ಭಕ್ತರಿಂದ ಗೌರ ಸಮುದ್ರ ಮಾರಮ್ಮನ ದರ್ಶನ
Team Udayavani, Sep 15, 2021, 2:07 PM IST
ಚಳ್ಳಕೆರೆ: ತಾಲೂಕಿನ ಸುಕ್ಷೇತ್ರ ಗೌರಸಮುದ್ರದಶ್ರೀ ಮಾರಮ್ಮದೇವಿ ಜಾತ್ರೆಯನ್ನು ಕೊರೊನಾಹಿನ್ನೆಲೆಯಲ್ಲಿ ಈ ವರ್ಷವೂ ರದ್ದುಪಡಿಸಿರುವುದಾಗಿಪ್ರಕಟಿಸಲಾಗಿದ್ದರೂ ಭಕ್ತರು ಮಂಗಳವಾರ ಅಪಾರಸಂಖ್ಯೆಯಲ್ಲಿ ಆಗ್ಮಿಸಿ ದೇವಿಯ ದರ್ಶನ ಪಡೆದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಹೆಚ್ಚುವರಿಜಿಲ್ಲಾ ರಕ್ಷಣಾಧಿ ಕಾರಿ ಮಹಲಿಂಗ ನಂದಗಾವಿ,ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ, ತಹಶೀಲ್ದಾರ್ಎನ್. ರಘುಮೂರ್ತಿ ಹಾಗೂ ತಾಲೂಕು ಮಟ್ಟದವಿವಿಧ ಅಧಿಕಾರಿಗಳು ಜಾತ್ರೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ಬಿಗಿಬಂದೋಬಸ್ತ್ ಮಾಡಿದ್ದರು. ಮೂರನೇ ಹಂತದಕೊರೋನಾ ವ್ಯಾಪಿಸಿದಲ್ಲಿ ಹೆಚ್ಚಿನ ಅನಾಹುತವಾಗುವಸಾಧ್ಯತೆ ಇದ್ದಿದ್ದರಿಂದ ಮಾರ್ಗಸೂಚಿ ಅನ್ವಯಜಾತ್ರೆಯನ್ನು ಸರಳವಾಗಿ ಆಚರಿಸುವಂತೆಸೂಚಿಸಲಾಗಿತ್ತು. ಆದರೂ ಸಾವಿರಾರು ಭಕ್ತರು ಜಮಾಯಿಸಿದ್ದರು.
ಹಲವಾರು ಭಕ್ತರು ಖಾಸಗಿ ಬಸ್, ವಾಹನಗಳಲ್ಲಿಆಗಮಿಸಿದರೆ, ಗ್ರಾಮೀಣ ಭಾಗದ ಭಕ್ತರುಎಂದಿನಂತೆತಮ್ಮ ಎತ್ತಿನಬಂಡಿಗಳಲ್ಲಿ ಆಗಮಿಸಿದರು.ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶ ಹೊಲ,ತೋಟಗಳಲ್ಲಿ ದೇವಿಯ ಸೇವೆ ಮಾಡುವ ಮೂಲಕಭಕ್ತಿ ಸಮರ್ಪಿಸಿದರು. ತುಮಲು ಪ್ರದೇಶದಲ್ಲಿರುವ ಗರುಡಗಂಬದ ಮೇಲೆ ದೀಪ ಹಚ್ಚುವ ಪದ್ಧತಿ ಇದೆ.
ಇದನ್ನೂ ಓದಿ:ಬೀದಿ ಬದಿ ವ್ಯಾಪಾರಸ್ಥರ ಕಲ್ಯಾಣ ಮಂಡಳಿ ಸ್ಥಾಪಿಸಿ
ಆದರೆ ಮೆರವಣಿಗೆ ನಡೆಯದ ಹಿನ್ನೆಲೆಯಲ್ಲಿ ದೀಪ ಹಚ್ಚಲಿಲ್ಲ.ಚಳ್ಳಕೆರೆ ತಾಲೂಕು, ರಾಜ್ಯದ ವಿವಿಧೆಡೆಗಳಿಂದಹಾಗೂ ಆಂಧ್ರಪ್ರದೇಶದಿಂದಲೂ ಭಕ್ತರುಆಗಮಿಸಿದ್ದರು. ಹೆಚ್ಚುವರಿ ರಕ್ಷಣಾಧಿ ಕಾರಿಮಹಲಿಂಗ ನಂದಗಾವಿ ನೇತೃತ್ವದಲ್ಲಿ ಡಿವೈಎಸ್ಪಿ ಕೆ.ವಿ.ಶ್ರೀಧರ್ ಹಾಗೂ ಸಿಬ್ಬಂದಿ ಬಂದೋಬಸ್ತ್ ಕಾರ್ಯನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ
MUST WATCH
ಹೊಸ ಸೇರ್ಪಡೆ
ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ
Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ