ಎಟಿಎಂನಲ್ಲಿ ಹಣವಿಲ್ಲದಿದ್ದರೆ ಬ್ಯಾಂಕ್ಗಳಿಗೆ ದಂಡ
ಶಾಖೆಗಳಿಂದ ನಗದು ವಿಥ್ಡ್ರಾ ಪ್ರಮಾಣ ಕಡಿಮೆ ಗೊಳ್ಳಲಿದೆ ಎಂಬ ಲೆಕ್ಕಾಚಾರ ಆರ್ಬಿಐನದ್ದಾಗಿದೆ.
Team Udayavani, Sep 20, 2021, 9:20 AM IST
ನಷ್ಟದಲ್ಲಿರುವ ಕೆಲವೊಂದು ಬ್ಯಾಂಕ್ಗಳನ್ನು ಲಾಭದಲ್ಲಿರುವ ಬ್ಯಾಂಕ್ಗಳೊಂದಿಗೆ ವಿಲೀನಗೊಳಿಸಿದ ಬಳಿಕ ಎಟಿಎಂಗಳು ಕೂಡ ಬರಿದಾಗತೊಡಗಿವೆ. ಹಣದ ತುರ್ತು ಆವಶ್ಯಕತೆ ಇದ್ದಾಗ ಎಟಿಎಂ ಕೇಂದ್ರಕ್ಕೆ ತೆರಳಿದ ವೇಳೆ ಹಣವಿಲ್ಲ ಎಂಬ ಬೋರ್ಡ್ ಗಳು ಮಾಮೂಲಿಯಾಗಿವೆ. ಇದರಿಂದಾಗಿ ಜನರು ಹಣಕ್ಕಾಗಿ ಒಂದು ಎಟಿಎಂನಿಂದ ಇನ್ನೊಂದು ಎಟಿಎಂಗಳಿಗೆ ಅಲೆದಾಡುವಂತಾಗಿದೆ. ಈ ಸಂಬಂಧ ಬ್ಯಾಂಕ್ಗಳ ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳಿಗೆ ಹಣ ತುಂಬಲು ವಿಫಲವಾದ ಬ್ಯಾಂಕ್ಗಳಿಗೆ ದಂಡ ವಿಧಿಸಲು ನಿರ್ಧರಿಸಿದೆ.
ಗ್ರಾಹಕರಿಗೆ ಏನು ಲಾಭ?:
ಬ್ಯಾಂಕ್ಗಳು ಮತ್ತು ಎಟಿಎಂಗಳಿಗೆ ನಗದು ತುಂಬಿಸುವ ಸೇವೆಯನ್ನು ನಿರ್ವಹಿಸುತ್ತಿರುವ ಸಂಸ್ಥೆ ಅಥವಾ ಕಂಪೆನಿಗಳು ಎಟಿಎಂಗಳ ಮರುಪೂರಣದ ಕುರಿತು ಆರ್ಬಿಐನ ಹೊಸ ಮಾರ್ಗಸೂಚಿಯನ್ನು ಅನುಸರಿ ಸಲೇಬೇಕಿದೆ. ಸಾರ್ವಜನಿಕರಿಗೆ ಅಡೆತಡೆಯಿಲ್ಲದೆ ಸಾಕಷ್ಟು ಪ್ರಮಾಣದಲ್ಲಿ ನಗದು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎಟಿಎಂಗಳಲ್ಲಿ ನಗದು ನಿರ್ವಹಣೆಯನ್ನು ಮುನ್ಸೂಚಿಸಲು ಬ್ಯಾಂಕ್ಗಳು ಡೇಟಾ ಚಾಲಿತ ವಿಧಾನವನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.
ಯಾಕಾಗಿ ಈ ನಿಯಮ? :
ಎಟಿಎಂ ಯಂತ್ರಗಳಿಗೆ ನಗದು ತುಂಬಿಸಲು ಆರ್ಬಿಐ ರೂಪಿಸಿರುವ ಹೊಸ ನಿಯಮಗಳನ್ನು ಬ್ಯಾಂಕ್ಗಳು ಪಾಲನೆ ಮಾಡದೇ ಇದ್ದಲ್ಲಿ ದಂಡ ತೆರಬೇಕಾಗುತ್ತದೆ. ಈ ಹೊಸ ನಿಯಮವು ಅಕ್ಟೋಬರ್ 1ರಂದು ಜಾರಿಯಾಗಲಿದ್ದು, ಎಟಿಎಂಗಳಲ್ಲೇ ಸಾಕಷ್ಟು ನಗದು ಸಾರ್ವಜನಿಕರಿಗೆ ಲಭ್ಯವಾಗಲಿದೆ. ಈ ಮೂಲಕ ಬ್ಯಾಂಕ್ ಶಾಖೆಗಳಿಂದ ನಗದು ವಿಥ್ಡ್ರಾ ಪ್ರಮಾಣ ಕಡಿಮೆ ಗೊಳ್ಳಲಿದೆ ಎಂಬ ಲೆಕ್ಕಾಚಾರ ಆರ್ಬಿಐನದ್ದಾಗಿದೆ. ಅಷ್ಟು ಮಾತ್ರವಲ್ಲದೆ ದೇಶ ದಲ್ಲಿ ಡಿಜಿಟಲ್ ವ್ಯವಹಾರಕ್ಕೆ ಸರಕಾರ ಹೆಚ್ಚಿನ ಉತ್ತೇಜನ ನೀಡುತ್ತಿರುವುದರಿಂದ ಇದರ ಭಾಗವಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲು ಸರಕಾರ ಮುಂದಾಗಿದೆ ಎಂಬ ಅನುಮಾನ ಜನರನ್ನು ಕಾಡತೊಡಗಿತ್ತು. ಇದೀಗ ಆರ್ಬಿಐ ಎಟಿಎಂಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಗದು ಲಭ್ಯವಿರುವುದನ್ನು ಖಾತರಿಪಡಿಸಬೇಕು ಎಂದು ಕಟ್ಟಾಜ್ಞೆ ಹೊರಡಿಸುವ ಮೂಲಕ ಜ®ರಲ್ಲಿನ ಅನುಮಾನವನ್ನು ದೂರ ಮಾಡಿದೆ.
ದಂಡದ ಪ್ರಮಾಣ ಎಷ್ಟು? :
ಅ. 1ರಿಂದ ಒಂದು ತಿಂಗಳಲ್ಲಿ ಎಟಿಎಂಗಳು ಒಟ್ಟು 10 ಗಂಟೆಗಳ ಕಾಲ ನಗದು ರಹಿತವಾಗಿದ್ದರೆ ಆರ್ಬಿಐ ಬ್ಯಾಂಕ್ಗಳಿಗೆ ದಂಡ ವಿಧಿಸುತ್ತದೆ. ದಂಡದ ಪ್ರಮಾಣಕ್ಕೆ ಸಂಬಂಧಿಸಿ ತಿಂಗಳಲ್ಲಿ 10 ಗಂಟೆಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಯಾವುದೇ ಎಟಿಎಂನಲ್ಲಿ ನಗದು ಇಲ್ಲದೇ ಇದ್ದರೆ ಆಗ 10 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಆರ್ಬಿಐ ಸ್ಪಷ್ಟ ಸೂಚನೆಯನ್ನು ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ