ಕುಡುಕರ ಅಡ್ಡೆ ಆದ ಬಾಲಕಿಯರ ಕಾಲೇಜು ಮೈದಾನ
Team Udayavani, Jul 23, 2021, 6:19 PM IST
ಶ್ರೀನಿವಾಸಪುರ: ಮಕ್ಕಳಿಗೆ ಅಕ್ಷರ ಕಲಿಸುವಶಾಲಾ ಕಾಲೇಜುಗಳು ದೇಗುಲವಿದ್ದಂತೆ. ಇಂತಹ ಪವಿತ್ರವಾದ ಸ್ಥಳದಲ್ಲಿ ಕೆಲ ಕುಡುಕರು ಬಾರ್ಮಾಡಿಕೊಂಡಿದ್ದಾರೆ.
ರಾತ್ರಿ ವೇಳೆ ಮದ್ಯ ಸೇವಿಸಿ,ತಿಂಡಿ ತಿಂದು ಬಾಟಲ್, ಪ್ಲಾಸ್ಟಿಕ್ ಪೇಪರ್ ಅನ್ನುಎಸೆದು ಹೋಗುತ್ತಿದ್ದಾರೆ.ಪಟ್ಟಣದ ಎಂ.ಜಿ.ರಸ್ತೆಗೆ ಹೊಂದಿಕೊಂಡ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿಇಂತಹ ಚಟುವಟಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು, ಪೊಲೀಸರು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.
ಈ ಕಾಲೇಜುಆವರಣದಲ್ಲಿ ಕನ್ನಡ ಮಾಧ್ಯಮಿಕ ಮಾದರಿಹಿರಿಯ ಪ್ರಾಥಮಿಕ ಶಾಲೆ, ಬಿಇಒ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಇದ್ದು, ಅಧಿಕಾರಿಗಳು,ವಿದ್ಯಾರ್ಥಿಗಳು ತಮ್ಮ ದೈನಂದಿನ ಕೆಲಸಗಳಿಗೆಹಾಜರಾಗುತ್ತಾರೆ.ಕೆಲಸದ ಅವಧಿ ಹೊರತುಪಡಿಸಿ ರಜಾ ದಿನ,ರಾತ್ರಿ ವೇಳೆ ಕೆಲವು ಕುಡುಕರು ಆವರಣದಲ್ಲಿಮದ್ಯ ಸೇವಿಸಿ ಬಾಟಲ್ ಎಸೆದು ಹೋಗುತ್ತಾರೆ.
ಕಾಲೇಜು ಆವರಣಕ್ಕೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಗೇಟ್ ಅಳವಡಿಸಿದ್ದರೂ, ಕಟ್ಟಡಗಳ ಹಿಂದೆಕಾಂಪೌಂಡ್ಇಲ್ಲ.ಹೀಗಾಗಿ ಕಾಲೇಜುಆವರಣಕ್ಕೆಸುಲಭವಾಗಿ ಬರಬಹುದಾಗಿದೆ.ನಾಯಿ ಕಾಟ: ಹೋಟೆಲ್, ಅಂಗಡಿಯಿಂದಕಟ್ಟಿಸಿಕೊಂಡು ಬಂದ ತಿಂಡಿ ತಿನಿಸನ್ನು ಇಲ್ಲಿಯೇತಿಂದು, ಉಳಿದದ್ದು ಹಾಗೂ ಪೇಪರ್ ಅನ್ನುಇಲ್ಲಿಯೇ ಎಸೆದು ಹೋಗುತ್ತಾರೆ.
ಕೆಲವೊಮ್ಮೆಮೂಳೆ, ಮಾಂಸದ ತುಣುಕು ತಿನ್ನಲು ನಾಯಿಗಳು ಕಾಲೇಜು ಆವರಣಕ್ಕೆ ಬರುತ್ತಿವೆ. ಇದರಿಂದವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇಪೊಲೀಸರು, ಶಿಕ್ಷಣ ಇಲಾಖೆ ಮೇಲಧಿಕಾರಿಗಳುಕ್ರಮಕೈಗೊಳ್ಳಬೇಕಿದೆ.
ಕೆ.ವಿ.ನಾಗರಾಜ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ