಯನ್ನೇ ಮನೆಯನ್ನಾಗಿಮಾಡಿಕೊಂಡಿದ್ದರು ಎಂದು ಹೇಳಿದರು.
ಮೈಮರೆಯುವುದು ಬೇಡ: ಎರಡನೇಅಲೆ ಬಂದಾಗ ಕೊಂಚ ನಿರಾಳವಾದರು.ಇಡೀ ದೇಶದಲ್ಲಿ44.74ಕೋಟಿ ಜನರಿಗೆಲಸಿಕೆ ಹಾಕಲಾಗಿದೆ. ಇನ್ನೂ 45 ಕೋಟಿಆಗುವ ತನಕ ನಾವು ಎಚ್ಚರಿಕೆವಹಿಸಬೇಕು. 135 ಕೋಟಿ ಜನರ ಪೈಕಿಶೇ.60 ಲಸಿಕೆ ಹಾಕಿಸಿಕೊಳ್ಳುವ ತನಕಮೈಮರೆಯಬಾರದು ಎಂದರು.ಬಿಜಿಎಂಎಲ್ ಆಸ್ಪತ್ರೆ 21 ವರ್ಷನಂತರ ಕೋವಿಡ್ನಿಂದ ಪುನರಾರಂಭವಾಯಿತು.
ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರುಅಭಿನಂದನೆಗೆ ಅರ್ಹರು ಎಂದರು.ಹಳ್ಳಿಗೆ ಹೋಗಿ ಪ್ರಚಾರ ಮಾಡಿ:ಒಬ್ಬರು ನಾಲ್ಕು ನೂರು ಜನರಿಗೆಸೋಂಕು ಹರಡಬಹುದು. ಆದ್ದರಿಂದಹುಷಾರಾಗಿರಬೇಕು. ಮಕ್ಕಳು ಶಾಲಾವಂಚಿತರಾಗಿದ್ದಾರೆ. ಶಿಕ್ಷಕರಿಂದ ವಿಮುಖರಾದರೆ, ಶಾಲೆಗೆ ಹೋಗದೆ ಪಾಸ್ಆಗುತ್ತೇವೆ ಎಂಬ ಭಾವನೆ ಮಕ್ಕಳಲ್ಲಿಬಂದಿದೆ. ಪದೇ ಪದೆ ಪುಸ್ತಕ ಓದುತ್ತಿದ್ದರೆಜ್ಞಾನ ಬೆಳೆಯುತ್ತದೆ. ಇದು ದೊಡ್ಡ ಪರಿಣಾಮ ಬೀರುತ್ತಿದೆ. ಕೋವಿಡ್ ಲಸಿಕೆದೊಡ್ಡ ಪ್ರಮಾಣದಲ್ಲಿ ಹಾಕಿಸಿಕೊಳ್ಳಬೇಕು. ಪ್ರತಿ ಹಳ್ಳಿಗೆ ಕಾರ್ಯಕರ್ತರು ಹೋಗಿ ಪ್ರಚಾರ ಮಾಡಬೇಕುಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ