ಮಂಗಳೂರು: ಸೈನಿಕನ ಸೋಗಿನಲ್ಲಿ ಕುಟುಂಬದಿಂದ 2.23 ಲಕ್ಷ ರೂ. ಪಡೆದು ವಂಚನೆ
ನಕಲಿ ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದರು.
Team Udayavani, Jul 29, 2021, 9:55 AM IST
ಮಂಗಳೂರು: ವೆಬ್ಸೈಟ್ ಒಂದರಲ್ಲಿ ಸೈನಿಕನೆಂದು ಹೇಳಿಕೊಂಡು ಉತ್ತರ ಭಾರತದ ಅಹ್ಮದಾಬಾದ್ನ ವ್ಯಕ್ತಿಯೊಬ್ಬ ಮಂಗಳೂರಿನಲ್ಲಿ ಫ್ಲ್ಯಾಟ್ ಬಾಡಿಗೆಗೆ ಇದೆ ಎಂದು ಮಂಗಳೂರು ಮೂಲದ ಕುಟುಂಬವೊಂದನ್ನು ನಂಬಿಸಿ 2.23 ಲಕ್ಷ ರೂ. ವಂಚನೆಗೈದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾನು ಸೇನೆಯಲ್ಲಿರುವುದಾಗಿ ಹೇಳಿಕೊಂಡಿದ್ದ ಆ ವ್ಯಕ್ತಿ ಸುಸಜ್ಜಿತ ಫ್ಲ್ಯಾಂಟ್ ಒಂದರ ಫೋಟೋವನ್ನು ಕೂಡಾ ಮಂಗಳೂರು ಮೂಲದ ಕುಟುಂಬಕ್ಕೆ ನೀಡಿದ್ದ. ಕಡಿಮೆ ದರದಲ್ಲಿ ಸುಸಜ್ಜಿತ ಮನೆ ಬಾಡಿಗೆಗೆ ಸಿಗುತ್ತದೆ ಹಾಗೂ ವ್ಯಕ್ತಿ ಮಿಲಿಟರಿಯಲ್ಲಿರುವ ಸೈನಿಕ ಎಂದು ನಂಬಿದ್ದಲ್ಲದೆ, ಆತ ತಾನೀಗ ಸಂಕಷ್ಟದಲ್ಲಿದ್ದು, ಹಿರಿಯ ಅಧಿಕಾರಿಗೆ ಸಾಲವೊಂದನ್ನು ಪಾವತಿಸಲು ಹಣ ನೀಡುವಂತೆ ಕೋರಿಕೊಂಡಾಗ ಆ ಕುಟುಂಬ 2,23000 ರೂ.ಗಳನ್ನು ನೀಡಿದೆ. ಪ್ರಕರಣದ ಬಗ್ಗೆ ಪೊಲೀಸರು ಆರೋಪಿ ಪತ್ತೆಗೆ ಜಾಲವನ್ನು ಬೀಸಿದ್ದು, ಆತ ಉತ್ತರ ಭಾರತದ ಕೆಲವು ಕಡೆ ಓಡಾಡಿಕೊಂಡಿರವುದು ಕಂಡುಬಂದಿದೆ ಎಂದರು.
ನಕಲಿ ಜಾಹೀರಾತು: ಎಚ್ಚರ:
ಆನ್ಲೈನ್ ಜಾಲತಾಣಗಳಲ್ಲಿ ನಕಲಿ ಜಾಹೀರಾತುಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂದು ಪೊಲೀಸ್ ಆಯುಕ್ತರು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ