ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಸಂಭ್ರಮದ ಮೊಂತಿ ಫೆಸ್ಟ್
Team Udayavani, Sep 8, 2021, 1:35 PM IST
ಶಿರ್ವ : ಉಡುಪಿ ಕೆಥೋಲಿಕ್ ಧರ್ಮಪ್ರಾಂತ್ಯದ ಶಿರ್ವ ವಲಯದ ಪ್ರಮುಖ ಚರ್ಚುಗಳಲ್ಲೊಂದಾದ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ವಲಯದ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್ ಡೇಸಾ ನೇತೃತ್ವದಲ್ಲಿ ತೆನೆ ಹಬ್ಬದ (ಮೊಂತಿ ಫೆಸ್ಟ್) ಸಂಭ್ರಮಾಚರಣೆ ಇಂದು(ಸೆ.8 ಬುಧವಾರ) ರಂದು ಸಂಪನ್ನಗೊಂಡಿತು.
ಕೋವಿಡ್ ನಿಯಮ ಪಾಲಿಸಿಕೊಂಡು ಭಕ್ತಾಧಿಗಳ ಉಪಸ್ಥಿತಿಯಲ್ಲಿ ಪ್ರಧಾನ ಧರ್ಮಗುರು ರೆ| ಫಾ| ಡೆನ್ನಿಸ್ ಡೇಸಾ ಸಹಾಯಕ ಧರ್ಮಗುರುಗಳಾದ ರೆ| ಫಾ| ನೆಲ್ಸನ್ ಪೆರಿಸ್ ಮತ್ತು ರೆ| ಫಾ| ರೋಲ್ವಿನ್ ಅರಾನ್ಹಾ ಬಲಿ ಪೂಜೆ ನೆರವೇರಿಸಿ ಭಕ್ತಾಧಿಗಳಿಗೆ ತೆನೆ ವಿತರಿಸಿದರು. ಕೋವಿಡ್ ನಿಂದಾಗಿ ಸಂಪ್ರದಾಯದಂತೆ ಮಾತೆ ಕನ್ಯಾ ಮೇರಿಯ ವಿಗ್ರಹದ ಮೆರವಣಿಗೆ ನಡೆಯದೆ ಚರ್ಚ್ ನಲ್ಲಿಯೇ ಭಕ್ತಾಧಿಗಳು ಮೂರ್ತಿಗೆ ಪುಷ್ಪಾರ್ಚನೆ ನಡೆಸಿದರು.
ಇದನ್ನೂ ಓದಿ : ಗಾಂಜಾ ನಶೆಯಲ್ಲಿ ಮಚ್ಚು, ಲಾಂಗು ಝಳಪಿಸಿ ಪೊಲೀಸರ ಅತಿಥಿಗಳಾದ ಯುವಕರು
ಚರ್ಚ್ ಆರ್ಥಿಕ ಮಂಡಳಿಯ ಕಾರ್ಯದರ್ಶಿ ಲೀನಾ ಮಚಾದೋ, ಸದಸ್ಯರಾದ ವಿಲ್ಸನ್ ರೊಡ್ರಿಗಸ್, ಮೆಲ್ವಿನ್ ಅರಾನ್ಹಾ,ಜೂಲಿಯಾನ್ ರೊಡ್ರಿಗಸ್,ನೋರ್ಬರ್ಟ್ ಇ. ಮಚಾದೋ, ಪುಷ್ಪಾ ಫೆರ್ನಾಂಡಿಸ್, ಪ್ರಮುಖರಾದ ಪೀಟರ್ ಕೋರ್ಡಾ, ಡೆನ್ನಿಸ್ ಮತಾಯಸ್, ಪ್ರೊ | ರೊನಾಲ್ಡ್ ಮೊರಾಸ್, ಚರ್ಚ್ನ ಆರ್ಥಿಕ ಸಮಿತಿಯ ಸದಸ್ಯರು, ನೇಟಿವಿಟಿ ಕಾನ್ವೆಂಟ್ ನ ಧರ್ಮ ಭಗಿನಿಯರು, ವಿವಿಧ ವಾರ್ಡ್ಗಳ ಗುರಿಕಾರರು, ಭಕ್ತಾಧಿಗಳು ಉಪಸ್ಥಿತರಿದ್ದರು.
ಶಿರ್ವ ವಲಯದ ಪಿಲಾರು, ಪೆರ್ನಾಲು, ಪಾಂಬೂರು, ಕಳತ್ತೂರು ಮತ್ತು ಮೂಡುಬೆಳ್ಳೆ ಚರ್ಚುಗಳಲ್ಲಿ ಕೂಡಾ ಸರಳವಾಗಿ ಬಲಿ ಪೂಜೆಯೊಂದಿಗೆ ತೆನೆ ಹಬ್ಬದ ಸಂಭ್ರಮ ಸಂಪನ್ನಗೊಂಡಿತು.
ಇದನ್ನೂ ಓದಿ : ವಿಧಾನ ಸಭೆಯಲ್ಲಿ ಗದ್ದಲಗಳ ತಡೆಗೆ ಅರ್ಧ ದಿನದ ಜಂಟಿ ಅಧಿವೇಶನ : ಕಾಗೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ