ಸೇನಾ ಪರೇಡ್‌ಗೆ ಸ್ವದೇಶಿ ಗೀತೆ : ಬ್ರಿಟಿಷ್‌ ಗೀತೆಗಳಿಗೆ ಕೊಕ್‌ ನೀಡಲು ಕೇಂದ್ರ ನಿರ್ಧಾರ

ನೂತನ ಗೀತೆ ಹುತಾತ್ಮ ಯೋಧರಿಗೆ ಸಮರ್ಪಣೆ

Team Udayavani, Sep 18, 2021, 6:40 PM IST

ಸೇನಾ ಪರೇಡ್‌ಗೆ ಸ್ವದೇಶಿ ಗೀತೆ : ಬ್ರಿಟಿಷ್‌ ಗೀತೆಗಳಿಗೆ ಕೊಕ್‌ ನೀಡಲು ಕೇಂದ್ರ ನಿರ್ಧಾರ

ನವದೆಹಲಿ : ಭಾರತೀಯ ಸೇನೆಯ ನಿರ್ಗಮನ ಪಥಸಂಚಲನ ಸೇರಿದಂತೆ ರಾಷ್ಟ್ರೀಯ ಕಾರ್ಯಕ್ರಮಗಳಿಗೆ ಹಿಂದಿ ರಚನೆಯನ್ನೊಳಗೊಂಡ ಪ್ರಾದೇಶಿಕ ಗೀತೆ ಅಳವಡಿಸಲು ರಕ್ಷಣಾ ಇಲಾಖೆ ಸಜ್ಜಾಗಿದೆ. ಮಿಲಿಟರಿ ಬ್ಯಾಂಡ್‌ನ‌ ತಾಳಕ್ಕೆ ಹೊಂದಿಕೆ ಆಗಬಲ್ಲಂಥ ಹೊಸ ಹಾಡನ್ನು ಸೇನೆಯ ರಿಕ್ವೆಸ್ಟ್‌ ಫಾರ್‌ ಪ್ರೊಪೊಸಲ್‌ನ ತಂಡ ಶೀಘ್ರವೇ ಅಂತಿಮಗೊಳಿಸಲಿದೆ.

ಪ್ರಸ್ತುತ ಮಿಲಿಟರಿಯಲ್ಲಿ ಬ್ರಿಟಿಷ್‌ ಆಡಳಿತ ಅಳವಡಿಸಿದ ಗೀತೆಗಳ ಟ್ಯೂನ್‌ಗಳನ್ನು ನುಡಿಸಲಾಗುತ್ತಿದೆ. ಸೇನೆಯ ಭಾರತೀಕರಣದ ಭಾಗವಾಗಿ, ಈ ಹಾಡನ್ನು ತೆಗೆದು, ಸ್ವದೇಶಿ ಗೀತೆ ಅಳವಡಿಕೆಗೆ ಯೋಜಿಸಲಾಗಿದೆ. ದೇಶಭಕ್ತಿ ಮತ್ತು ಮಿಲಿಟರಿ ಶಕ್ತಿ ಬಣ್ಣಿಸುವಂಥ 3 ಅಂತಿಮ ಹಾಡುಗಳನ್ನು ಸಲ್ಲಿಸಲು ಪ್ರಮುಖ ಮ್ಯೂಸಿಕ್‌ ಸಂಸ್ಥೆ ಜತೆ ಒಪ್ಪಂದವನ್ನೂ ಮಾಡಿಕೊಳ್ಳಲಾಗಿದೆ. ಹಾಡುಗಳು ಸಲ್ಲಿಕೆಯಾದ 30 ದಿನಗಳೊಳಗೆ, ಟ್ಯೂನನ್ನು ಪ್ರಯೋಗಾರ್ಥವಾಗಿ ಬಳಸಲಾಗುತ್ತದೆ.

ಬ್ರಿಟಿಷ್‌ ಗೀತೆಗಳಗೆ ಕೊಕ್‌: ಸೇನಾ ಸಮಾರಂಭಗಳಲ್ಲಿ ಚಾಲ್ತಿಯಲ್ಲಿರುವ ಬ್ರಿಟಿಷ್‌ ಮೂಲದ ಹಲವು ಟ್ಯೂನ್‌ಗಳಿಗೆ ಕೊಕ್‌ ಸಿಗುವ ಸಾಧ್ಯತೆ ಇದೆ. ಪ್ರಸ್ತುತ “ಆಲ್ಡ್‌ ಲ್ಯಾಂಗ್‌ ಸೈನ್‌…’, “ಅಬಿಡ್‌ ವಿತ್‌ ಮಿ…’ ಮುಂತಾದ ಹಾಡುಗಳನ್ನು ವಿವಿಧ ಮಿಲಿಟರಿ ಅಕಾಡೆಮಿಗಳಲ್ಲಿ, ಸೇನೆಯ ಪಥ ಸಂಚಲನಗಳಲ್ಲಿ ನುಡಿಸಲಾಗುತ್ತಿದೆ. “ಅಬಿಡ್‌ ವಿತ್‌ ಮಿ…’ ಹಾಡನ್ನು ಕೈಬಿಟ್ಟು, “ವಂದೇ ಮಾತರಂ’ ಅಳವಡಿಕೆಯ ಪ್ರಸ್ತಾಪ ಕಳೆದ ವರ್ಷ ಕೇಳಿಬಂದಿತ್ತು. ಬ್ಯಾಂಡ್‌ಮಾರ್ಚ್‌ನಲ್ಲಿ ದೇಶದ ಐಕ್ಯತೆ ಸಾರುವ “ಸಾರೇ ಜಹಾನ್‌ ಸೆ ಅಚ್ಚಾ’ ಬಳಕೆಯಲ್ಲಿದ್ದು, ಇದನ್ನು ಉಳಿಸಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ :ಕೋವಿಡ್: ರಾಜ್ಯದಲ್ಲಿಂದು 889 ಹೊಸ ಪ್ರಕರಣ ಪತ್ತೆ|1080 ಜನ ಸೋಂಕಿತರು ಗುಣಮುಖ

ನೂತನ ಹಾಡನ್ನು ಹುತಾತ್ಮ ಯೋಧರು ಮತ್ತು ಅವರ ಕುಟುಂಬಗಳಿಗೆ ಸಮರ್ಪಿಸಲು ಸೇನೆ ನಿರ್ಧರಿಸಿದೆ.

ಸೇನೆಯ ಅಪೇಕ್ಷೆಗಳೇನು?
– ಯೋಧರ ತ್ಯಾಗ, ಸಮರ್ಪಣೆ, ದೇಶಭಕ್ತಿ ಬಿಂಬಿಸುವ ಧ್ವನಿ ಗೀತೆಯಲ್ಲಿರಬೇಕು.
– ಕಾಲಾತೀತ, ಕಲಾತ್ಮಕ ಆಕರ್ಷಣೆ ಹೊಂದಿರಬೇಕು.
– ಮಿಲಿಟರಿ ಬ್ಯಾಂಡ್‌ಗೆ ಹೊಂದಿಕೆ ಆಗುವಂತಿರಬೇಕು.

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

Election Campaign; ನಮ್ಮ ದುಡಿಮೆ ನಿಮ್ಮ ಮಕ್ಕಳಿಗಾಗಿ: ಪ್ರಧಾನಿ ಮೋದಿ

ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

Ferozepur; ಗುರುಗ್ರಂಥ ಸಾಹೀಬ್ ಪುಟಗಳನ್ನು ಹರಿದ ಯುವಕ; ಥಳಿಸಿ ಕೊಂದು ಹಾಕಿದ ಸ್ಥಳೀಯರು

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.