ಬೆಳಗಾವಿ: ಹೈಟೆಕ್ ಸಿಟಿಗೆ ಒಗ್ಗಿಕೊಂಡ ಜವಾರಿ ಹಳ್ಳಿಗಳು
ನಗರ ಎಂಬ ಹಳ್ಳಿಗಳಲ್ಲಿ ಇನ್ನೂ ಆಗಬೇಕಿವೆ ಕೆಲಸಗಳು| ಸಿರಿವಂತರು ವಾಸಿಸುವ ವಾರ್ಡ್ಗಳಲ್ಲಿ ಸಕಲ ಸೌಕರ್ಯ
Team Udayavani, Sep 2, 2021, 1:39 PM IST
ವರದಿ: ಭೈರೋಬಾ ಕಾಂಬಳೆ
ಬೆಳಗಾವಿ: ಕುಂದಾನಗರಿಯ ವ್ಯಾಪ್ತಿಗೆ ಒಳಪಡುವ ಈ ವಾರ್ಡ್ಗಳು ಪಕ್ಕಾ ಹಳ್ಳಿಗಾಡಿನ ಜವಾರಿ ಪ್ರದೇಶಗಳು ಒಂದೆಡೆಯಾದರೆ, ಇನ್ನೊಂದೆಡೆ ಬೆಳೆಯುತ್ತಿರುವ ಮಹಾನಗರದ ಅಪಾರ್ಟಮೆಂಟ್ ಸಂಸ್ಕೃತಿಯನ್ನು ಹೊಂದಿವೆ.
ಕೃಷಿ ಚಟುವಟಿಕೆಗಳಿಂದ ಕೂಡಿರುವ ಈ ಪ್ರದೇಶಗಳಿಗೆ ಇನ್ನೂ ನಗರದ ಜನಜೀವನ ಸುತಾರಾಂ ಒಪ್ಪುತ್ತಿಲ್ಲ. ಮಹಾನಗರ ಪಾಲಿಕೆ ವ್ಯಾಪ್ತಿಯ ಈ ವಾರ್ಡುಗಳು ಉತ್ತರದ ತುದಿಗೆ ಕೆಲವೊಂದಿದ್ದು, ದಕ್ಷಿಣದ ತುದಿವರೆಗೆ ವ್ಯಾಪಿಸಿಕೊಂಡಿವೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ 41 ರಿಂದ 58 ವಾರ್ಡುಗಳ ಒಟ್ಟಾರೆ ಚಿತ್ರಣದಲ್ಲಿ ಕೆಲವು ಹಳ್ಳಿಗಳು ಸೇರ್ಪಡೆಯಾದರೆ ಇನ್ನೂ ಕೆಲ ವಾರ್ಡುಗಳಲ್ಲಿ ನಗರ ಜನಜೀವನ ಹಾಸುಹೊಕ್ಕಿದೆ. ಇಲ್ಲಿರುವ ಸಮಸ್ಯೆಗಳು, ಸವಾಲುಗಳು ಈ ವಾರ್ಡುಗಳನ್ನು ಪ್ರತಿ ಚುನಾವಣೆಯಲ್ಲಿ ಕಾಡುತ್ತಿರು ವುದನ್ನು ಅಲ್ಲಗಳೆಯುವಂತಿಲ್ಲ.
ಉತ್ತರ ಕ್ಷೇತ್ರದಲ್ಲಿಯ ಹಳ್ಳಿಗಳನ್ನು ಸುತ್ತವರಿದಿರುವ ಈ ವಾರ್ಡುಗಳು ಪಾಲಿಕೆ ವ್ಯಾಪ್ತಿಯಲ್ಲಿವೆ. ಹಳ್ಳಿಗಾಡಿನ ಸಂಪೂರ್ಣ ಚಿತ್ರಣ ಇಲ್ಲಿದೆ. ನಗರವೆಂಬ ಹಳ್ಳಿಗಳಲ್ಲಿ ಹೆ„ಟೆಕ್ ಸ್ಪರ್ಶವಿಲ್ಲದೇ ತನ್ನಷ್ಟಕ್ಕೆ ಈ ಹಳ್ಳಿಗಳು ಕೃಷಿ ಜೀವನ ನಡೆಸುತ್ತಿವೆ. ರೈತರು, ಕಾರ್ಮಿಕರು ಹೆಚ್ಚಿರುವ ಈ ಪ್ರದೇಶಗಳಲ್ಲಿ ಇನ್ನೂ ಅಭಿವೃದ್ಧಿ ಮರಿಚೀಕೆ ಆಗಿದೆ. ಕಣಬರ್ಗಿ, ಮುತ್ತ್ಯಾನಟ್ಟಿ, ಅಲಾರವಾಡ, ಬಸವನ ಕುಡಚಿ ಸೇರಿದಂತೆ ಕೆಲವು ಹಳ್ಳಿಗಳು ಈ ವಾರ್ಡ್ ವ್ಯಾಪ್ತಿಗೆ ಸೇರುತ್ತವೆ. ದಕ್ಷಿಣ ಭಾಗದ ಕೆಲವೊಂದು ವಾರ್ಡುಗಳಲ್ಲಿ ಸುಂದರ ರಸ್ತೆಗಳು, ಅಚ್ಚುಕಟ್ಟಾದ ಚರಂಡಿ ವ್ಯವಸ್ಥಿತ ಸುಂದರ ಉದ್ಯಾನವನಗಳು ತಲೆ ಎತ್ತಿವೆ. ಸಿರಿವಂತರು ವಾಸಿಸುವ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಸೌಕರ್ಯಗಳು ಇವೆ. ಕೆಲವು ವರ್ಷಗಳ ಹಿಂದೆಯೇ ಮಾಸ್ಟರ್ ಪ್ಲ್ಯಾನ್ ಅಡಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಈಗ ಸ್ಮಾರ್ಟ್ ಸಿಟಿ ಅಡಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಇನ್ನೂ ಅರ್ಧಕ್ಕಿಂತ ಹೆಚ್ಚು ಕಾಮಗಾರಿಗಳು ಪ್ರಗತಿಯಲ್ಲಿವೆ. ದಕ್ಷಿಣ ಮತಕ್ಷೇತ್ರದ ವಾರ್ಡುಗಳಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳು ಭರದಿಂದ ಸಾಗಿವೆ.
ಬೀದಿ ದೀಪಗಳು, ರಸ್ತೆಗಳ ಇಕ್ಕೆಲಗಳಲ್ಲಿ ಫುಟ್ಪಾತ್ ನಿರ್ಮಾಣ, ಸೈಕಲ್ ಟ್ರ್ಯಾಕ್ ಹೀಗೆ ಹಲವು ಕಾಮಗಾರಿಗಳು ನಡೆದಿವೆ. ಈ ಭಾಗ ಹೈಟೆಕ್ ಆಗಿದ್ದರೂ ಇನ್ನೂ ಕೆಲವೊಂದಿಷ್ಟು ಪ್ರದೇಶಗಳು ನಿರ್ಲಕ್ಷ್ಯಕ್ಕೂ ಒಳಗಾಗಿವೆ. ವ್ಯಾಕ್ಸಿನ್ ಡಿಪೋ ಸುತ್ತಲೂ ಬೆಳೆದಿರುವ ಅಪಾರ್ಟಮೆಂಟ್ಗಳು, ದೊಡ್ಡ ಬಡಾವಣೆಗಳು ನಗರದ ಚಿತ್ರಣವನ್ನೇ ಬದಲಿಸಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಮಹಾನಗರ ಪಾಲಿಕೆ ಗಮನಹರಿಸಬೇಕಾದ ಅಗತ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?