ದಡ್ಡನೆಂದು ಹಿಂದಡಿ ಇಡುವುದು ದೊಡ್ಡ ತಪ್ಪು


Team Udayavani, Sep 3, 2021, 6:10 AM IST

ದಡ್ಡನೆಂದು ಹಿಂದಡಿ ಇಡುವುದು ದೊಡ್ಡ ತಪ್ಪು

ಇಲ್ಲಿ ಯಾರೂ ದಡ್ಡರಲ್ಲ, ಹಾಗೆಯೇ ಹಣ, ಆಸ್ತಿ ಹೊಂದಿದ ಮಾತ್ರಕ್ಕೆ ದೊಡ್ಡ ವರು ಆಗುವುದಿಲ್ಲ. ಪ್ರಸ್ತುತ ದುಡ್ಡಿದ್ದ ವರೇ ದೊಡ್ಡವರೆಂದು ಬಡಾಯಿ ಕೊಚ್ಚಿಕೊಳ್ಳುವವರ ಕಾಲ ಇದಾಗಿದೆ. ಅದು ಬೇರೆ ವಿಚಾರ. ಜಗತ್ತಿನಲ್ಲಿ ಯಾರಿಂ ದಲೂ ಕದಿಯಲಾಗದ ಮತ್ತು ಎಲ್ಲರೂ ಬೆಲೆ ಕೊಡುವ ಅತ್ಯಮೂಲ್ಯ ಆಸ್ತಿ ಎಂದರೆ ಅದು ಜ್ಞಾನ. ಯಾರು ಜ್ಞಾನ ಗಳಿಸಿರುತ್ತಾರೋ ಜಗತ್ತಿನಲ್ಲಿ ಅವರೇ ದೊಡ್ಡವರು. ಜ್ಞಾನದ ಮುಂದೆ ಉಳಿದೆಲ್ಲವೂ ನಗಣ್ಯ.

ಈ ಮಾನವ ದೇಹ, ದೇವರ ಅದ್ಭುತ ಕೊಡುಗೆ. ದೈವ ನಿರ್ಮಿಸಿದ ದೇಹಕೆ ಏನಾದರೂ ವ್ಯಾಧಿ ತಗಲಿದರೆ ಸರಿ ಪಡಿಸಲೆಂದೇ ಸಾವಿರಾರು ವರ್ಷಗಳಿಂದ ಸಂಶೋಧನೆ, ಆವಿಷ್ಕಾರಗಳು ನಡೆದಿವೆ.

ಇಲ್ಲಿಯವರೆಗೆ ಯಾವುದೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಿಲ್ಲ. ತಾತ್ಕಾ ಲಿಕ ಪರಿಹಾರಗಳಿಗೆ ಬರವಿಲ್ಲ. ಇನ್ನೂ ಮಾನವ ಪರಿಹಾರ ಕಂಡುಕೊಳ್ಳುವು ದರಲ್ಲಿಯೇ ನಿರತನಾಗಿದ್ದಾನೆ. ಸೃಷ್ಟಿಕರ್ತ ಪ್ರತಿಯೊಬ್ಬರಿಗೂ ಕೂಡ  ಇಂದ್ರಿಯ ಗಳನ್ನು ಸಮಾನವಾಗಿ, ಸುಸಂಬದ್ಧವಾಗಿ, ಸುವ್ಯವಸ್ಥಿತವಾಗಿ ನೀಡಿದ್ದಾನೆ. ದಡ್ಡನೆನಿಸಿ ಕೊಳ್ಳುವವನಿಗೆ ಅರ್ಧಂಬರ್ಧ ಮೆದುಳು ಕೊಟ್ಟು, ಬುದ್ಧಿವಂತನಿಗೆ ಸಂಪೂರ್ಣ ಮೆದುಳು ಏನಾದರೂ ನೀಡಿದ್ದಾನೆಯೇ?  ಇಲ್ಲವಲ್ಲ; ದಡ್ಡನಿಗೂ, ದೊಡ್ಡವನಿಗೂ ಇರುವುದೊಂದೇ ತಲೆ. ಆದರೆ ಅದನ್ನು ನಾವು ಹೇಗೆ ಉಪಯೋಗ ಮಾಡಿಕೊಳ್ಳುತ್ತೇವೆ ಎಂಬುದನ್ನು ಅವ ಲಂಬಿಸಿದೆ. ಸರ್ವರೂ ಸರ್ವಸ್ವವನ್ನೂ ಸಾಧಿಸಲು ಸಮರ್ಥರಿದ್ದಾರೆ. ಅವರು ಇಂದ್ರಿಯಗಳನ್ನು ನಿಗ್ರಹಿಸಿಕೊಂಡು ಕಾರ್ಯ ಪ್ರವೃತ್ತರಾಗದಿರುವುದೇ ಹಿಂದು ಳಿಯಲು ಕಾರಣ. ಧೈರ್ಯದಿಂದ ಶ್ರದ್ಧೆ ಬೆಳೆಸಿಕೊಂಡು ಒಂದು ವೇಳೆ ಕಾರ್ಯ ನಿರತರಾದರೆಂದರೆ ಇಡೀ ಜಗತ್ತೇ ಅವರ ವಿರುದ್ಧ  ತಿರುಗಿ ಬಿದ್ದರೂ ಏನೂ ಮಾಡಲಾಗುವುದಿಲ್ಲ. ಅಂತಹ ಅಖಂಡ ಶಕ್ತಿ ನಮ್ಮಲ್ಲಡಗಿದೆ.

ಬೀದಿ ಬದಿಯಲ್ಲಿ ಭಿಕ್ಷೆ ಬೇಡುವವ ನಿಂದ ಹಿಡಿದು ರಾಷ್ಟ್ರದ ಮೊದಲ ಪ್ರಜೆ ರಾಷ್ಟ್ರಪತಿಯವರೆಗೆ ಒಂದಲ್ಲ ಒಂದು ಕಲೆ, ಜಾಣತನವಿರುತ್ತದೆ. ಅಧಿಕಾರದ ಆಧಾರದ ಮೇಲೆ ತಾರತಮ್ಯ ಮಾಡಿ, ಅವಮಾನ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗಬಾರದು. ಉನ್ನತ ಅಧಿಕಾರಿಗಳಿಗೆ ಉತ್ತಮ ಯೋಚನೆ ಇರುತ್ತವೆ, ಅಧೀನ ಸಿಬಂದಿಗೆ ಅವುಗಳ ಯಾವುದೇ ಪರಿವೆಯೇ ಇರುವುದಿಲ್ಲ ವೆಂದಲ್ಲ. ಮನಸ್ಸಿನ ಹಂದರದಲ್ಲಿ ಯಾವ ವಿಚಾರಗಳಿಗೆ ಬೆಳೆಯಲು ಅವಕಾಶ ನೀಡುತ್ತೇವೆಯೋ ಅಂಥ ಮನೋಭಾವನೆಗಳು ರೂಪುಗೊಂಡು ಕಾರ್ಯ ರೂಪಕ್ಕೆ ಇಳಿಸುವವರೆಗೂ ಗುಪ್ತವಾಗಿರು ತ್ತವೆ. ಯಾವಾಗ ಆಚರಣೆಗೆ ತರಲು ಮುಂದಾಗುತ್ತೇವೆಯೋ ಆಗ ನಮ್ಮ ಸಾಮಥ್ಯ ಇತರರಿಗೆ ತಿಳಿಯುತ್ತದೆ.

“ವಿಚಾರಗಳು ಇಡೀ ಜಗತ್ತನ್ನೇ ಆಳು ತ್ತವೆ’. ಆಳುವ ವಿಚಾರಗಳಿದ್ದರೆ ಸರಿ; ಹಾಳು ಮಾಡುವ ವಿಚಾರಗಳಿದ್ದರೆ, ಎಂಥ ಉನ್ನತ ಅಧಿಕಾರಿಗಳು ಇದ್ದರೂ ವಿಶ್ವಕ್ಕೆ ಮಾರಕ ವಾಗುವುದರಲ್ಲಿ ಎರಡು ಮಾತಿಲ್ಲ.  ಎಲ್ಲ ಇದ್ದು ಏನು ಇರದಂತೆಯೇ ಇರುವ ನಮಗೆ ನಾವು ದಡ್ಡನೆಂದು ಯಾವಾಗ ಅಂದುಕೊಳ್ಳುತ್ತೇವೆಯೋ ಆಗ ಜಗತ್ತಿನಲ್ಲಿ ಇದಕ್ಕಿಂತ ಪಾಪ ಬೇರೊಂದಿಲ್ಲ. ಅವಿರತ ಶ್ರಮವಹಿಸಿ, ಅಸೀಮವಾದುದನ್ನು ಸಾಧಿಸಲು ತೊಡೆ ತಟ್ಟಿ ನಿಲ್ಲಬೇಕು. ಇಲ್ಲ, ಸಾಧ್ಯವಿಲ್ಲ, ಓದಲು ನನ್ನಿಂದಾಗದು; ಮೈ ಮುರಿದು ದುಡಿಯಲು ಸಾಧ್ಯವಾಗದೆಂದು ಹಗಲಿ ರುಳು ಹಲುಬುತ್ತ ಕುಳಿತುಕೊಂಡರೆ ಎಲ್ಲರ ದೃಷ್ಟಿಯಲ್ಲಿ ಯಾವ ಕೆಲಸಕ್ಕೂ ಸಲ್ಲದವರಾಗುತ್ತೇವೆ. ಪ್ರಮುಖವಾಗಿ ನಮ್ಮ ಆಪ್ತರೆನಿಸಿಕೊಂಡವರೆ ನಮ್ಮನ್ನು ತಿರಸ್ಕರಿಸಿ ಬಿಡುತ್ತಾರೆ. ಒಂದು ಬಾರಿ ಆಲಸ್ಯತನ, ಸೋಮಾರಿತನಕ್ಕೆ ಒಳಗಾಗಿ ಬಿಟ್ಟೆವು ಎಂದರೆ ಅನ್ಯ ಮಾರ್ಗದ ಹಾದಿಯಲ್ಲಿ  ಸಾಗಿಬಿಡುತ್ತೇವೆ. ಹೊಟ್ಟೆಪಾಡಿಗಾಗಿ ಸಮಾಜಘಾತಕ ಚಟುವಟಿಕೆಯಲ್ಲಿ ತೊಡಗಿಕೊಂಡು ನಮ್ಮ ಜೀವನಕ್ಕೆ ನಾವೇ ಸಂಚಕಾರ ತಂದುಕೊಳ್ಳುತ್ತೇವೆ. ಮನಸ್ಸು ನಮ್ಮ ಗುಲಾಮರಾಗಬೇಕೇ ಹೊರತು ನಾವು ಅದರ ಗುಲಾಮರಾಗಬಾರದು.

ಎಲ್ಲ ಸೌಕರ್ಯವಿದ್ದರೂ ನಾವು ಕೈಯಲ್ಲಿ ಆಗದೆಂದು ಕೈ ಕಟ್ಟಿಕೊಂಡು ಕುಳಿತುಕೊಳ್ಳುತ್ತೇವೆಯಲ್ಲ ಯಾಕೆ? ಇರುವ ಸೌಲಭ್ಯಗಳನ್ನೇ ಸದುಪಯೋಗ ಪಡಿಸಿಕೊಂಡು ಏನಾದರೂ ಕಾರ್ಯ ಮಾಡಲು ಮುಂದಾಗೋಣ. ಸಾವಿರ ಜನ ಸಾವಿರ ಮಾತನಾಡಿದರೂ ಕಿವಿಗೊಡದಿರೋಣ. ನಮ್ಮೊಳಗಿನ ಆತ್ಮದ ಮಾತಿಗೆ ದನಿಗೂಡಿಸಿ, ಆತ್ಮವಿಶ್ವಾಸ ಇಮ್ಮಡಿ ಗೊಳಿಸಿ ಕೊಂಡು ಕಾರ್ಯ ನಿರ್ವಹಿಸೋಣ.

- ಬಿ. ಪ್ರಕಾಶ್‌, ವಜ್ಜಲ್

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.