“ಆರ್ಎಸ್ಎಸ್ ಮೀಸಲಾತಿ ವಿರೋಧಿಯಲ್ಲ’
ಸಂಘಟನೆಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ
Team Udayavani, Aug 10, 2021, 9:45 PM IST
ನವದೆಹಲಿ: “ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ಎಂದಿಗೂ ಮೀಸಲಾತಿ ವಿರೋಧಿಯಲ್ಲ” ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಆಯೋಜಿಸಲಾಗಿದ್ದ “ಮೇಕರ್ಸ್ ಆಫ್ ಮಾಡರ್ನ್ ದಲಿತ್ ಹಿಸ್ಟರಿ’ ಎಂಬ ಪುಸ್ತಕದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ಶತಮಾನಗಳಿಂದ ತುಳಿತಕ್ಕೊಳಗಾಗಿದ್ದ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ನೀಡಿ ಅವರನ್ನು ಮೇಲೆತ್ತಿದ್ದು ಒಂದು ಸಕಾರಾತ್ಮಕ ವಿಚಾರ.
ಹಾಗಾಗಿ, ಮೀಸಲಾತಿ ಎಂಬುದೊಂದು ಐತಿಹಾಸಿಕ ಅವಶ್ಯಕತೆ. ಶೋಷಣೆಗೆ ಒಳಗಾಗಿದ್ದ ಸಮುದಾಯಗಳ ಪರಿಪೂರ್ಣ ಅಭಿವೃದ್ಧಿಯಾಗುವವರೆಗೆ ಮೀಸಲಾತಿ ಸೌಕರ್ಯ ಮುಂದುವರಿಯಬೇಕು. ಮೀಸಲಾತಿಗೆ ಆರ್ಎಸ್ಎಸ್ ಬೆಂಬಲ ಸದಾ ಇದ್ದೇ ಇರುತ್ತದೆ” ಎಂದರು.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ ನಲ್ಲಿ ಅಶಿಸ್ತು ಪ್ರದರ್ಶನ : ಕುಸ್ತಿಪಟು ಪೋಗಟ್ ಅಮಾನತು
“ದಲಿತರ ಇತಿಹಾಸವಿಲ್ಲದೆ ಭಾರತದ ಇತಿಹಾಸವಿಲ್ಲ. ದಲಿತರು ಭಾರತೀಯ ಇತಿಹಾಸದ ಅವಿಭಾಜ್ಯ ಅಂಗ” ಎಂದ ಅವರು, “”ಸಾಮಾಜಿಕ ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ಪರಿಕಲ್ಪನೆಗಳು ಆರ್ಎಸ್ಎಸ್ನ ರಾಜಕೀಯ ದಾಳಗಳಲ್ಲ. ಅವು, ಸಮಗ್ರ ಭಾರತದಲ್ಲಿ ನಾವಿಟ್ಟ ನಂಬಿಕೆಯ ಪ್ರತೀಕ” ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ತನ್ನ ಅಪಾರ್ಟ್ಮೆಂಟ್ನಲ್ಲೇ ನೇಣಿಗೆ ಶರಣಾದ ಭೋಜ್ಪುರಿ ನಟಿ… ಕಾರಣ ನಿಗೂಢ
B.Y. Raghavendra: ಕಾಂಗ್ರೆಸ್ನವರ ಬಳಿ ಗ್ಯಾರಂಟಿ ಅಡ್ವಾನ್ಸ್ ಹಣ ಕೇಳಿ: ಬಿವೈಆರ್
Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ
Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ
Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ