ದಾಂಪತ್ಯ ಕಲಹ : ನಟ ನಾಗಚೈತನ್ಯಗೆ ಕಾಡುತ್ತಿದೆಯಂತೆ ಆ ಭಯ
Team Udayavani, Sep 15, 2021, 2:25 PM IST
ಹೈದರಾಬಾದ್ : ನಟ ನಾಗಚೈತನ್ಯ ಹಾಗೂ ನಟಿ ಸಮಂತಾ ಅವರ ದಾಂಪತ್ಯ ಕಲಹ ಕಳೆದ ಕೆಲ ದಿನಗಳಿಂದ ಟಾಕ್ ಆಫ್ ದಿ ಟೌನ್ ಆಗಿದೆ. ಈ ಜೋಡಿ ವಿಚ್ಛೇದನ ತೆಗೆದುಕೊಳ್ಳಲಿದ್ದಾರೆ ಎನ್ನುವ ವದಂತಿ ಕೇಳಿ ಬರುತ್ತಿದ್ದರೂ ಇವರ ಕುಟುಂಬದವರು ಇದರ ಬಗ್ಗೆ ತುಟಿ ಪಿಟಕ್ ಅಂದಿಲ್ಲ. ಇದೀಗ ಹೊಸ ವಿಚಾರ ಏನಂದರೆ ಸಮಂತಾ ಹಾಗೂ ಡಿವೋರ್ಸ್ ವಿಷಯದ ಬಗ್ಗೆ ಮಾಧ್ಯಮಗಳಿಂದ ಎದುರಾಗಬಹುದಾದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ನಾಗಚೈತನ್ಯ ಮುಂದಾಗಿದ್ದಾರೆ.
ನಾಗ ಚೈತನ್ಯ ನಟಿಸಿರುವ ‘ಲವ್ ಸ್ಟೋರಿ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರದ ಪ್ರಮೋಷನ್ ಕಾರ್ಯ ಚಿತ್ರತಂಡದಿಂದ ಭರದಿಂದ ಸಾಗಿದೆ. ಚಿತ್ರದ ನಾಯಕ ಚೈತನ್ಯ ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಮಾಧ್ಯಮಗಳ ಎದುರು ಅವರು ಹಾಜರಾಗುತ್ತಿಲ್ಲ. ಇದಕ್ಕೆ ಕಾರಣ ತನ್ನ ಹಾಗೂ ಪತ್ನಿ ಸಮಂತಾ ಕುರಿತು ಪ್ರಶ್ನೆಗಳು ಎದುರಾಗಬಹುದೆನ್ನುವ ಭಯವಂತೆ.
ಮಾಧ್ಯಮಗಳ ಎದುರು ಫ್ಯಾಮಿಲಿ ಮ್ಯಾಟರ್ ಮಾತಾಡಬಾರದು ಎನ್ನುವ ಯೋಚನೆಯಲ್ಲಿದ್ದಾರಂತೆ ಈ ನಟ. ಆದರೂ ಸಿನಿಮಾ ಪ್ರಮೋಷನ್ಗಾಗಿ ಮಾಧ್ಯಮಗಳ ಎದುರು ಅವರು ಹಾಜರಾಗಲೇ ಬೇಕಾದ ಅನಿವಾರ್ಯತೆ ಎದುರಾಗಿದೆ.
ಲವ್ ಸ್ಟೋರಿ ಪ್ರಮೋಷನ್ಗಾಗಿ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತ್ತಿರುವ ನಾಗ ಚೈತನ್ಯ ತಮ್ಮ ಚಿತ್ರತಂಡ ಹಾಗೂ ಪಿಆರ್ ಗಳಿಗೆ ಮೊದಲೆ ತಾಕಿತ್ತು ಮಾಡಿದ್ದಾರಂತೆ. ಯಾವುದೇ ಕಾರಣಕ್ಕೂ ಮಾಧ್ಯಮಗಳು ಸಮಂತಾ ಹಾಗೂ ಡಿವೋರ್ಸ್ ಬಗ್ಗೆ ಪ್ರಶ್ನೆಗಳನ್ನು ಕೇಳದಂತೆ ನೋಡಿಕೊಳ್ಳಿ ಎಂದು ಕಂಡಿಷನ್ ಹಾಕಿದ್ದಾರಂತೆ.
ಇನ್ನು ಸಮಂತಾ ಅಕ್ಕೀನೆನಿ ಹೆಸರು ಕೈ ಬಿಟ್ಟಾಗಿನಿಂದ ಇವರ ದಾಂಪತ್ಯದಲ್ಲಿ ಎಲ್ಲವೂ ಸರಿ ಇಲ್ಲ ಅನುಮಾನ ಹೊಗೆಯಾಡಲು ಶುರುವಾಯಿತು. ಇತ್ತೀಚಿಗೆ ಈ ಜೋಡಿ ಜೊತೆಯಾಗಿ ಕಾಣಿಸಿಕೊಳ್ಳದಿರುವುದು ಕೂಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ