ಪುಣೆ ಲಯನ್ಸ್ ಕ್ಲಬ್: ಸಂತೋಷ್ ಶೆಟ್ಟಿ ಅವರಿಗೆ ಸಮ್ಮಾನ
Team Udayavani, Sep 9, 2021, 2:31 PM IST
ಪುಣೆ: ಲಯನ್ಸ್ ಕ್ಲಬ್ ಪುಣೆ 323 ಡಿಸ್ಟ್ರಿಕ್ಟ್ ವತಿಯಿಂದ ಆ. 29ರಂದು ಪುಣೆ ಬಂಟರ ಭವನದ ಸಭಾಂಗಣದಲ್ಲಿ ಎಕೊಲೆಡ್ ಡಿಸ್ಟ್ರಿಕ್ಟ್ ಅವಾರ್ಡ್ ಸಮಾರಂಭವನ್ನು ವೈವಿಧ್ಯಮಯ ಕಾರ್ಯಕ್ರಮ ಗಳೊಂದಿಗೆ ಆಯೋಜಿಸಲಾಗಿತ್ತು.
ಈ ಸಂದರ್ಭ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಅವರನ್ನು ಸಮ್ಮಾನಿಸಲಾಯಿತು. ಸಂತೋಷ್ ಶೆಟ್ಟಿಯವರ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಗೌರವಿಸಲಾಯಿತು.
ಈ ಸಂದರ್ಭ ಲಯನ್ಸ್ ಐಡಿಪಿಜಿ ಸಿಎ ಅಭಯ್ ಶಾಸ್ತ್ರಿ, ಡಿಸ್ಟ್ರಿಕ್ಟ್ ಗವರ್ನರ್ ಲಯನ್ ಹೇಮಂತ್ ನಾಯ್ಕ್ , ಪಿಂಪ್ರಿ-ಚಿಂಚ್ವಾಡ್ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್, ಮಿಸ್ ಯೂನಿವರ್ಸ್ ಶಫಿ ಸಯ್ಯದ್, ಮರಾಠಿ ನಟಿ ಆಯ್ಲಿ ಘಿಯಾ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ನೇರ ರೈಲು ಮಾರ್ಗಕ್ಕೆ ಶೀಘ್ರ ಭೂಮಿಪೂಜೆ